ರಾಮನಗರ: ಮಕ್ಕಳಿಗೆ ಅಂಗನವಾಡಿಗಳೇ ಮೊದಲ ಪಾಠಶಾಲೆಯ ಅಡಿಗಲ್ಲುಗಳಾಗಿವೆ ಎಂದು ಶಾಸಕ ಇಕ್ಬಾಲ್ ಹುಸೇನ್ ಹೇಳಿದರು.
ಮಾಯಗಾನಹಳ್ಳಿ ಗ್ರಾಪಂ ವ್ಯಾಪ್ತಿಯ ಕೆಲವು ಹಳ್ಳಿಗಳ ಜನರು ಪಟ್ಟಣಕ್ಕೆ ಬಂದು ಹೋಗಲು ಬೆಂಗಳೂರು-ಮೈಸೂರು ಮುಖ್ಯ ರಸ್ತೆಗೆ ಬರಬೇಕಿದೆ. ಜೊತೆಗೆ ಆಟೋಗಳನ್ನು ಅವಲಂಬಿಸಬೇಕಿದೆ. ಈ ಬಗ್ಗೆ ಸಾರ್ವಜನಿಕರು ನನ್ನ ಗಮನ ಸಹ ಸೆಳೆದಿದ್ದರು. ಹಾಗಾಗಿ ರಾಮನಗರದಿಂದ ಅರಳಿಮರದದೊಡ್ಡಿಗೆ ಮಾರ್ಚ್ 2ರಂದು ಬಸ್ಸಿನ ಸಂಚಾರಕ್ಕೆ ಪೂಜೆ ನೆರವೇರಿಸಿ ಚಾಲನೆ ನೀಡಲಾಗುವುದು. ಇದರಿಂದ ಬಸವನಪುರ, ಅರಳಿಮರದದೊಡ್ಡಿ ಗ್ರಾಮದ ಜನರಿಗೆ, ವಿದ್ಯಾರ್ಥಿಗಳಿಗೆ ಹೆಚ್ಚು ಅನುಕೂಲವಾಗಲಿದೆ ಎಂದು ತಿಳಿಸಿದರು.
ಈ ವೇಳೆ ಜಿಪಂ ಉಪ ಕಾರ್ಯದರ್ಶಿ (ಪ್ರಭಾರ) ಶಿವಕುಮಾರ್, ಸಿಡಿಪಿಒ ಕಾಂತರಾಜು, ಕಾಂಗ್ರೆಸ್ ಮುಖಂಡರಾದ ವಿನೋದ್, ಸುರೇಶ್, ಗ್ರಾಪಂ ಮಾಜಿ ಅಧ್ಯಕ್ಷರಾದ ಪ್ರಕಾಶ್, ಎಂ.ಎಚ್.ರಂಜಿತ್, ಮಾಜಿ ಸದಸ್ಯ ನಾಗರಾಜು, ಜಿಲ್ಲಾ ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ಗುರುಪ್ರಸಾದ್, ಮುಖಂಡರಾದ ಸುರೇಶ್, ವಿನೋದ್ ಬಿ.ಆರ್, ಆಂಜನಿ, ಅಂಜನೇಯ, ಸಿದ್ದರಾಜು, ನಿಂಗೇಗೌಡ, ಸತೀಶ್, ಸುರೇಶ್, ನಂದೀಶ್, ಅಜಯ್, ಪುನಿತ್, ಅರುಣ್, ಗೋವಿಂದಯ್ಯ, ಪಿಡಿಒ ಮಾದೇಗೌಡ ಮತ್ತಿತರರು ಹಾಜರಿದ್ದರು.25ಕೆಆರ್ ಎಂಎನ್ 4.ಜೆಪಿಜಿ