ಕನ್ನಡಪ್ರಭ ವಾರ್ತೆ ಎಚ್.ಡಿ. ಕೋಟೆ
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ವಿಧಾನ ಪರಿಷತ್ತಿನ ಶಿಕ್ಷಕರ ಕ್ಷೇತ್ರದ ಅಭ್ಯರ್ಥಿ ಮರಿತಿಬ್ಬೇಗೌಡರವರ ಪರವಾಗಿ ಮತಯಾಚನೆ ಮಾಡಿ ಅವರು ಮಾತನಾಡಿದರು.
ನಾಲ್ಕು ಕೋಟಿ ಅನುದಾನವನ್ನು ಈ ಕಾಲೇಜಿನ ಅಭಿವೃದ್ಧಿಗೆ ತಮ್ಮ ಅಧಿಕಾರವಧಿಯಲ್ಲಿ ಬಿಡುಗಡೆ ಮಾಡಿಸಲಾಗಿದೆ. ಮುಂದಿನ ದಿನಗಳಲ್ಲೂ ಕಾಲೇಜಿನ ಅಭಿವೃದ್ಧಿಗೆ ಹೆಚ್ಚಿನ ಅನುದಾನ ಬಿಡುಗಡೆ ಮಾಡಿಸಲು ಪ್ರಯತ್ನಿಸಲಾಗುವುದು ಎಂದರು.ಶಿಕ್ಷಕರಿಗೆ ತೊಂದರೆಯಾದಾಗ ಸದನದಲ್ಲಿ ಮರಿತಿಬ್ಬೇಗೌಡರವರು ಎದ್ದು ನಿಂತು ಶಿಕ್ಷಕರ ಪರವಾಗಿ ಧನಿಯಾಗುತ್ತಿದ್ದರು, ಶಿಕ್ಷಕರು ಸಮಸ್ಯೆ ಪರಿಹಾರವಾಗುವವರೆಗೂ ಹೋರಾಟ ನಡೆಸುತ್ತಿದ್ದರು ಎಂದರು.
ಮೈಮುಲ್ ನಿರ್ದೇಶಕ ಈರೇಗೌಡ, ಪುರಸಭಾ ಸದಸ್ಯ ಎಚ್.ಸಿ. ನರಸಿಂಹಮೂರ್ತಿ, ನರಸೀಪುರ ರವಿ, ಕಾವೇರ, ಶಿವಯ್ಯ, ಶಿವರಾಜು, ಬ್ಲಾಕ್ ಅಧ್ಯಕ್ಷ ಏಜಾಜ್ ಪಾಷ, ಸಿದ್ದರಾಮು, ಗಣೇಶಾಚಾರ್, ಕಾಲೇಜಿನ ಪ್ರಾಂಶುಪಾಲರಾದ ಅರುಣ್ ಕುಮಾರ್, ಉಪನ್ಯಾಸಕರಾದ ಕೆಂಪರಾಜು, ಪುಟ್ಟರಾಜು, ಪುಷ್ಪಲತಾ, ಗುರುದತ್ ಕಾಮತ್, ಪೂರ್ಣಿಮಾ, ಮಾದಮ್ಮ, ಭೈರೇಗೌಡ, ಮುಖ್ಯೊಪಾಧ್ಯಾಯಿನಿ ನಂದಿನಿ, ಶಿಕ್ಷಕರಾದ ಕೈಸರ್ ಪಾಷ, ರಾಜೇಗೌಡ, ಸಂತೋಷ್ ಕುಮಾರ್, ಎ.ಸಿ. ಭೈರಪ್ಪ, ಸ್ವಾಮಿನಾಯಕ್, ಚನ್ನಪ್ಪಾಜಿ ಇದ್ದರು.
ಕನ್ನಡಪ್ರಭ ವಾರ್ತೆ ಮೈಸೂರು
ಶೈಕ್ಷಣಿಕ ಕ್ಷೇತ್ರದಲ್ಲಿ ಶಿಕ್ಷಕರ, ಉಪನ್ಯಾಸಕರ ಬೇಡಿಕೆಗಳು, ಹಲವಾರು ವರ್ಷಗಳಿಂದ ಬಗೆಹರಿಯದಿಲ್ಲ. ಅವುಗಳನ್ನು ಸೃಷ್ಟಿಸಿ, ಪೋಷಿಸಿ, ಅಲ್ಪ ಸ್ವಲ್ಪ ಬಗೆಹರಿಸಿ ಇನ್ನೂ ರಕ್ಷಣಾ ಕವಚವಾಗಿ ಇರಿಸಿಕೊಂಡು ಬರಲಾಗುತ್ತಿದೆ. ಆಳುವವರ ಧೋರಣೆ, ಆಯ್ಕೆಯಾದ ಜನಪ್ರತಿನಿಧಿಗಳ ಅಸಹಾಯಕತೆ, ಗೆದ್ದ ನಂತರದ ದಿನಗಳಲ್ಲಿ ಶಿಕ್ಷಕ ಸಮುದಾಯವನ್ನು ಕಡೆಗಣಿಸಿ ದೂರವೇ ಉಳಿಯುವುದು, ಇಂತಹ ಘಟನೆಗಳು ಹಲವಾರು ಭಾರಿ ನಮ್ಮ ಶಿಕ್ಷಣ ಸಂಘಟನೆಗಳಿಗೆ ಆಗಿದೆ ಎಂದಿದ್ದಾರೆ.
ಸ್ಪರ್ಧಿಸಿರುವವರಲ್ಲಿ ಯಾರು ಪ್ರಾಮಾಣಿಕವಾಗಿ, ಸದಾ ಸಕಾರಾತ್ಮಕವಾಗಿ ಸ್ಪಂದಿಸುವ ಮನೋಭಾವ ಇರಿಸಿಕೊಂಡು ಶಿಕ್ಷಕರ, ಉಪನ್ಯಾಸಕರ ಪರವಾಗಿ ಕೆಲಸವನ್ನು ಮಾಡುವ ಸೇವಾ ಮನೋಭಾವದ ಅಭ್ಯರ್ಥಿಗಳಿದ್ದರೆ ಅವರನ್ನು ನಮ್ಮ ಮನಸ್ಸಿನ ಇತರ ವಿಷಯಗಳು ಗೌಣವಾಗಿಸಿ, ಯಾವುದೇ ಆಸೆ ಆಮಿಷಗಳಿಗೆ ಬಲಿಯಾಗದೆ ನಾವು ಮತ ಚಲಾಯಿಸುವ ಮೂಲಕ ಶೈಕ್ಷಣಿಕ ಪ್ರಗತಿಗೆ, ವಿದ್ಯಾರ್ಥಿ ಶಿಕ್ಷಣಕ್ಕೆ ನೆರವಾಗೋಣ ಎಂದು ವೇದಿಕೆಯ ಜಿ. ನಂಜುಂಡ, ಕಾಡ್ನೂರು ಶಿವೇಗೌಡ, ಆರ್. ರಾಜಗೋಪಾಲ್, ಚಿದಂಬರ್, ವೀರರಾಜು, ಚಂದ್ರೇಗೌಡ, ತುಳಸೀ ದಾಸ್, ಪ್ರವೀಣ್ ಮಹಿಷಿ, ಕೆಸರೆ ನಂಜುಂಡಸ್ವಾಮಿ, ಭಗವಾನ್, ಮಂಜುನಾಥ, ಲೇಪಾಕ್ಷಿಗೌಡ, ಪರಮೇಶ್ ತಿಳಿಸಿದ್ದಾರೆ.