ರಾಮನಗರ: ಚನ್ನಪಟ್ಟಣ ಉಪಚುನಾವಣೆ ಕಾರಣದಿಂದಾಗಿ ಬಾಕಿ ಉಳಿದಿದ್ದ ರಾಮನಗರ ಹಾಗೂ ಚನ್ನಪಟ್ಟಣ ನಗರಸಭೆ ಅಧ್ಯಕ್ಷ- ಉಪಾಧ್ಯಕ್ಷ ಸ್ಥಾನಗಳಿಗೆ ಡಿಸೆಂಬರ್ ಮೊದಲ ವಾರದಲ್ಲಿ ದಿನಾಂಕ ನಿಗದಿಗೊಳ್ಳುವ ಸಾಧ್ಯತೆಗಳಿವೆ.
ರಾಮನಗರ ಮತ್ತು ಚನ್ನಪಟ್ಟಣ ನಗರಸಭೆ ಅಧ್ಯಕ್ಷ - ಉಪಾಧ್ಯಕ್ಷರ ಸ್ಥಾನಗಳು ಕಳೆದ ಐದೂವರೆ ತಿಂಗಳಿನಿಂದ ಖಾಲಿಯಿದೆ. ಈ ಮಧ್ಯೆ ಚನ್ನಪಟ್ಟಣ ಉಪಚುನಾವಣೆ ಘೋಷಣೆಯಾದ ಹಿನ್ನೆಲೆಯಲ್ಲಿ ಕಾನೂನು ಸುವ್ಯವಸ್ಥೆ ನೆಪವೊಡ್ಡಿ ನಗರಸಭೆ ಚುನಾವಣೆಗೆ ತಡೆವೊಡ್ಡಲಾಗಿತ್ತು.ರಾಮನಗರ - ಚನ್ನಪಟ್ಟಣ ನಗರಸಭೆ ವರಿಷ್ಠರ ಚುನಾವಣೆಗಳಿಗೂ ಉಪವಿಭಾಗಾಧಿಕಾರಿಗಳೇ ಚುನಾವಣಾಧಿಕಾರಿ ಗಳಾಗಿದ್ದಾರೆ. ಅಲ್ಲದೆ, ಚನ್ನಪಟ್ಟಣ ಉಪಚುನಾವಣೆಗೂ ಉಪವಿಭಾಗಾಧಿಕಾರಿಗಳೇ ಚುನಾವಣಾಧಿಕಾರಿಗಳಾಗಿಯೂ ನಿಯೋಜನೆಗೊಂಡಿದ್ದರು. ಈಗ ಉಪಚುನಾವಣೆ ಪ್ರಕ್ರಿಯೆ ಪೂರ್ಣಗೊಂಡ ಹಿನ್ನೆಲೆಯಲ್ಲಿ ಡಿಸೆಂಬರ್ ಮೊದಲ ವಾರದಲ್ಲಿಯೇ ಎರಡು ನಗರಸಭೆ ಅಧ್ಯಕ್ಷ - ಉಪಾಧ್ಯಕ್ಷರ ಚುನಾವಣೆಗೆ ಘೋಷಣೆ ಮಾಡಲು ಸಿದ್ಧತೆ ಮಾಡಿಕೊಂಡಿದ್ದಾರೆ.
ನಗರಸಭೆ ಅಧ್ಯಕ್ಷ - ಉಪಾಧ್ಯಕ್ಷ ಸ್ಥಾನಗಳ ಮೀಸಲಾತಿ 30 ತಿಂಗಳಿಗೊಮ್ಮೆ ಬದಲಾವಣೆ ಆಗುತ್ತದೆ. ರಾಮನಗರ ನಗರಸಭೆಯ ಮೊದಲ ಅವಧಿಯ 30 ತಿಂಗಳಲ್ಲಿ ಮೂವರು ಅಧ್ಯಕ್ಷರು ಆಡಳಿತ ನಡೆಸಿದರೆ, ಚನ್ನಪಟ್ಟಣ ನಗರಸಭೆಯಲ್ಲಿ ಮೊದಲ ಅಧಿಯಲ್ಲಿ ಪ್ರಶಾಂತ್ ಅಧ್ಯಕ್ಷರಾಗಿದ್ದರು. ಇವರಿಬ್ಬರ ಅವಧಿ ಮೇ ತಿಂಗಳಲ್ಲಿ ಪೂರ್ಣಗೊಂಡಿತ್ತು.ನಗರಾಭಿವೃದ್ಧಿ ಇಲಾಖೆ ಆಗಸ್ಟ್ ತಿಂಗಳಲ್ಲಿಯೇ ನಗರಸಭೆಯ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳಿಗೆ ಮೀಸಲಾತಿ ಪ್ರಕಟಿಸಿದೆ. ಅದರಂತೆ ರಾಮನಗರ ನಗರಸಭೆ ಅಧ್ಯಕ್ಷ ಸ್ಥಾನ ಸಾಮಾನ್ಯ ಮತ್ತು ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿದೆ. ಚನ್ನಪಟ್ಟಣ ನಗರಸಭೆ ಅಧ್ಯಕ್ಷ ಸ್ಥಾನ ಬಿಸಿಎಂ (ಎ) ಮತ್ತು ಉಪಾಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿಗೆ ಮೀಸಲು ನಿಗದಿಯಾಗಿದೆ.
ಕೋಟ್ .............ಚನ್ನಪಟ್ಟಣ ಉಪಚುನಾವಣೆ ಕಾರಣದಿಂದಾಗಿ ರಾಮನಗರ ಮತ್ತು ಚನ್ನಪಟ್ಟಣ ನಗರಸಭೆ ಅಧ್ಯಕ್ಷ - ಉಪಾಧ್ಯಕ್ಷರ ಚುನಾವಣೆ ನಡೆಸುವುದು ವಿಳಂಬವಾಯಿತು. ಡಿಸೆಂಬರ್ ಮೊದಲ ವಾರದಲ್ಲಿಯೇ ಚುನಾವಣೆ ದಿನಾಂಕ ಘೋಷಣೆ ಮಾಡುತ್ತೇವೆ.
- ಪಿ.ಕೆ.ಬಿನೋಯ್, ಉಪವಿಭಾಗಾಧಿಕಾರಿ, ರಾಮನಗರಕೋಟ್ .................ರಾಮನಗರ ನಗರಸಭೆ ಅಧ್ಯಕ್ಷ ಸ್ಥಾನದ ಆಕಾಂಕ್ಷಿತರು ಮತ್ತು ಸದಸ್ಯರ ಸಭೆ ನಡೆಸಿ ಅಭಿಪ್ರಾಯ ಸಂಗ್ರಹಿಸುತ್ತೇವೆ. ಎಲ್ಲರು ಕಾಂಗ್ರೆಸ್ ಸದಸ್ಯರೇ ಇರುವ ಕಾರಣ ಈಗಿರುವ ಸದಸ್ಯರಲ್ಲಿಯೇ ಒಮ್ಮತದಿಂದ ಅಧಿಕಾರ ಹಂಚಿಕೆ ಮಾಡುತ್ತೇವೆ.- ಇಕ್ಬಾಲ್ ಹುಸೇನ್, ಶಾಸಕರು, ರಾಮನಗರ ಕ್ಷೇತ್ರ
ಬಾಕ್ಸ್ ......................ರಾಮನಗರ ನಗರಸಭೆಯಲ್ಲಿ ಸಾಮಾನ್ಯಕ್ಕೆ ಮೀಸಲಾಗಿರುವ ಅಧ್ಯಕ್ಷ ಸ್ಥಾನಕ್ಕೆ ಆಕಾಂಕ್ಷಿಗಳ ಸಂಖ್ಯೆಯೂ ಹೆಚ್ಚಾಗಿದೆ. ಬಹುಮತ ಹೊಂದಿರುವ ಕಾಂಗ್ರೆಸ್ ಅಧಿಕಾರ ಹಂಚಿಕೆ ಸೂತ್ರ ಅನುಸರಿಸುವುದು ನಿಶ್ಚಿತವಾಗಿದ್ದು, ಅದರಲ್ಲಿ ಪಕ್ಷ ನಿಷ್ಠೆ, ಸಂಘಟನೆ, ರಾಜಕೀಯ ಅನುಭವದ ಆಧಾರದ ಮೇಲೆ ಯಾರಿಗೆ ಮೊದಲ ಆದ್ಯತೆ ನೀಡಬೇಕೆಂಬುದಷ್ಟೇ ತೀರ್ಮಾನ ಆಗಬೇಕಿದೆ.
ಈ ಮೊದಲನಿಂದಲೂ ಅಧ್ಯಕ್ಷ ಸ್ಥಾನಕ್ಕೆ ಸದಸ್ಯರಾದ ದೌಲತ್ ಷರೀಫ್ , ನಿಜಾಮುದ್ದೀನ್ ಷರೀಫ್ ಹಾಗೂ ಮುತ್ತುರಾಜ್ ಪ್ರಬಲ ಆಕಾಂಕ್ಷಿಗಳಾಗಿದ್ದಾರೆ. ಇನ್ನು ಅನುಭವಿ ರಾಜಕಾರಣಿಯಾಗಿರುವ ಸದಸ್ಯ ಕೆ.ಶೇಷಾದ್ರಿ(ಶಶಿ) ಅವರೇ ಅಧ್ಯಕ್ಷರಾಗಬೇಕೆಂದು ಕೆಲ ಸದಸ್ಯರು ಒತ್ತಡ ಹೇರುತ್ತಿದ್ದಾರೆ. ಎಂಇಐ ಮಾಜಿ ಅಧ್ಯಕ್ಷರು ಆದ ಕೆ.ಶೇಷಾದ್ರಿ ಅವರಿಗೆ ನಿಗಮ ಮಂಡಳಿಯಲ್ಲಿ ಅಧ್ಯಕ್ಷ ಸ್ಥಾನ ಕಲ್ಪಿಸಿ, ಉಳಿದ ಮೂವರು ಸದಸ್ಯರಿಗೆ ಅಧಿಕಾರ ಹಂಚಿಕೆ ಮಾಡಲು ಪಕ್ಷದ ವರಿಷ್ಠರು ಚಿಂತನೆ ನಡೆಸಿದ್ದಾರೆ ಎಂದು ಕಾಂಗ್ರೆಸ್ ನ ಬಲ್ಲ ಮೂಲಗಳು ತಿಳಿಸಿವೆ.ಬಾಕ್ಸ್ ................
ಚನ್ನಪಟ್ಟಣ ನಗರಸಭೆ ಅಧ್ಯಕ್ಷ ಸ್ಥಾನ ಬಿಸಿಎಂ(ಎ) ಹಾಗೂ ಉಪಾಧ್ಯಕ್ಷ ಪರಿಶಿಷ್ಟಜಾತಿಗೆ ಮೀಸಲಾಗಿದ್ದು, ಆಕಾಂಕ್ಷಿಗಳ ಸಂಖ್ಯೆಯೂ ಹೆಚ್ಚಾಗಿದೆ. 31 ಸದಸ್ಯ ಬಲದ ನಗರಸಭೆಯಲ್ಲಿ ಜೆಡಿಎಸ್ 16 ಸದಸ್ಯರು, ಬಿಜೆಪಿಯಿಂದ 7, ಕಾಂಗ್ರೆಸ್ ನಿಂದ 7 ಸದಸ್ಯರು ಹಾಗೂ ಒಬ್ಬರು ಪಕ್ಷೇತರ ಸದಸ್ಯೆ ಆಯ್ಕೆಯಾಗಿದ್ದರು. ಇದರದಲ್ಲಿ ಜೆಡಿಎಸ್ ನ ಹದಿನೈದು ಮಂದಿ ಕಾಂಗ್ರೆಸ್ ಗೆ ಸೇರ್ಪಡೆಗೊಂಡಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಇದರಲ್ಲಿ ಇಬ್ಬರು ಸದಸ್ಯರು ಮತ್ತೆ ಜೆಡಿಎಸ್ ನೊಂದಿಗೆ ಒಡನಾಟದಲ್ಲಿದ್ದಾರೆ. ಇನ್ನು ಬಿಜೆಪಿಯ ಏಳು ಮಂದಿ ಸದಸ್ಯರಲ್ಲಿ ಆರು ಮಂದಿ ಶಾಸಕರ ಯೋಗೇಶ್ವರ್ ಜತೆ ಗುರುತಿಸಿಕೊಂಡಿದ್ದು, ವಿಧಾನಸಭೆ ಉಪಚುನಾವಣೆ ವೇಳೆ ಕಾಂಗ್ರೆಸ್ ಸೇರ್ಪಡೆಗೊಂಡಿದ್ದಾರೆ. ಇದರೊಂದಿಗೆ ನಗರಸಭೆಯಲ್ಲಿ ಕಾಂಗ್ರೆಸ್ 27 ಸದಸ್ಯರ ಬಲ ಹೊಂದಿದೆ. ಅಧ್ಯಕ್ಷ ಸ್ಥಾನಕ್ಕೆ ಹಿರಿಯ ಸದಸ್ಯ ವಾಸೀಲ್ ಅಲಿಖಾನ್, ಶಾಬೀರ್, ಮತೀನ್, ನಾಗೇಶ್, ರೇವಣ್ಣ ಆಕಾಂಕ್ಷಿಯಾಗಿದ್ದಾರೆ. ನಗರಸಭೆ ಅಧ್ಯಕ್ಷ ಗಾದಿಯ ಚೆಂಡು ಇದೀಗ ನೂತನ ಶಾಸಕ ಸಿ.ಪಿ.ಯೋಗೇಶ್ವರ್ ಅಂಗಳದಲ್ಲಿದ್ದು, ಒಬ್ಬರಿಗೆ ಅಧಿಕಾರ ನೀಡುವರೇ, ಇಲ್ಲ ಅಧಿಕಾರ ಹಂಚಿಕೆ ಸೂತ್ರ ಅನುಸರಿಸುವರೇ ಎಂದು ಕಾದುನೋಡಬೇಕಿದೆ.(ಎರಡು ಫೋಟೋ ಬಳಸಿ)
30ಕೆಆರ್ ಎಂಎನ್ 2,3.ಜೆಪಿಜಿ2.ರಾಮನಗರ ನಗರಸಭೆ
3.ಚನ್ನಪಟ್ಟಣ ನಗರಸಭೆ