ಸೇಡಂ ಪಂಚಲಿಂಗೇಶ್ವರ ಮಂದಿರದಲ್ಲಿ 26ರಂದು `ಅಮ್ಮ ಪ್ರಶಸ್ತಿ'' ಪ್ರದಾನಕನ್ನಡಪ್ರಭ ವಾರ್ತೆ ಕಲಬುರಗಿ
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಕೆ.ಪಿ. ಮೃತ್ಯುಂಜಯ ಅವರ `ಉಳಿದುಬಿಡು ಒಂದು ಬಿಂದುವಾಗಿ'''''''' ಮತ್ತು ಚೈತ್ರಾ ಶಿವಯೋಗಿಮಠ `ಪೆಟ್ರಿಕೋರ್'''''''' (ಕಾವ್ಯ), ದಯಾ ಗಂಗನಘಟ್ಟ `ಉಪ್ಪುಚ್ಚಿ ಮುಳ್ಳು'''''''' ಮತ್ತು ಕೃಷ್ಣನಾಯಕ `ಕಾಂತಾಮಣಿಯ ಕನಸುಗಳು'''''''' (ಕಥೆ), ಸಂತೋಷಕುಮಾರ ಮೆಹಂದಳೆ `ವೈಜಯಂತಿಪುರ'''''''' ಮತ್ತು ಡಾ.ಸಿ. ಚಂದ್ರಪ್ಪ `ಅಶೋಕ'''''''' (ಕಾದಂಬರಿ), ಡಾ.ಮಿರ್ಜಾ ಬಷೀರ್ `ಗಂಗೆ ಬಾರೆ ಗೌರಿ ಬಾರೆ'''''''' ಮತ್ತು ಸುಚಿತ್ರಾ ಹೆಗಡೆ `ಜಗವ ಸುತ್ತ'''''''' (ಸಂಕೀರ್ಣ), ನಾಗೇಶನಾಯಕ `ಕಾಡುವ ಕವಿತೆ (ವಿಮರ್ಶೆ) ಮತ್ತು ಡಾ.ಸ್ವಾಮಿರಾವ ಕುಲಕರ್ಣಿ `ದಾಸ ಸಾಹಿತ್ಯ: ದೃಷ್ಟಿ-ಸೃಷ್ಟಿ'''''''' ಕೃತಿಗಳನ್ನು 23ನೇ ವರ್ಷದ `ಅಮ್ಮ ಪ್ರಶಸ್ತಿ''''''''ಗೆ ಆಯ್ಕೆ ಮಾಡಲಾಗಿದೆ.
ಪ್ರಶಸ್ತಿಯು ತಲಾ 5000 ರು. ನಗದು ಪುರಸ್ಕಾರ, ನೆನಪಿನ ಕಾಣಿಕೆ, ಪ್ರಮಾಣ ಪತ್ರ, ಸತ್ಕಾರ ಮತ್ತು ಈ ನೆಲದ ಸಿರಿಧಾನ್ಯ ತೊಗರಿ ಬೇಳೆ ಒಳಗೊಂಡಿರುತ್ತದೆ. ಎಲ್ಲ ವಿಭಾಗದಲ್ಲಿ ಲೇಖಕರು ಪ್ರಶಸ್ತಿಯನ್ನು ಹಂಚಿಕೊಂಡಿದ್ದು, ಇದೇ ನ.26ರಂದು ಸಂಜೆ 5.30ಕ್ಕೆ ಸೇಡಮ್ನ ಪಂಚಲಿಂಗೇಶ್ವರ ದೇವಾಲಯದ ಶಾಂಭವಿ ರಂಗಮಂಟಪದಲ್ಲಿ ಜರುಗುವ ಸಮಾರಂಭದಲ್ಲಿ `ಅಮ್ಮ ಪ್ರಶಸ್ತಿ'''''''' ಪ್ರದಾನ ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ.ಅಮ್ಮ ಪ್ರಶಸ್ತಿಗೆ 23ರ ವರ್ಷದ ಸಂಭ್ರಮ:
ಪತ್ರಕರ್ತ-ಲೇಖಕ ಮಹಿಪಾಲರೆಡ್ಡಿ ಮುನ್ನೂರ್ ಅವರು ತಮ್ಮ ಅಮ್ಮನ ನೆನಪಿನಲ್ಲಿ ಸ್ಥಾಪಿಸಿದ `ಅಮ್ಮ ಪ್ರಶಸ್ತಿ''''''''ಗೆ ಈಗ 23 ನೇ ವರ್ಷದ ಸಂಭ್ರಮ. ಕನ್ನಡದ ಪ್ರತಿಭಾವಂತ ಬರಹಗಾರರು `ಅಮ್ಮ ಪ್ರಶಸ್ತಿ''''''''ಗಾಗಿ ತಮ್ಮ ಕೃತಿಗಳನ್ನು ಕಳುಹಿಸುವ ಮೂಲಕ ಪ್ರಶಸ್ತಿಯನ್ನು ಗುರುತಿಸಿದ್ದಾರೆ ಹಾಗೂ ಗೌರವಿಸಿದ್ದಾರೆ. ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನದ `ಅಮ್ಮ ಪ್ರಶಸ್ತಿ'''''''' ರಾಜ್ಯದ ಗಣನೀಯ ಪ್ರಶಸ್ತಿಗಳಲ್ಲಿ ಒಂದಾಗಬೇಕು ಎಂಬ ಪ್ರತಿಷ್ಠಾನದ ಆಶಯಕ್ಕೆ ಅನುಗುಣವಾಗಿ ನಾಡಿನ ಖ್ಯಾತ ಲೇಖಕರು, ಕವಿಗಳು, ಪ್ರಕಾಶಕರು ಮತ್ತು ಲೇಖಕರ ಅಭಿಮಾನಿ ಓದುಗರು ಸ್ಪಂದಿಸಿದ್ದೇ ಇದೊಂದು ಗೌರವಾನ್ವಿತ ಪ್ರಶಸ್ತಿಯಾಗಿ ರೂಪುಗೊಂಡಿದೆ ಎಂಬುದಕ್ಕೆ ಸಾಕ್ಷಿ ಎಂದು ಅವರು ತಿಳಿಸಿದ್ದಾರೆ.