ನಾಪೋಕ್ಲು: ಇಲ್ಲಿಗೆ ಸಮೀಪದ ಮೂರ್ನಾಡು ಮಾರುತಿ ಪದವಿಪೂರ್ವ ಕಾಲೇಜಿನ ದ್ವಿತೀಯ ಪಿ. ಯು. ಸಿ ವಿದ್ಯಾರ್ಥಿನಿ ಅನುಶಿಕ ಬೋಜಮ್ಮ ಬಿ. ಸಿ ರಾಜ್ಯ ಮಟ್ಟಕ್ಕೆ ಆಯ್ಕೆ ಆಗಿದ್ದಾರೆ.
----------------------------------------------------
ಸೋಮವಾರಪೇಟೆ ತಾಲೂಕು ಕಸಾಪ ಸಭೆ: ಐಗೂರಿನಲ್ಲಿ ತಾಲೂಕು ಸಮ್ಮೇಳನಕ್ಕೆ ನಿರ್ಣಯಕನ್ನಡಪ್ರಭವಾರ್ತೆ ಸೋಮವಾರಪೇಟೆಕನ್ನಡ ಸಾಹಿತ್ಯ ಪರಿಷತ್ ಕಸಬ ಹೋಬಳಿ ಘಟಕದ ಸಭೆ ಪಟ್ಟಣದ ಸಾಹಿತ್ಯ ಭವನದಲ್ಲಿ ಅಧ್ಯಕ್ಷ ನಂಗಾರು ಕೀರ್ತಿ ಅಧ್ಯಕ್ಷತೆಯಲ್ಲಿ ಬುಧವಾರ ನಡೆಯಿತು.
ಐಗೂರು ಗ್ರಾಮದಲ್ಲಿ ಸೋಮವಾರಪೇಟೆ ತಾಲೂಕು ಸಾಹಿತ್ಯ ಸಮ್ಮೇಳನವನ್ನು ಮುಂದಿನ ದಿನಗಳಲ್ಲಿ ನಡೆಸುವ ಬಗ್ಗೆ ಸುದೀರ್ಘ ಚರ್ಚೆ ನಡೆಯಿತು. ಕನ್ನಡ ಮನಸ್ಸುಗಳನ್ನು ಒಗ್ಗೂಡಿಸಿಕೊಳ್ಳುವ ಕೆಲಸವನ್ನು ಮಾಡಬೇಕಿದೆ. ಈ ಹಿಂದೆ ಗೌಡಳ್ಳಿಯಲ್ಲಿ ಅರ್ಥಪೂರ್ಣವಾಗಿ ತಾಲೂಕು ಸಮ್ಮೇಳನವನ್ನು ಆಚರಿಸಲಾಯಿತು. ಕನ್ನಡ ಭಾಷಾಭಿಮಾನಿಗಳು ಹಾಗು ದಾನಿಗಳು ಸಹಕಾರದಿಂದ ಸಮ್ಮೇಳನ ಯಶಸ್ವಿಯಾಗಿದ್ದು, ಆ ಮಾದರಿಯಲ್ಲೇ ಐಗೂರಿನಲ್ಲೂ ಸಮ್ಮೇಳನ ಯಶಸ್ವಿಗೊಳಿಸಬೇಕು ಎಂದು ಅಧ್ಯಕ್ಷರು ಹೇಳಿದರು.ಸಭೆಯಲ್ಲಿ ಶನಿವಾರಸಂತೆ ಹೋಬಳಿ ಘಟಕದ ಅಧ್ಯಕ್ಷ ಬಿ.ಬಿ.ನಾಗರಾಜ್, ಶಾಂತಳ್ಳಿ ಘಟಕದ ಅಧ್ಯಕ್ಷ ಸಿ.ಎಸ್. ನಾಗರಾಜ್ ಮಾತನಾಡಿದರು. ತಾಲೂಕು ಸಮಿತಿ ಸದಸ್ಯ ಎಂ.ಪಿ.ಧರ್ಮಪ್ಪ, ಕಸಬಾ ಹೋಬಳಿ ಘಟಕದ ಕಾರ್ಯದರ್ಶಿ ವಿಶ್ವರಾಜೇಅರಸ್, ಕೋಶಾಧಿಕಾರಿ ಎಸ್.ಎಂ.ಬೆಳ್ಯಪ್ಪ ಪದಾಧಿಕಾರಿಗಳಾದ ಮಚ್ಚಂಡ ಅಶೋಕ್, ತಿಮ್ಮಯ್ಯ ಇದ್ದರು.