ಸಮರ್ಪಕ ಮರಳು ಪೂರೈಕೆಗೆ ಕ್ರಮ ಕೈಗೊಳ್ಳಲು ಆಗ್ರಹಿಸಿ ಮನವಿ

KannadaprabhaNewsNetwork |  
Published : Nov 13, 2025, 01:00 AM IST
ಲಕ್ಷ್ಮೇಶ್ವರದಲ್ಲಿ ಕಾರ್ಮಿಕರು ತಹಸೀಲ್ದಾರ್ ಕೆ. ರಾಘವೇಂದ್ರ ಅವರಿಗೆ ಮನವಿ ಸಲ್ಲಿಸಿದರು. | Kannada Prabha

ಸಾರಾಂಶ

ಮರಳು ಸಿಗದ ಕಾರಣ ಕಟ್ಟಡ ಮಾಲೀಕರು ಕೆಲಸ ಬಂದ್ ಇಟ್ಟಿದ್ದಾರೆ. ಇದರಿಂದಾಗಿ ಕಾರ್ಮಿಕರಿಗೆ ಕೆಲಸ ಸಿಗದೆ ಉಪವಾಸ ಬೀಳುವ ಪರಿಸ್ಥಿತಿ ನಿರ್ಮಾಣವಾಗಿದೆ.

ಲಕ್ಷ್ಮೇಶ್ವರ: ಕಳೆದ ಎರಡು ತಿಂಗಳಿಂದ ಪಟ್ಟಣ ಸೇರಿದಂತೆ ತಾಲೂಕಿನಲ್ಲಿ ಸರಿಯಾಗಿ ಮರಳು ಪೂರೈಕೆ ಆಗುತ್ತಿಲ್ಲ. ಇದರಿಂದಾಗಿ ಕಟ್ಟಡ ಕಾರ್ಮಿಕರಿಗೆ ಕೆಲಸ ಇಲ್ಲದೆ ಕಂಗಾಲಾಗಿದ್ದಾರೆ. ಕಾರಣ ಯಾವುದೇ ಅಡೆತಡೆ ಇಲ್ಲದೆ ಮರಳು ಪೂರೈಕೆಯಾಗುವಂತೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಮಂಗಳವಾರ ತಾಲೂಕು ಕಟ್ಟಡ ಕಾರ್ಮಿಕರ ಸಂಘದ ಪರವಾಗಿ ತಹಸೀಲ್ದಾರ್ ಕೆ. ರಾಘವೇಂದ್ರ ಅವರಿಗೆ ಮನವಿ ಸಲ್ಲಿಸಿದರು.

ಸಂಘದ ಅಧ್ಯಕ್ಷ ದುರ್ಗಪ್ಪ ಬಿಂಜಡಗಿ, ದಾದಾಪೀರ್ ಜಮಖಂಡಿ ಮಾತನಾಡಿ, ಮರಳು ಸಿಗದ ಕಾರಣ ಕಟ್ಟಡ ಮಾಲೀಕರು ಕೆಲಸ ಬಂದ್ ಇಟ್ಟಿದ್ದಾರೆ. ಇದರಿಂದಾಗಿ ಕಾರ್ಮಿಕರಿಗೆ ಕೆಲಸ ಸಿಗದೆ ಉಪವಾಸ ಬೀಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಅಲ್ಲದೆ ದುಡಿಯಲು ಕೆಲಸ ಇಲ್ಲದ ಕಾರಣ ಬಹಳಷ್ಟು ಕಾರ್ಮಿಕರು ಕೆಲಸ ಹುಡುಕಿಕೊಂಡು ಬೇರೆ ರಾಜ್ಯ, ಜಿಲ್ಲೆಗಳಿಗೆ ವಲಸೆ ಹೋಗುತ್ತಿದ್ದಾರೆ. ತಿಂಗಳುಗಟ್ಟಲೆ ಮರಳು ಪೂರೈಕೆ ಆಗಿಲ್ಲ.

ಇದರಿಂದಾಗಿ ಕಾರ್ಮಿಕರು ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ. ಕಾರಣ ಮರಳು ಪೂರೈಕೆ ಆಗುವಂತೆ ಅಧಿಕಾರಿಗಳು ಸೂಕ್ತ ಕ್ರಮಕೈಗೊಂಡು ಕಾರ್ಮಿಕರ ಬದುಕಿಗೆ ಆಸರೆ ಆಗಬೇಕು ಎಂದು ಮನವಿ ಮಾಡಿದರು.ಕಾನೂನಿನ ಪ್ರಕಾರ ಮರಳು ಪೂರೈಕೆ ಮಾಡಬೇಕು. ಕೆಲವರು ಹಣದಾಸೆಗಾಗಿ ಬೇಕಾಬಿಟ್ಟಿ ಮರಳು ಸಾಗಿಸುತ್ತಿದ್ದರು. ಅದಕ್ಕೆ ಕಡಿವಾಣ ಹಾಕಲಾಗಿದೆ. ಭೂಗರ್ಭ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ಮರಳು ಪೂರೈಕೆ ಆಗುವಂತೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಹಸೀಲ್ದಾರ್ ಕೆ. ರಾಘವೇಂದ್ರ ತಿಳಿಸಿದರು. ಈ ಸಂದರ್ಭದಲ್ಲಿ ಕಟ್ಟಡ ಕಾರ್ಮಿಕರಾದ ರಫೀಕ್ ಅತ್ತಿಗೇರಿ, ಬಿ.ಎಂ. ತಂಬಾಕದ, ಬಸೀರ್‌ಸಾಬ್ ಟಪಾಲ, ಸೋಮಪ್ಪ ಗಡದವರ, ಮೆಹಬೂಬ್ ಸಂಕ್ಲಿಪೂರ, ದುಡ್ಡುಸಾಬ್ ಕನಕವಾಡ, ಜಾಫರ್‌ಸಬ್ ಭೇಪಾರಿ, ನಂದೀಶ ಕ್ಯಾದಿಗೇರಿ, ರಾಜು ಕಳ್ಳಿ, ದುರಗಪ್ಪ ವಡ್ಡರ, ಮೌಲಾಲಿ ಶಿರಹಟ್ಟಿ, ಇಮ್ತಿಯಾಜ್ ಹೊಸಮನಿ, ಮಲ್ಲನಗೌಡ ಪಾಟೀಲ, ಯಪ್ಪಲ್ಲಗೌಡ ಪಾಟೀಲ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೆಂಗಳೂರು ನಗರದಲ್ಲಿ 2026ಕ್ಕೆ ಅದ್ಧೂರಿ ಸ್ವಾಗತ
ನಗುವ ಜಗದ ಅಳುವ ಬಯಸಿದ ಚಿರಕವಿ ಸಣಕಲ್ಲ