ನ್ಯಾಯಾಧೀಶರಿಗೆ ಶೂ ಎಸೆತ ಖಂಡಿಸಿ ಮನವಿ ಸಲ್ಲಿಕೆ

KannadaprabhaNewsNetwork |  
Published : Oct 09, 2025, 02:01 AM IST
ಪೋಟೋಕನಕಗಿರಿಯ ತಹಶೀಲ್ದಾರರ ಮೂಲಕ ರಾಷ್ಟ್ರಪತಿಗಳಿಗೆ ಸರ್ವೊಚ್ಛ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರಿಗೆ ಶೂ ಎಸೆದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಪ್ರಗತಿಪರ ಒಕ್ಕೂಟದಿಂದ ಮನವಿ ಸಲ್ಲಿಸಲಾಯಿತು.   | Kannada Prabha

ಸಾರಾಂಶ

ಮಧ್ಯಪ್ರದೇಶದ ಗ್ವಾಲಿಯರ ಕೋರ್ಟ್‌ ವಕೀಲ ಅಮಿತ್ ಮಿಶ್ರಾ ಅಂಬೇಡ್ಕರ್ ಕೊಳಕು ಮನುಷ್ಯ, ಸುಳ್ಳುಗಾರ, ಬ್ರಿಟಿಷರ ಏಜೆಂಟ್,ಸವರ್ಣಿಯರ ಮೇಲೆ ನಡೆಯುತ್ತಿರುವ ದೌರ್ಜನ್ಯಕ್ಕೆ ಅಂಬೇಡ್ಕರ್ ಕಾರಣ

ಕನಕಗಿರಿ: ಸರ್ವೋಚ್ಛ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರ ಕಡೆಗೆ ಶೂ ಎಸೆದ ವಕೀಲ ಹಾಗೂ ಬಿ.ಆರ್.ಅಂಬೇಡ್ಕರ್ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿರುವ ಅಮಿತ್ ಮಿಶ್ರಾ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ಆಗ್ರಹಿಸಿ ಪ್ರಗತಿಪರ ಸಂಘಟನೆಗಳ ಒಕ್ಕೂಟದಿಂದ ತಹಸೀಲ್ದಾರರ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲಾಯಿತು.

ಒಕ್ಕೂಟದ ಸಂಚಾಲಕ ಪಾಮಣ್ಣ ಅರಳಿಗನೂರು ಮಾತನಾಡಿ, ದೇಶದಲ್ಲಿ ನ್ಯಾಯಾಲಯ ಶ್ರೇಷ್ಠವಾಗಿದ್ದು, ನ್ಯಾಯಾಂಗ ವ್ಯವಸ್ಥೆಯಲ್ಲಿ ಸುಪ್ರೀಕೋರ್ಟ್ ಮೇಲುಸ್ಥರದಲ್ಲಿದೆ. ಅಂತಹ ನ್ಯಾಯಾಲಯದ ಮುಖ್ಯ ನ್ಯಾಯಾಧೀಶ ಬಿ.ಆರ್. ಗವಾಯಿಯವರಿಗೆ ಕೋರ್ಟ್ ಕಲಾಪ ನಡೆಯುತ್ತಿರುವಾಗಲೇ ನ್ಯಾಯಾಲಯದ ಹಾಲ್‌ನಲ್ಲಿರುವ ಮನುವಾದಿ ವಕೀಲ ಡಾ.ರಾಕೇಶ ಕಿಶೋರ ಅವರತ್ತ ಶೂ ಎಸೆದು ಇಡೀ ನ್ಯಾಯಾಂಗ ವ್ಯವಸ್ಥೆಗೆ ಅವಮಾನ ಮಾಡಿದ್ದಾನೆ. ಇದು ದೇಶದ ನ್ಯಾಯಾಂಗ ವ್ಯವಸ್ಥೆಯಲ್ಲಿ ನಡೆದ ಮೊದಲ ಘಟನೆಯಾಗಿದೆ. ಇದು ಸಂವಿಧಾನ ಬಾಹಿರ ಘಟನೆಯಾಗಿದ್ದು, ದೇಶದ್ರೋಹದ ಕೃತ್ಯವಾಗಿದೆ.ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಶದ ಮಾನ ಹರಾಜಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ದಲಿತ ಮುಖಂಡ ಸಣ್ಣ ಹನುಮಂತಪ್ಪ ಮಾತನಾಡಿ, ಮಧ್ಯಪ್ರದೇಶದ ಗ್ವಾಲಿಯರ ಕೋರ್ಟ್‌ ವಕೀಲ ಅಮಿತ್ ಮಿಶ್ರಾ ಅಂಬೇಡ್ಕರ್ ಕೊಳಕು ಮನುಷ್ಯ, ಸುಳ್ಳುಗಾರ, ಬ್ರಿಟಿಷರ ಏಜೆಂಟ್,ಸವರ್ಣಿಯರ ಮೇಲೆ ನಡೆಯುತ್ತಿರುವ ದೌರ್ಜನ್ಯಕ್ಕೆ ಅಂಬೇಡ್ಕರ್ ಕಾರಣ.ಅದಕ್ಕಾಗಿ ಗ್ವಾಲಿಯರ್ ಹೈಕೋರ್ಟ್ ಮುಂದೆ ಅಂಬೇಡ್ಕರ್ ಪ್ರತಿಮೆ ತೆಗೆದು ಬಿ.ಎನ್.ರಾವ್ ಪ್ರತಿಮೆ ಸ್ಥಾಪಿಸುತ್ತೇವೆ ಎಂದು ಹೇಳಿಕೆ ನೀಡಿರುವುದು ಖಂಡನೀಯ. ಈ ರೀತಿಯಲ್ಲಿ ಸಂವಿಧಾನ ವಿರೋಧಿ ಚಟುವಟಿಕೆ ನಡೆಸುತ್ತಿರುವ ಮನುವಾದಿಗಳ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಪ್ರಗತಿಪರ ಸಂಘಟನೆಗಳ ಒಕ್ಕೂಟ ಅಗ್ರಹಿಸಿದರು.

ಈ ಸಂದರ್ಭದಲ್ಲಿ ನಿಂಗಪ್ಪ ಪೂಜಾರ್, ನಾಗೇಶ ಬಡಿಗೇರ, ಚಂದುಸಾಬ್‌ ಗುರಿಕಾರ, ಸಣ್ಣ ದುರುಗಪ್ಪ, ಶೇಶಪ್ಪ ಪೂಜಾರಿ, ಸಣ್ಣ ದುರುಗಪ್ಪ, ಚಂದ್ರು ಬೇಕರಿ, ನೂರಸಾಬ್‌, ಹೊನ್ನೂರಪಾಷಾ, ಸುರೇಶ ಕುರುಗೋಡ, ಅಹಮ್ಮದ್ ಮೇಸ್ತ್ರಿ ಇತರರು ಇದ್ದರು.

PREV

Recommended Stories

ದಲಿತರಿಗೆ ದಿಲ್ಲಿಯಲ್ಲಿ ಸ್ಪರ್ಧಾತ್ಮಕ ಪರೀಕ್ಷಾ ಕೇಂದ್ರ : ಜಾರಕಿಹೊಳಿ
ತೀವ್ರ ಚಳಿ, ಜ್ವರ : ದೇವೇಗೌಡ ಆಸ್ಪತ್ರೆಗೆ, ಐಸಿಯುನಲ್ಲಿ ಚಿಕಿತ್ಸೆ