ಹಾನಗಲ್ಲ: ತಾಲೂಕಿನ ಯಲಿವಾಳ ಗ್ರಾಮದ ಬಳಿಯ ಮರೆಮ್ಮನ ಪ್ಲಾಟ್ ಕಂದಾಯ ಗ್ರಾಮವಾಗಿ ಘೋಷಿಸುವ ಮೂಲಕ ಸರ್ಕಾರದ ಸೌಲಭ್ಯಗಳು ದೊರೆಯುವಂತೆ ಉಪಕರಿಸಬೇಕು ಎಂದು ಗ್ರಾಮಸ್ಥರು ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ಅವರನ್ನು ಒತ್ತಾಯಿಸಿದರು.
ಇಲ್ಲಿನ 1, 4, 5 ಮತ್ತು 6ನೇ ರಿ.ಸ. ನಂಬರ್ನಲ್ಲಿ ಜನರು ವಾಸಿಸುತ್ತಿದ್ದಾರೆ. ಆದರೆ ಹಾನಗಲ್ಲ ತಹಸೀಲ್ದಾರರ ಮೂಲಕ ತಮ್ಮ ಕಚೇರಿಗೆ ಬಂದ ಪ್ರಸ್ತಾವನೆಯಲ್ಲಿ ಕೇವಲ 4ನೆ ಸರ್ವೆ ನಂಬರ್ನಲ್ಲಿನ ಮನೆಗಳನ್ನು ಮಾತ್ರ ಪರಿಗಣಿಸಿ ವರದಿ ಸಲ್ಲಿಸಲಾಗಿದೆ. ಇದನ್ನು ನಾವು ತಿರಸ್ಕರಿಸಿದ್ದು, ನಾವು ತಮ್ಮ ಗಮನಕ್ಕೆ ತಂದ ಎಲ್ಲ ಸರ್ವೇ ನಂಬರ್ನಲ್ಲಿ ವಾಸಿಸುವ ಮನೆಗಳನ್ನು ಪರಿಗಣಿಸಿ ಕಂದಾಯ ಗ್ರಾವವನ್ನಾಗಿ ಘೋಷಣೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
ಮನವಿ ಸಲ್ಲಿಸುವ ಸಂದರ್ಭದಲ್ಲಿ ಹಾನಗಲ್ಲ ತಹಸೀಲ್ದಾರ್ ಎಸ್. ರೇಣುಕಾ ಇದ್ದರು. ಮುಖಂಡರಾದ ರುದ್ರಪ್ಪ ಬಳಿಗಾರ, ಚನ್ನಬಸಪ್ಪ ಹಾವಣಗಿ, ಬಸವಂತಪ್ಪ ಮೆಳ್ಳಳ್ಳಿ, ಜಗದೀಶ ಪಾಟೀಲ, ಚಂದ್ರ ಬೈಲವಾಳ, ಫಕ್ಕೀರೇಶ ಶೇತಸನದಿ, ಮಂಜು ಹುನಗುಂದ, ಕೃಷ್ಣ ನಾಗೋಜಿ, ಮೃತ್ಯುಂಜಯ ಕೊಟಗುಣಸಿಮಠ, ಗುಡ್ಡಪ್ಪ ಕುರುಬರ, ಖಾದರಸಾಬ ಜಂಗ್ಲಿ ಇದ್ದರು.