ಕನ್ನಡಪ್ರಭ ವಾರ್ತೆ ಹೊನ್ನಾಳಿ
ಈ ಕುರಿತು ಗುರುವಾರ ತಾಲೂಕು ಕಚೇರಿ ಮುಂದೆ ಪ್ರತಿಭಟನೆ ನಡೆಸಿದ ಕರ್ನಾಟಕ ದಲಿತ ಸಂಘರ್ಷ ಸಮಿತಿ ತಾಲೂಕು ಘಟಕದ ಸಂಚಾಲಕ ಬೆನಕನಹಳ್ಳಿ ಎ.ಕೆ.ಪರಮೇಶ್ವರಪ್ಪ ಮಾತನಾಡಿ, ಕೃಷ್ಣಪ್ಪ ಅವರು ಮುಜರಾಯಿ ಇಲಾಖೆಯಲ್ಲಿ ಅತ್ಯುತ್ತಮ, ದಕ್ಷ, ಪ್ರಮಾಣಿಕ ಅಡಳಿತಾಧಿಕಾರಿಯಾಗಿದ್ದು, ಇವರು ನೇಮಕವಾದ ನಂತರ ಅಲ್ಲಿನ ಭ್ರಷ್ಟರಿಗೆ ಸಿಂಹಸ್ವಪ್ನವಾಗಿದ್ದರು, ದೇವಸ್ಥಾನದಲ್ಲಿನ ಭ್ರಷ್ಟಾಚಾರವನ್ನು ನಿಯಂತ್ರಿಸಿ, ಸುಧಾರಣೆ ಕಡೆಗೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದರು ಎಂದು ಹೇಳಿದರು.
ದೇವಸ್ಥಾನದಲ್ಲಿನ ಪ್ರಸಾದ ಕೌಂಟರ್, ಅಮ್ಮನ ಕಾಣಿಕೆ ಲೆಕ್ಕ, ದೇವಸ್ಥಾನದ ಹಂಡಿ ಹಣ ಎಣಿಕೆ ಮಾಡುವಾಗ ಸಿ.ಸಿ.ಕ್ಯಾಮೆರಾ ಅಳವಡಿಕೆ ಹೀಗೆ ಹತ್ತಾರು ರೀತಿಯಲ್ಲಿ ಉತ್ತಮ ಆಡಳಿತಕ್ಕಾಗಿ ಕ್ರಮ ಕೈಗೊಂಡಿದ್ದರು ಎಂದು ಹೇಳಿದರು.ದೇವಸ್ಥಾನ ರಥೋತ್ಸವಕ್ಕೆ ಸಾರ್ವಜನಿಕರಿಂದ ಹಣ ಸಂಗ್ರಹಣೆ ಮಾಡಿದ ವಿಷಯನ್ನು ಗ್ರಾಮಸ್ಥರು ಅಡಳಿತಾಧಿಕಾರಿ ಕೃಷ್ಣಪ್ಪ ಅವರ ಗಮನಕ್ಕೆ ತಂದಾಗ ಹಣ ಸಂಗ್ರಹಿಸಲು ಯಾರ ಪೂರ್ವಾನುಮತಿ ಪಡೆದುಕೊಂಡಿದ್ದೀರಿ ಎಂದು ಪ್ರಶ್ನೆ ಮಾಡಿದಾಗ ಭ್ರಷ್ಟರಿಗೆ ಭಯ ಪ್ರಾರಂಭವಾಗಿದ್ದು, ಇವರು ಮಾರಿಕೊಪ್ಪ ದೇವಸ್ಥಾನಕ್ಕೆ ಅಡಳಿತಾಧಿಕಾರಿಯಾಗಿ ಬಂದ ಮೇಲೆ ಇಲ್ಲಿನ ಸಿಬ್ಬಂದಿಗೆ ಬಾಕಿ ವೇತನ ಬಿಡುಗಡೆ ಮಾಡಿಸಿ ಸಿಬ್ಬಂದಿ ಬ್ಯಾಂಕ್ ಖಾತೆಗಳಿಗೆ ಹಣ ಪಾವತಿಯಾಗುವಂತೆ ಕ್ರಮಕೈಗೊಂಡಿದ್ದರು. ಇದನ್ನು ಸಹಿಸದ ಕೆಲವಾರು ಜನ ಭ್ರಷ್ಟರು ಕುತಂತ್ರದಿಂದ ಕೃಷ್ಣಪ್ಪ ಅವರನ್ನು ದೇವಸ್ಥಾನದ ಅಡಳಿತಾಧಿಕಾರಿ ಹುದ್ದೆಯಿಂದ ಬಿಡುಗಡೆ ಮಾಡಿಸಿದ್ದಾರೆ ಎಂದು ಆರೋಪಿಸಿದರು.
ಸಿಜೆಐ ಮೇಲೆ ಶೂ ಎಸೆತ ಖಂಡನೀಯ:
ಪ್ರತಿಭಟನೆಯ ನಂತರ ತಹಸೀಲ್ದಾರ್ ರಾಜೇಶ್ ಕುಮಾರ್ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.