ಕಲ್ಯಾಣ ಕರ್ನಾಟಕದ ಶಾಲೆಗಳಿಗೆ ಶಿಕ್ಷಕರ ನೇಮಿಸಿ: ಡಾ. ಖರ್ಗೆ

KannadaprabhaNewsNetwork |  
Published : Jan 13, 2026, 01:30 AM IST
ಫೋಟೋ- ಖರ್ಗೆ ಫೋಟಯಡ್ರಾಮಿಯಲ್ಲಿ ನಡೆದ ಪ್ರಜಾಸೌಧ, ಕೆಪಿಎಸ್‌ ಶಾಲೆಗಳ ಅಡಿಗಲ್ಲು ಸಮಾರಂಭದಲ್ಲಿ ಡಾ. ಖರ್ಗೆ, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಸಿವಕುಮಾರ್‌, ಸಚಿವರು, ಸಾಸಕರು ಇದ್ದರು. | Kannada Prabha

ಸಾರಾಂಶ

ಕಲ್ಯಾಣ ಕರ್ನಾಟಕ ಭಾಗದಲ್ಲಿ ಶಾಲೆಗಳಿವೆ. ಆದರೊಳಗೆ ಶಿಕ್ಷಕರೇ ಇಲ್ಲ. ಶಾಲೆ ಕಟ್ಟದಿದ್ರೂ ಪರವಾಗಿಲ್ಲ, ಬೇವಿನ ಮರದ ಕೆಳಗೆ ಕುಳಿತು ಮಕ್ಕಳು ಕಲಿತಾರೆ, ಶಿಕ್ಷಕರನ್ನು ನೇಮಕ ಮಾಡಿ ಎಐಸಿಸಿ ಅಧ್ಯಕ್ಷ ಡಾ. ಮಲ್ಲಿಕಾರ್ಜುನ ಖರ್ಗೆ ಕಿವಿಮತು ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಕಲಬುರಗಿ

ಕಲ್ಯಾಣ ಕರ್ನಾಟಕ ಭಾಗದಲ್ಲಿ ಶಾಲೆಗಳಿವೆ. ಆದರೊಳಗೆ ಶಿಕ್ಷಕರೇ ಇಲ್ಲ. ಶಾಲೆ ಕಟ್ಟದಿದ್ರೂ ಪರವಾಗಿಲ್ಲ, ಬೇವಿನ ಮರದ ಕೆಳಗೆ ಕುಳಿತು ಮಕ್ಕಳು ಕಲಿತಾರೆ, ಶಿಕ್ಷಕರನ್ನು ನೇಮಕ ಮಾಡಿ ಎಐಸಿಸಿ ಅಧ್ಯಕ್ಷ ಡಾ. ಮಲ್ಲಿಕಾರ್ಜುನ ಖರ್ಗೆ ಕಿವಿಮತು ಹೇಳಿದ್ದಾರೆ.

ಯಡ್ರಾಮಿಯಲ್ಲಿ ನಡೆದ ಪ್ರಜಾಸೌಧ, 300 ಕೆಪಿಎಸ್‌ ಶಾಲೆಗಳ ನಿರ್ಮಾಣ ಯೋಜನೆಗೆ ಅಡಿಗಲ್ಲಿಟ್ಟು ಅವರು ಮಾತನಾಡಿದರು.

ಶಾಲೆಗಳಿವೆ, ಶಿಕ್ಷಕರಿಲ್ಲದೆ ಬಣಗುಡುತ್ತಿವೆ. ಹೆಚ್ಚಿನ ಶಿಕ್ಷಕರು ಖಾಲಿರುವ ಜಿಲ್ಲೆಗಳು ಕಲ್ಯಾಣ ನಾಡಲ್ಲಿವೆ, ಸರ್ಕಾರ ಮೊದ್ಲು ಶಿಕ್ಷಕರನ್ನ ನೇಮಿಸಿ, 10 ಸಾವಿರ ಶಕಿಕ್ಷಕರನ್ನು ನೇಮಿಸಲು ಹೊರಟರೆ ಶೇ. 75ರಷ್ಟು ಕಲ್ಯಾಣ ನಾಡಿನ ಜಿಲ್ಲೆಗಳಿಗೆ ಆದ್ಯತೆ ನೀಡಿರೆಂದು ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್‌, ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರಿಗೆ ಖರ್ಗೆ ಸೂಚಿಸಿದರು.

ಡಿಕೆಸಿಗೆ ಖರ್ಗೆ ಟಾಂಗ್‌

ಕಲಂ 371 ಜೆ ನಿಂದಾಗಿ ಕಲ್ಯಾಣ ಕರ್ನಾಟಕ ಭಾಗಕ್ಕೆ ಸಾಕಷ್ಟು ಅನುದಾನ ಹರಿದು ಬರುತ್ತಿದೆ. ಇದನ್ನು ನೋಡಿದರೆ ನಾನೂ ಇಲ್ಲೇ ಹುಟ್ಟಿ ಬರಬೇಕಿತ್ತೇನೋ ಅನ್ನಿಸುತ್ತಿದೆ, ನನ್ನ ಕ್ಷೇತ್ರವೂ ಇಲ್ಲೇ ಇರಬೇಕಿತ್ತೇನೋ ಅನ್ನಿಸುತ್ತಿದೆ ಎಂದು ಡಿಕೆಶಿ ಹೇಳಿದ್ದರು. ಈ ಮಾತನ್ನು ತಮ್ಮ ಮಾತಲ್ಲಿ ಪ್ರಸ್ತಾಪಿಸಿದ ಡಾ. ಖರ್ಗೆ ಶಿವಕುಮಾರ್‌ ಅವರನ್ನು ಉದ್ದೇಶಿಸಿ, ಡಿಕೆ ಶಿವಕುಮಾರ್‌ ಅವರೇ ನೀವು ಇಲ್ಲಿ, ನಾವು ಅಲ್ಲಿ ಹುಟ್ಟೋದೇನೂ ಬೇಡ, ಮೈಸೂರು ಜಿಲ್ಲೆ, ಕನಕಪೂರ ಕ್ಷೇತ್ರದಲ್ಲಿ ಅದೆಷ್ಟು ಪ್ರಗತಿ ಆಗಿದೆಯೋ ಅದರ ಶೇ. 75ರಷ್ಟಾದರೂ ಇಲ್ಲಿ ಅಭಿವೃದ್ಧಿಗೆ ಅವಕಾಶ ಮಾಡಿ ಎಂದರು.

ಬಫೆ ಸಿಸ್ಟಂ ನಲ್ಲಿದ್ದೀರಿ ನೀವು

ಮದುವೆ, ಸಮಾರಂಭಗಳಲ್ಲಿರುವಂತೆ ಬಫೆ ಊಟದಲ್ಲಿ ಮೊದಲು ಹೋದವರಿಗೆ ಸಾಕಷ್ಟು ಖಾದ್ಯ ಸಿಗುವಂತೆ ನಾವು ರಾಜಧಾನಿ ಸುತ್ತಲಿದ್ದೀರಿ, ಅಲ್ಲಿಂದಲೇ ನಿಮಗೆ ಮೊದಲಿನಿಂದಲೂ ಅನುದಾನ ಸಿಕ್ಕಿದೆ, ನಾವು ಪಂಕ್ತಿಯಲ್ಲಿ ಕುಂತವರು. ಯಾರಾದರೂ ಸರಿಯಾಗಿ ಬಡಿಸುತ್ತಾರೆಯೋ ಎಂದು ಕಾದಿದ್ದವರು. ನಮಗೆ ಮನಸೋ ಇಚ್ಚೆ ಅನುದಾನವೇ ಸಿಗಲಿಲ್ಲವೆಂದು ಬಫೆ ಊಟ, ಪಂಕ್ತಿ ಊಟದ ಉದಾಹರಣೆ ಕೊಟ್ಟು ಖರ್ಗೆಯವರು ವಿವರಿಸಿದಾಗ ಸಭೆಯಲ್ಲಿ ನಗೆ ಮೂಡಿತ್ತು. ಈ ಮಾತನ್ನು ಶಿವಕುಮಾರ್ ನಗುತ್ತಲೇ ಆಲಿಸಿದರು.

ಧರ್ಮ, ದೇವರ ಹೆಸರಿನಲ್ಲಿ ಪ್ರಧಾನಿ ಮೋದಿ ದೇಶವನ್ನೇ ಲೂಟಿ ಮಾಡುತ್ತಿದ್ದಾರೆಂದು ಟೀಕಿಸಿದ ಡಾ. ಮಲ್ಲಿಕಾರ್ಜುನ ಖರ್ಗೆ

ಧರ್ಮ, ದೇವರ ಹೆಸರಿನ ಮೇಲೆ ಪ್ರಧಾನಿ ಮೋದಿ ಇಡೀ ದೇಶವನ್ನೇ ಲೂಟಿ ಮಾಡುತ್ತಿದ್ದಾರೆ, ಇದರ ಬಗ್ಗೆ ಜನರು ಎಚ್ಚೆತ್ತುಕೊಳ್ಳಬೇಕು ಎಂದರು.

ಹಿಂದೂ-ಮುಸ್ಲಿಂ, ಹಿಂದೂ -ಸಿಖ್ ಜನರ ಮಧ್ಯೆ ಜಗಳ ಹಚ್ಚುವುದು ಇವರ ಕೆಲಸವಾಗಿದೆ, ಇದು ಕಲ್ಯಾಣ ಕರ್ನಾಟಕ, ಕಲ್ಯಾಣ ಕ್ರಾಂತಿ ಮಾಡಿರುವ ಬಸವಣ್ಣನ ಊರು. ನಮ್ಮ ಭಾಗ ಸಮಾನತೆಗೆ ಹೆಸರಿರುವ ಸ್ಥಳವಾಗಿದೆ, ಜಗಳ ಹಚ್ಚುವಂತಹ ಸನ್ನಿವೇಶದಲ್ಲಿ ಒಗ್ಗಟ್ಟಾಗಿರಬೇಕು ಎಂದು ಕರೆ ನೀಡಿದರು.

ಬಡವರ ಹೊಟ್ಟೆ ಹೊಡೆದ ಮೋದಿ :

ಕೇಂದ್ರದಲ್ಲಿ ಯಾವುದೋ ಜೀ ರಾಮ್ ಜೀ ಎನ್ನುವ ಹೆಸರಿನಲ್ಲಿ ಕಾಯ್ದೆ ಜಾರಿ ಮಾಡಿ, ನರೇಗಾವನ್ನು ಮಣ್ಣುಪಾಲು ಮಾಡುತ್ತಿದ್ದಾರೆ. ಬೇಸಿಗೆ ಕಾಲದಲ್ಲಿ ಬಡವರಿಗೆ ಬದುಕಾದ ಮನರೇಗಾ ಯೋಜನೆ ಬದಲಿಸಿ, ಮೋದಿ ಬಡವರ ಹೊಟ್ಟೆ ಹೊಡೆಯುತ್ತಿದ್ದಾರೆ ಎಂದರು.

ನರೇಗಾ ಉಳಿಸಲು ಯುದ್ಧಕ್ಕೂ ಸಿದ್ಧರಾಗಬೇಕು :

ಅಂಬೇಡ್ಕರ್ ಅವರ ಆಶಯದಂತೆ ಬಡವರ ಸಬಲೀಕರಣಕ್ಕೆ ಮಾಜಿ ಪ್ರಧಾನಿ ದಿ.ಮನಮೋಹನ್ ಸಿಂಗ್ ಅವರ ನೇತೃತ್ವದಲ್ಲಿ ನರೇಗಾ ಜಾರಿಗೆ ಮಾಡಲಾಗಿತ್ತು. ಆದರೆ ಈಗ ಒಂದೊಂದಾಗಿ ಕಾನೂನು ಕಸಿದುಕೊಂಡು ತಿನ್ನುತ್ತಿದ್ದಾರೆ. ಇಂತಹ ವೇಳೆಯಲ್ಲಿ ನರೇಗಾ ಉಳಿಸಲು ಜನರು ಯುದ್ಧಕ್ಕೂ ಸಿದ್ಧರಾಗಬೇಕು ಎಂದು ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹೈಕೋರ್ಟ್‌ ಹೊಸ ಕಟ್ಟಡಕ್ಕೆ 30 ಎಕ್ರೆಕೋರಿಕೆ:ರಾಜ್ಯ ಸರ್ಕಾರಕ್ಕೆ ನೋಟಿಸ್‌
ಬಿಎಂಐಸಿ ಮರುಪರಿಶೀಲಿಸಿ: ರಾಜ್ಯಕ್ಕೆ ಕೋರ್ಟ್‌ ಸೂಚನೆ