ಕನ್ನಡಪ್ರಭ ವಾರ್ತೆ ಶಿರಾ
ನಗರದ ಪ್ರವಾಸಿ ಮಂದಿರದಲ್ಲಿ ಸಹಕಾರ ರತ್ನ ಎಸ್ ಎನ್ ಕೃಷ್ಣಯ್ಯ ಫೌಂಡೇಶನ್ ವತಿಯಿಂದ ನಡೆದ ದೇವರಾಜ ಅರಸು ಅವರ ಕುರಿತಾದ ನಮ್ಮ ಅರಸು ಪುಸ್ತಕವನ್ನು ಹಿಂದುಳಿದ ವರ್ಗಗಳ ವಸತಿ ನಿಲಯ ಮತ್ತು ಗ್ರಂಥಾಲಯಗಳಿಗೆ ಕೊಡುಗೆ ನೀಡಲು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗೆ ಹಸ್ತಾಂತರಿಸಿ ಮಾತನಾಡಿದರು.
ರಾಜ್ಯದಲ್ಲಿ ಸಾಮಾಜಿಕ ಪಲ್ಲಟಗಳನ್ನೇ ಉಂಟು ಮಾಡಿದ ಭೂ ಸುಧಾರಣಾ ಕಾಯಿದೆ ಅರಸು ಅವರ ಕನಸಿನ ಕೂಸು. ರಾಜಕೀಯ ಆಯಾಮಗಳೊಟ್ಟಿಗೆ ಸಾಮಾಜಿಕ ಹಾಗೂ ಸಾಂಸ್ಕೃತಿಕ ಆಯಾಮಗಳೂ ಸೇರಿಕೊಂಡಿದ್ದ ಅರಸು ಅವರು ತಮ್ಮ ಮುಖ್ಯಮಂತ್ರಿ ಸ್ಥಾನದ ಅವಧಿಯಲ್ಲಿ ಅವರ ನೇತೃತ್ವದಲ್ಲಿ ರಚನೆಯಾದ ಅಕಾಡೆಮಿಗಳಿಗೆ ಸ್ವಾಯತ್ತತೆಗಳನ್ನು ನೀಡಿದ್ದರು .ಅನುಮತಿ ಇಲ್ಲದೆ ಯಾರಾದರೂ ಅರಣ್ಯ ಪ್ರವೇಶ ಮಾಡಿ ಮರ ಕಡಿಯುವುದು ಅಕ್ಷಮ್ಯ ಅಪರಾಧ ಅನ್ನುವುದರ ಕಠಿಣ ಕ್ರಮಗಳಿದ್ದ ಮೊದಲ ಕಾಯಿದೆ ತಂದದ್ದು ಅರಸು ಎಂದರು.ಕಾರ್ಯಕ್ರಮದಲ್ಲಿ ಸಾಹಿತಿಗಳಾದ ಭುವನಹಳ್ಳಿ ನಾಗರಾಜ್ , ಲೇಖಕಿ ಶೈಲಾ ನಾಗರಾಜ್ , ಕೊಟ್ಟ ಶಂಕರ್ , ವೈ ನರೇಶ್ ಬಾಬು , ಫೌಂಡೇಶನ್ ನ ಬಿ ಎಸ್ ವಿಜಯಕುಮಾರ್ , ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿ ವಡ್ನಪ್ಪ , ಸಿಗಲಹಳ್ಳಿ ಮೂರ್ತಿ , ಗಂಗಾಧರ್ , ಧರಣಿ ಕುಮಾರ್ ಸೇರಿದಂತೆ ಹಲವರು ಹಾಜರಿದ್ದರು.