ಬಿಡದಿ ಹೋರಾಟಕ್ಕೆ ಹೊರಟಿದ್ದ ಕೊಡಗಿನ ರೈತ ಪ್ರಮುಖರ ಬಂಧನ

KannadaprabhaNewsNetwork |  
Published : Jul 26, 2026, 03:00 AM IST
. | Kannada Prabha

ಸಾರಾಂಶ

ಬಿಡದಿಯಲ್ಲಿ ನಡೆಯುತ್ತಿರುವ ಹೋರಾಟಕ್ಕೆ ಬೆಂಬಲ ನೀಡಲು ಹೊರಟಿದ್ದ ಸೋಮವಾರಪೇಟೆ ತಾಲೂಕಿನ ರೈತ ಸಂಘದ ಪ್ರಮುಖರನ್ನು ಕೊಡ್ಲಿಪೇಟೆಯಲ್ಲಿ ತಡೆದು ಬಂಧಿಸಿದ ಪೊಲೀಸರು ಬಳಿಕ ಬಿಡುಗಡೆ ಮಾಡಿದರು.

ಕನ್ನಡಪ್ರಭವಾರ್ತೆ ಶನಿವಾರಸಂತೆ

ಬಿಡದಿಯಲ್ಲಿ ನಡೆಯುತ್ತಿರುವ ಹೋರಾಟಕ್ಕೆ ಬೆಂಬಲ ನೀಡಲು ಹೊರಟಿದ್ದ ಸೋಮವಾರಪೇಟೆ ತಾಲೋಕಿನ ರೈತ ಸಂಘದ ಪ್ರಮುಖರನ್ನು ಕೊಡ್ಲಿಪೇಟೆಯಲ್ಲಿ ತಡೆದು ಬಂಧಿಸಿದ ಪೊಲೀಸರು ಬಳಿಕ ಬಿಡುಗಡೆ ಮಾಡಿದರು.

ರೈತ ಮುಖಂಡರಾದ ಹೆಗ್ಗಳ ಹೂವಯ್ಯ, ಪ್ರಸನ್ನ, ರಮೇಶ್, ದಿನೇಶ್, ಜಿತೇಂದ್ರ, ಮೊಗಪ್ಪ, ಲೋಕೇಶ್, ಲಕ್ಷ್ಮಣ, ನಾಗರಾಜ್, ಅಜಿತ್, ಅಶೋಕ್ ಅವರನ್ನು ಪೊಲೀಸರು ಕೊಡ್ಲಿಪೇಟೆ ಉಪ ಠಾಣೆಗೆ ಕರೆತಂದಿದ್ದರು. ಹೋರಾಟಗಾರರನ್ನು ಬಂಧಿಸಿರುವ ಮಾಹಿತಿ ತಿಳಿದ ಕೊಡ್ಲಿಪೇಟೆ ಮತ್ತು ಸುತ್ತಮುತ್ತಲಿನ ರೈತರು ಠಾಣೆ ಮುಂಭಾಗ ಜಮಾಯಿಸಿ ಸರ್ಕಾರ ಮತ್ತು ಪೊಲೀಸರ ವಿರುದ್ದ ಧಿಕ್ಕಾರಗಳನ್ನು ಕೂಗುತ್ತಾ ಬಂಧಿಸಿರುವ ಹೋರಾಟಗಾರರನ್ನು ಬಿಡುಗಡೆಗೊಳಿಸುವಂತೆ ಒತ್ತಾಯಿಸಿದರು.

ನಂತರ ಪ್ರತಿಭಟನೆಗಾರರು ರಾಜ್ಯ ಸರ್ಕಾರ ಬಿಡದಿಯಲ್ಲಿ ರೈತರ ಆಸ್ತಿಯನ್ನು ರಿಯಲ್ ಎಸ್ಟೇಟ್ ದಂಧೆಗೆ ಬಳಸಿ ಕಬಳಿಸುತ್ತಿರುವಂತೆ ಕೊಡಗಿನಲ್ಲೂ ಸಹ ಸಿ ಅಂಡ್ ಲ್ಯಾಂಡ್ ನೆಪ ಹೇಳಿ ರೈತರ ಆಸ್ತಿಯನ್ನು ಕಬಳಿಸಲು ಹೊರಟಿರುವ ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡು ಘೋಷಣೆಗಳನ್ನು ಕೂಗಿದರು. ಮುಂದಿನ ದಿನದಲ್ಲಿ ರೈತರಿಗೆ ನ್ಯಾಯ ಸಿಗದಿದ್ದರೆ ವಿಧಾನ ಸಭಾ ಮುಂಭಾಗ ರೈತರು ಪ್ರತಿಭಟನೆ ಮಾಡಲಾಗುತ್ತದೆ ಎಂದು ರೈತ ಮುಖಂಡ ಮತ್ತು ವಕೀಲ ದೀಪಕ್ ಸರ್ಕಾರವನ್ನು ಎಚ್ಚರಿಸಿದರು.

ಪ್ರತಿಭಟನೆಗಾರರ ಒತ್ತಾಯಕ್ಕೆ ಮಣಿದ ಶನಿವಾರಸಂತೆ ವೃತ್ತ ನಿರೀಕ್ಷಕ ಕೃಷ್ಣರಾಜ್ ಬಂಧಿತ ಹೋರಾಟಗಾರರನ್ನು ಠಾಣೆಯಿಂದ ಬಿಡುಗಡೆಗೊಳಿಸಿದರು.

ಪ್ರತಿಭಟನೆಯಲ್ಲಿ ರೈತ ಹೋರಾಟಗಾರರಾದ ಚಕ್ರವರ್ತಿ ಸುರೇಶ್, ವಕೀಲ ದೀಪಕ್, ಪ್ರಸನ್ನ, ಶನಿವಾರಸಂತೆ ಒಕ್ಕಲಿಗರ ಸಂಘದ ಅಧ್ಯಕ್ಷ ಕೇಶವಮೂರ್ತಿ, ಪ್ರಮುಖರಾದ ಭಗವಾನ್, ವಿನೋದ್ ಮೂದರವಳ್ಳಿ, ಅನಂತ್ ಶನಿವಾರಸಂತೆ ಇನ್ನು ಮುಂತಾದ ರೈತ ಪ್ರಮುಖರು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವಿದ್ಯುದ್ದೀಪಾಲಂಕಾರದಿಂದ ಝಗಮಗಿಸುತ್ತಿರುವ ತಾಳಿಕೋಟೆ
ಕಾರ್ಯಕರ್ತರ ಅಭಿಪ್ರಾಯಕ್ಕೆ ಹೆಚ್ಚಿನ ಆದ್ಯತೆ