ಮಹಾಪಾದುಕೆ ಅದ್ವೈತ ರಥ ಆಗಮನ: ಅದ್ಧೂರಿ ಸ್ವಾಗತ

KannadaprabhaNewsNetwork |  
Published : Mar 27, 2025, 01:00 AM IST
ಕ್ಯಾಪ್ಷನ26ಕೆಡಿವಿಜಿ39,40 ದಾವಣಗೆರೆಗೆ ಆಗಮಿಸಿದ ಶ್ರೀ ಮಜ್ಜಗದ್ಗುರು ಶ್ರೀ ಶಂಕರಾಚಾರ್ಯರ ಶ್ರೀ ಮಹಾಪಾದುಕೆಯ ಅದ್ವೈತ ರಥವನ್ನು ಅದ್ಧೂರಿಯಾಗಿ ಸ್ವಾಗತಿಸಿದರು. | Kannada Prabha

ಸಾರಾಂಶ

ಉತ್ತರ ಕನ್ನಡ ಜಿಲ್ಲೆ ಸಿದ್ದಾಪುರ ತಾಲೂಕಿನ ಭಾನ್ಕುಳಿ ಶ್ರೀ ರಾಮಚಂದ್ರಾಪುರ ಆಯೋಜಿಸಿರುವ ಶಂಕರ ಪಂಚಮೀ ಕಾರ್ಯಕ್ರಮ ಪ್ರಯುಕ್ತ ಕೇರಳದ ಕಾಲಡಿಯಿಂದ ಆಗಮಿಸಿದ ಜಗದ್ಗುರು ಶ್ರೀ ಶಂಕರಾಚಾರ್ಯರ ಶ್ರೀ ಮಹಾಪಾದುಕೆ ಇರುವ ಅದ್ವೈತ ರಥ ಬುಧವಾರ ನಗರ ಪ್ರವೇಶಿಸಿದ್ದು, ಗಾಂಧಿ ವೃತ್ತದಲ್ಲಿ ಅದ್ಧೂರಿಯಾಗಿ ಸ್ವಾಗತಿಸಲಾಯಿತು.

- ಶಂಕರ ಪಂಚಮೀ ಕಾರ್ಯಕ್ರಮ ಪ್ರಯುಕ್ತ ಕೇರಳದ ಕಾಲಡಿಯಿಂದ ಯಾತ್ರೆ

- - - ಕನ್ನಡಪ್ರಭ ವಾರ್ತೆ ದಾವಣಗೆರೆ ಉತ್ತರ ಕನ್ನಡ ಜಿಲ್ಲೆ ಸಿದ್ದಾಪುರ ತಾಲೂಕಿನ ಭಾನ್ಕುಳಿ ಶ್ರೀ ರಾಮಚಂದ್ರಾಪುರ ಆಯೋಜಿಸಿರುವ ಶಂಕರ ಪಂಚಮೀ ಕಾರ್ಯಕ್ರಮ ಪ್ರಯುಕ್ತ ಕೇರಳದ ಕಾಲಡಿಯಿಂದ ಆಗಮಿಸಿದ ಜಗದ್ಗುರು ಶ್ರೀ ಶಂಕರಾಚಾರ್ಯರ ಶ್ರೀ ಮಹಾಪಾದುಕೆ ಇರುವ ಅದ್ವೈತ ರಥ ಬುಧವಾರ ನಗರ ಪ್ರವೇಶಿಸಿದ್ದು, ಗಾಂಧಿ ವೃತ್ತದಲ್ಲಿ ಅದ್ಧೂರಿಯಾಗಿ ಸ್ವಾಗತಿಸಲಾಯಿತು.

ಕೂಡಲಿ ಶೃಂಗೇರಿ ಜಗದ್ಗುರು ಶ್ರೀ ವಿದ್ಯಾಭಿನವ ವಿದ್ಯಾರಣ್ಯ ಭಾರತಿ ಮಹಾಸ್ವಾಮಿಗಳು ಪಾದುಕೆಗಳಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಪೂಜೆ ಸಲ್ಲಿಸಿ ಬರಮಾಡಿಕೊಂಡರು. ರಥವು ಅಶೋಕ ರಸ್ತೆ ಮೂಲಕ ಜಯದೇವ ವೃತ್ತದ ಕೂಡಲಿ ಶ್ರೀ ಶಂಕರ ಮಠ ತಲುಪಿತು. ಭಕ್ತರು ಪಾದುಕೆ ದರ್ಶನ ಪಡೆದು ಪುನೀತರಾದರು.

ಈ ಸಂದರ್ಭ ವಿಶ್ವನಾಥ ಭಟ್ ಸಾರಂಗ, ಸದಾನಂದ ಹೆಗಡೆ, ಪಿ.ಮೋಹನ, ಸತೀಶ ಚಂದ್ರ, ಎ.ಎಂ.ಹೆಗಡೆ, ಎಂ.ಸಿ. ಶಶಿಕಾಂತ್, ಎನ್.ಆರ್. ನಾಗಭೂಷಣ, ಎಸ್.ಜಿ. ಹೆಗಡೆ, ಬಾಲಚಂದ್ರ ಭಟ್, ಭಾಸ್ಕರ್ ಭಟ್, ಎಂ.ಆರ್.ಹೆಗಡೆ, ಎಂ.ಜಿ.ಶ್ರೀಕಾಂತ್, ಪವನ್ ಭಟ್, ಗಣೇಶ ಭಟ್, ಅಜಯ್ ಭಟ್, ಭಕ್ತರು ಭಾಗವಹಿಸಿದ್ದರು.

- - - -26ಕೆಡಿವಿಜಿ39,40.ಜೆಪಿಜಿ:

ದಾವಣಗೆರೆಗೆ ಆಗಮಿಸಿದ ಶ್ರೀಮದ್‌ ಜಗದ್ಗುರು ಶ್ರೀ ಶಂಕರಾಚಾರ್ಯರ ಶ್ರೀ ಮಹಾಪಾದುಕೆಯ ಅದ್ವೈತ ರಥವನ್ನು ಅದ್ಧೂರಿಯಾಗಿ ಸ್ವಾಗತಿಸಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

‘ಕನ್ನಡಪ್ರಭ, ಏಷ್ಯಾನೆಟ್‌ ಸುವರ್ಣ ನ್ಯೂಸ್‌’ನ ಸಹಯೋಗದಲ್ಲಿ ಆಯೋಜಿಸಿದ್ದ ‘ಕೆಂಗೇರಿ ಸಂಭ್ರಮ’ಕ್ಕೆ ವಿದ್ಯುಕ್ತ ತೆರೆ
ಸರ್ವಾಧ್ಯಕ್ಷರಾಗಿ ಸೋಮಲಿಂಗ ಗೆಣ್ಣೂರ ಆಯ್ಕೆ