ನವರಸ ಯಕ್ಷೋತ್ಸವ ಉದ್ಘಾಟಿಸಿದ ಮಕ್ಕಳ ಸಾಹಿತಿ
ಸಿದ್ದಾಪುರ ತಾಲೂಕಿನ ಭೂಮಿ ಯಕ್ಷಗಾನ ಅತ್ಯಂತ ಹುಲುಸಾಗಿದೆ. ಯಕ್ಷಕವಿಗಳು, ಕಲಾವಿದರು ಹಾಗೂ ಸಂಘಟಕರು ಅತ್ಯಂತ ಪ್ರಭಾವಶಾಲಿಯಾಗಿ ಈ ನೆಲದಲ್ಲಿ ಹಿಂದೆಯೂ ಇದ್ದರು, ಈಗಲೂ ಇದ್ದಾರೆ. ಜಾನಕೈ ತಿಮ್ಮಪ್ಪ ಹೆಗಡೆ, ಬೆಳಸಲಿಗೆ ಗಣಪತಿ ಹೆಗಡೆ ಮುಂತಾದವರ ಯಕ್ಷಸಾಹಿತ್ಯ ಸಾಂಗತ್ಯವು ಸಮೃದ್ಧವಾಗಿವೆ ಎಂದರು.ಕೆ.ಸಿ.ಸಿ ಕೆ.ಡಿ.ಸಿ.ಸಿ.ಬ್ಯಾಂಕ್ ನಿರ್ದೇಶಕ ರಾಘವೇಂದ್ರ ಶಾಸ್ತ್ರಿ ಬಿಳಗಿ ಮಾತನಾಡಿ, ಜಾಗತೀಕರಣ ಎನ್ನುವುದು ನಮ್ಮ ಬದುಕಿನ ಎಲ್ಲ ಕ್ಷೇತ್ರಗಳ ಮೇಲೂ ಉಭಯ ರೀತಿಯಲ್ಲೂ ಪರಿಣಾಮ ಆಗಿದೆ. ಒಳಿತನ್ನು ಪಡೆಯುವ ಕಾಲಕ್ಕೆ ಕೆಡುಕುಗಳನ್ನು ಆದಷ್ಟು ಬದಿಗಿರಿಸಿ ಮುನ್ನಡೆಯಬೇಕಾದ ಅನಿವಾರ್ಯತೆ ಇದೆ ಎಂದರು.
ಬಿದ್ರಕಾನ ಸೇ.ಸ.ಸಂಘ ಅಧ್ಯಕ್ಷ ಸುಬ್ರಹ್ಮಣ್ಯ ಜಿ.ಭಟ್ಟ ಚಟ್ನಳ್ಳಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಬಿದ್ರಕಾನ ಗ್ರಾಪಂ ಅಭಿವೃದ್ಧಿ ಅಧಿಕಾರಿ ಸುಬ್ರಹ್ಮಣ್ಯ ಹೆಗಡೆ, ಎಸ್.ಡಿಎಮ್.ಸಿ ಅಧ್ಯಕ್ಷ ವೆಂಕಟರಮಣ ಹೆಗಡೆ ಅತಿಥಿಗಳಾಗಿ ಭಾಗವಹಿಸಿದ್ದರು. ಸಂಸ್ಥೆಯ ಕಾರ್ಯದರ್ಶಿ ವಿನಾಯಕ ಹೆಗಡೆ ಕವಲಕೊಪ್ಪ ಸ್ವಾಗತಿಸಿದರು. ನಂತರ ಕವಿ ಇಟಗಿ ಮಹಾಬಲೇಶ್ವರ ಭಟ್ಟ ವಿರಚಿತ ಗೋ ಮಹಿಮೆ ಎಂಬ ಪೌರಾಣಿಕ ಯಕ್ಷಗಾನ ಪ್ರದರ್ಶನ ನಡೆಯಿತು. ಭಾಗವತರಾಗಿ ತುಳಿಗೇರೆ ಗಜಾನನ ಭಟ್ಟ, ಮದ್ದಳೆ ವಾದಕರಾಗಿ ಮೂಡಗಾರು ಶ್ರೀಪಾದ ಭಟ್ಟ, ಚಂಡೆ ವಾದಕರರಾಗಿ ರಾಮ ಭಂಡಾರಿ ಕರ್ಕಿ ಭಾಗವಹಿಸಿದ್ದರು.ನಾಟ್ಯಾಚಾರ್ಯ ಶಂಕರ ಭಟ್ಟ (ದಿಲೀಪ), ಇಟಗಿ ಮಹಾಬಲೇಶ್ವರ ಭಟ್ಟ (ನಂದಿನಿ), ಸದಾನಂದ ಪಟಗಾರ (ಸುದಕ್ಷಿಣೆ), ಗಣಪತಿ ಹೊನ್ನೆಕೂ (ಜಂಘಾಸುರ), ಗಣಪತಿ ಹೆಗಡೆ ಗುಂಜಗೋಡು (ವಸಿಷ್ಠ), ವೆಂಕಟೇಶ ಬೊಗರಿಮಕ್ಕಿ(ಸಿಂಹ) ಪಾತ್ರ ನಿರ್ವಹಿಸಿದರು. ಭಾಗವತ ಸತೀಶ ಹೆಗಡೆ ದಂಟ್ಕಲ್ ಭಾಗವತಿಕೆಯಲ್ಲಿ ಕವಿ ಮಾಲೆಕೊಡ್ಲು ಶಂಭು ಭಟ್ಟ ವಿರಚಿತ ಚಂದ್ರಹಾಸ ಚರಿತ್ರೆ ಯಕ್ಷಗಾನದಲ್ಲಿ ಶಿರಗುಣಿ ಲಕ್ಷ್ಮೀನಾರಾಯಣ (ದುಷ್ಟಬುದ್ದಿ), ಅವಿನಾಶ ಹೆಗಡೆ ಕೊಪ್ಪ (ಕುಳಿಂದ), ಪ್ರಸನ್ನ ಹೆಗಡೆ ಹೊಸಗದ್ದೆ(ಕಟುಕ), ಚಂದ್ರಹಾಸ (ಪ್ರವೀಣ ಹೆಗಡೆ ತಟ್ಟಿಸರ), ಕು.ಮೈತ್ರಿ ಗೌಡ ಸಂಪೆಸರ (ವಿಷಯೆ), ಪ್ರಣವ ಭಟ್ಟ ಶಿರಳಗಿ (ಮದನ) ಪಾತ್ರ ನಿರ್ವಹಿಸಿದರು.