ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಪರಿಪೂರ್ಣ ಸತ್ಯವಲ್ಲ. ನೋಡಿಕೊಂಡು ಹೋದರೆ ಅದು ನಿಮ್ಮ ದಿಕ್ಕನ್ನೆ ತಪ್ಪಿಸುತ್ತದೆ. ವಿದ್ಯಾರ್ಥಿಗಳು ಜಾಣನಾದರೆ ಸಾಲದು ಬುದ್ಧಿವಂತನಾಗಬೇಕು. ಜಾಣತನ ಕಾಲೇಜಿನ ಪಠ್ಯ ಪುಸ್ತಕಗಳ ವಿಷಯಕ್ಕೆ ಸಂಬಂಧಿಸಿದರೆ ನೀವು ಏನನ್ನು ಸಾಧಿಸಿದಂತೆ ಆಗುವುದಿಲ್ಲ. ಬುದ್ಧಿವಂತನಾದರೆ ನೀವು ಜೀವನದಲ್ಲಿ ಗೆಲುವನ್ನು ಸಾಧಿಸಬಹುದು ಎಂದು ಡಿವೈಎಸ್ಪಿ ಬಾಹುಬಲಿ ನಂದಗಾವಿ ಹೇಳಿದರು.
ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ
ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಪರಿಪೂರ್ಣ ಸತ್ಯವಲ್ಲ. ನೋಡಿಕೊಂಡು ಹೋದರೆ ಅದು ನಿಮ್ಮ ದಿಕ್ಕನ್ನೆ ತಪ್ಪಿಸುತ್ತದೆ. ವಿದ್ಯಾರ್ಥಿಗಳು ಜಾಣನಾದರೆ ಸಾಲದು ಬುದ್ಧಿವಂತನಾಗಬೇಕು. ಜಾಣತನ ಕಾಲೇಜಿನ ಪಠ್ಯ ಪುಸ್ತಕಗಳ ವಿಷಯಕ್ಕೆ ಸಂಬಂಧಿಸಿದರೆ ನೀವು ಏನನ್ನು ಸಾಧಿಸಿದಂತೆ ಆಗುವುದಿಲ್ಲ. ಬುದ್ಧಿವಂತನಾದರೆ ನೀವು ಜೀವನದಲ್ಲಿ ಗೆಲುವನ್ನು ಸಾಧಿಸಬಹುದು ಎಂದು ಡಿವೈಎಸ್ಪಿ ಬಾಹುಬಲಿ ನಂದಗಾವಿ ಹೇಳಿದರು.ಅರಿಹಂತ ಕಾಲೇಜಿನಲ್ಲಿ ನಡೆದ ದತ್ತಿ ಉಪನ್ಯಾಸ ಹಾಗೂ ವಿದ್ಯಾರ್ಥಿಗಳ ಸ್ವಾಗತ ಸಮಾರಂಭ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಕನ್ನಡ ಸಾಹಿತ್ಯಕ್ಕೆ ಅಪಾರವಾದ ಇತಿಹಾಸವಿದ್ದು, ಹಿಂದಿನ ರಾಜ ಮಹಾರಾಜರ ಆಸ್ಥಾನದ ಕವಿಗಳು ಜೈನರಾಗಿದ್ದರು. ವಿಶ್ರಾಂತ ಕುಲಪತಿ ಡಾ.ಹೆಚ್.ಬಿ.ವಾಲಿಕಾರ ಸುಮಾರು 16 ಜೈನ ಕವಿಗಳನ್ನು ಗುರುತಿಸಿ ಅವರ ಕೃತಿಗಳು ಜೈನ ಸಾಹಿತ್ಯಕ್ಕೆ ಅಪಾರವಾದ ಕೊಡುಗೆ ನೀಡಿದ ಪಂಪನ ಆದಿಪುರಾಣ, ವಿಕ್ರಮಾರ್ಜುನ ವಿಜಯ, ಪೊನ್ನನ ಶಾಂತಿ ಪುರಾಣ, ರನ್ನನ ಅಜಿತ ಪುರಾಣ, ಗದಾಯುದ್ಧ, ನಾಗವರ್ಮನ ವರ್ಧಮಾನ ಪುರಾಣ, ಶಾಂತಿನಾಥನ ಸುಕಮಾರ ಚರಿತೆ, ನಾಗಚಂದ್ರನ ಮಲ್ಲಿನಾಥ ಪುರಾಣ, ರಾಮಚಂದ್ರ ಚರಿತೆ ಪುರಾಣ, ಬ್ರಹ್ಮಶಿವ ಸಮಯ ಪರೀಕ್ಷೆ, ನಯನಸೇನನ ಧರ್ಮಾಮೃತ ಸೇರಿ ಹೀಗೆ 16 ಜೈನ ಕವಿಗಳನ್ನು ಗುರುತಿಸಿದ್ದಾರೆ. ಅರಿಹಂತ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಮಹಾವೀರ ಸಗರಿ ಅವರು 32 ಜೈನ ಕವಿಗಳನ್ನು ಗುರುತಿಸಿದ್ದಾರೆ ಎಂದು ಹೇಳಿದರು.
ಅರಿಹಂತ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷರಾದ ಮಹಾವೀರ ಸಗರಿ ಮಾತನಾಡಿ, ದತ್ತಿ ದಾನಿಗಳ ಹೆಸರಿನಲ್ಲಿ ಪ್ರತಿ ವರ್ಷ ನಿರಂತರವಾಗಿ ಕಾರ್ಯಕ್ರಮ ಜರುಗಿಸುವುದಾಗಿ ತಿಳಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.