ರಾಮನಾಥಪುರದಲ್ಲಿ ಮಠದ ಅಭಿವೃದ್ಧಿ ಕಾಮಗಾರಿ ವೀಕ್ಷಿಸಿದ ಅಶೋಕ್‌ ಹಾರನಹಳ್ಳಿ

KannadaprabhaNewsNetwork |  
Published : Jan 24, 2026, 02:45 AM IST
23ಎಚ್ಎಸ್ಎನ್3 :  ರಾಮನಾಥಪುರದ ಶ್ರೀ ಭಾರತೀತೀರ್ಥಕೃಪಾ ಭವನದಲ್ಲಿ ಶೃಂಗೇರಿ ಶಂಕರ ಮಠದ ವ್ಯವಸ್ಥಾಪಕರಾದ ಕೊಣನೂರು  ಕೆ. ಗಣೇಶ್ ಅವರು  ಮಾಜಿ ಅಡ್ವಕೇಟ್ ಜನರಲ್ಶ್ರೀ ಅಶೋಕ್ ಹಾರನಹಳ್ಳಿ ಅವರನ್ನು ಗೌರವಿಸಿದರು. | Kannada Prabha

ಸಾರಾಂಶ

ರಾಮನಾಥಪುರದ ಕಾವೇರಿ ನದಿ ದಂಡೆಯಲ್ಲಿರುವ ಪುಷ್ಕರಣಿ ಹಾಗೂ ಚತುರ್ಯುಗಮೂರ್ತಿ ಶ್ರೀರಾಮೇಶ್ವರ ದೇವಾಲಯದ ಪಕ್ಕದಲ್ಲಿ ನಿರ್ಮಾಣವಾಗಿರುವ ಶೃಂಗೇರಿ ಶಾಖಾ ಮಠದ ಶ್ರೀ ಭಾರತೀತೀರ್ಥ ಕೃಪಾಭವನದಲ್ಲಿ ಗೌರವ ಸಮರ್ಪಣೆ ಪಡೆದ ನಂತರ ಕಾಮಗಾರಿ ನಡೆಯುತ್ತಿರುವ ದೇವಾಲಯಗಳ ನಿರ್ಮಾಣದ ವೀಕ್ಷಣೆ ಮಾಡಿದ ನಂತರ ಮಾತನಾಡಿದ ಅವರು, ಸುಮಾರು 2 ಕೋಟಿ ರುಪಾಯಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಶೃಂಗೇರಿ ಮಠದ ಜಾಗದಲ್ಲಿ ದೇವಾಲಯ ಹಾಗೂ ಮಠದ ಅಭಿವೃದ್ಧಿಗೆ ಸಹಾಯ ಸಹಕಾರ ನೀಡಲಾಗುವುದು. ಅಲ್ಲದೇ ಹೆಚ್ಚಿನ ರೀತಿಯಲ್ಲಿ ಇನ್ನೂ ಹಲವಾರು ಭಕ್ತರಿಂದ ಸಹಾಯ ಸಹಕಾರ ಕೊಡಿಸುದಾಗಿ ಭರವಸೆ ನೀಡಿದರು.

ಕನ್ನಡಪ್ರಭ ವಾರ್ತೆ ರಾಮನಾಥಪುರ

ಕಾವೇರಿ ನದಿ ದಂಡೆಯಲ್ಲಿರುವ ಶೃಂಗೇರಿ ಶಂಕರಮಠದ ಜಾಗದಲ್ಲಿ ಶ್ರೀ ಗಣಪತಿ ಜಗನ್ಮಾತೆ ಶಾರದಾಂಬೆ ಹಾಗೂ ಶಂಕರಭಗವತ್ಪಾದರ ಪ್ರತ್ಯೇಕ ಕಲ್ಲಿನ ಗರ್ಭಗುಡಿಗಳ ಜೊತೆಗೆ ಪ್ರಾಂಗಣದೊಳಗೆ ಹೊಂದಿಕೊಂಡಿರುವ ಮತ್ತು ಪ್ರತ್ಯೇಕ ವಿಮಾನ ಗೋಪುರ ಮತ್ತು ರಾಜಗೋಪುರಗಳು ಅಭಿವೃದ್ಧಿಗೆ ಪ್ರತಿಯೊಬ್ಬರು ಸಹಕರಿಸಿಬೇಕೆಂದು ಮಾಜಿ ಅಡ್ವೋಕೇಟ್ ಜನರಲ್ ಅಶೋಕ್ ಹಾರನಹಳ್ಳಿ ತಿಳಿಸಿದರು.

ರಾಮನಾಥಪುರದ ಕಾವೇರಿ ನದಿ ದಂಡೆಯಲ್ಲಿರುವ ಪುಷ್ಕರಣಿ ಹಾಗೂ ಚತುರ್ಯುಗಮೂರ್ತಿ ಶ್ರೀರಾಮೇಶ್ವರ ದೇವಾಲಯದ ಪಕ್ಕದಲ್ಲಿ ನಿರ್ಮಾಣವಾಗಿರುವ ಶೃಂಗೇರಿ ಶಾಖಾ ಮಠದ ಶ್ರೀ ಭಾರತೀತೀರ್ಥ ಕೃಪಾಭವನದಲ್ಲಿ ಗೌರವ ಸಮರ್ಪಣೆ ಪಡೆದ ನಂತರ ಕಾಮಗಾರಿ ನಡೆಯುತ್ತಿರುವ ದೇವಾಲಯಗಳ ನಿರ್ಮಾಣದ ವೀಕ್ಷಣೆ ಮಾಡಿದ ನಂತರ ಮಾತನಾಡಿದ ಅವರು, ಸುಮಾರು 2 ಕೋಟಿ ರುಪಾಯಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಶೃಂಗೇರಿ ಮಠದ ಜಾಗದಲ್ಲಿ ದೇವಾಲಯ ಹಾಗೂ ಮಠದ ಅಭಿವೃದ್ಧಿಗೆ ಸಹಾಯ ಸಹಕಾರ ನೀಡಲಾಗುವುದು. ಅಲ್ಲದೇ ಹೆಚ್ಚಿನ ರೀತಿಯಲ್ಲಿ ಇನ್ನೂ ಹಲವಾರು ಭಕ್ತರಿಂದ ಸಹಾಯ ಸಹಕಾರ ಕೊಡಿಸುದಾಗಿ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಶೃಂಗೇರಿ ಶ್ರೀ ಶಂಕರಮಠದ ವ್ಯವಸ್ಥಾಪಕರಾದ ಕೊಣನೂರು ಕೆ. ಗಣೇಶ್ ಹಿರಿಯ ಪತ್ರಕರ್ತ ಎಂ.ಎನ್. ಕುಮಾರಸ್ವಾಮಿ ಮುಂತಾದವರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶಿಕ್ಷಣಕ್ಕೆ ಸಿದ್ಧಗಂಗಾ ಮಠದ ಕೊಡುಗೆ ಅನನ್ಯ
ಪಟ್ಟಣದ ಬೀದಿ ಬದಿ ವ್ಯಾಪಾರಸ್ಥರ ಹಿತ ಕಾಪಾಡಿ