ಏಷ್ಯನ್‌ ಓಪನ್‌ ಟೇಕ್ವಾಂಡೋ: ದೊಡ್ಡಬಳ್ಳಾಪುರಕ್ಕೆ 36 ಪದಕ

KannadaprabhaNewsNetwork |  
Published : Sep 21, 2025, 02:00 AM IST
ದೊಡ್ಡಬಳ್ಳಾಪುರದ ಟೇಕ್ವಾಂಡೋ ಪಟುಗಳು ಹೈದರಾಬಾದ್‌ನಲ್ಲಿ ನಡೆದ ಏಷ್ಯನ್‌ ಓಪನ್‌ ಅಂತಾರಾಷ್ಟ್ರೀಯ ಟೇಕ್ವಾಂಡೋ ಛಾಂಪಿಯನ್‌ಷಿಪ್‌ನಲ್ಲಿ ಹಲವು ಪದಕಗಳನ್ನು ಪಡೆದಿದ್ದಾರೆ. | Kannada Prabha

ಸಾರಾಂಶ

ಸಬ್‌ಜೂನಿಯರ್‌ 8 ರಿಂದ 11 ವರ್ಷದೊಳಗಿನ ವಿಭಾಗದಲ್ಲಿ ಡಿ.ಯು ನಂದನ್‌- 2 ಹಾಗೂ ಎಸ್‌.ವರ್ಷನ್‌ ತಲಾ 2 ಚಿನ್ನ, ಆರ್‌.ಹೃತಿಕ್‌ 1 ಚಿನ್ನ, 1 ಬೆಳ್ಳಿ, ಎಸ್.ದೀಕ್ಷಿತ್‌- 1 ಚಿನ್ನ, 1 ಕಂಚು, ಮನ್ವಿತ್‌ ಗೌಡ- 2 ಚಿನ್ನ, ಕೆ.ವೈ ಪರೀಕ್ಷಿತ್‌- 2 ಚಿನ್ನ, ಬಾಲಕಿಯರ ವಿಭಾಗದಲ್ಲಿ ಚಿನ್ಮಯಿ- 2 ಚಿನ್ನ, ಪಿ.ದೀಕ್ಷಾ - 1 ಬೆಳ್ಳಿ, 1 ಚಿನ್ನ, ಆರ್.ತಮನ್ನಾ- 2 ಚಿನ್ನದ ಪದಕಗಳನ್ನು ಪಡೆದಿದ್ದಾರೆ.

ದೊಡ್ಡಬಳ್ಳಾಪುರ: ಹೈದರಾಬಾದ್‌ನಲ್ಲಿ ನಡೆದ ಮೊದಲ ಏಷ್ಯನ್‌ ಓಪನ್‌ ಅಂತಾರಾಷ್ಟ್ರೀಯ ಟೇಕ್ವಾಂಡೋ ಚಾಂಪಿಯನ್‌ಷಿಪ್‌ನಲ್ಲಿ ಇಲ್ಲಿನ ಶಂಕರ್‌ ಟೇಕ್ವಾಂಡೋ ಅಕಾಡೆಮಿ ಹಾಗೂ ನ್ಯಾಷನಲ್‌ ಪ್ರೈಡ್‌ ಶಾಲೆಯಿಂದ ಪಾಲ್ಗೊಂಡಿದ್ದ ಹಲವು ಕ್ರೀಡಾಪಟುಗಳು 31 ಚಿನ್ನ, 4 ಬೆಳ್ಳಿ ಹಾಗೂ 1 ಕಂಚಿನ ಪದಕ ಸೇರಿ ಒಟ್ಟಾರೆ 36 ಪದಕಗಳನ್ನು ಪಡೆದಿದ್ದಾರೆ.

ಸಬ್‌ಜೂನಿಯರ್‌ 8 ರಿಂದ 11 ವರ್ಷದೊಳಗಿನ ವಿಭಾಗದಲ್ಲಿ ಡಿ.ಯು ನಂದನ್‌- 2 ಹಾಗೂ ಎಸ್‌.ವರ್ಷನ್‌ ತಲಾ 2 ಚಿನ್ನ, ಆರ್‌.ಹೃತಿಕ್‌ 1 ಚಿನ್ನ, 1 ಬೆಳ್ಳಿ, ಎಸ್.ದೀಕ್ಷಿತ್‌- 1 ಚಿನ್ನ, 1 ಕಂಚು, ಮನ್ವಿತ್‌ ಗೌಡ- 2 ಚಿನ್ನ, ಕೆ.ವೈ ಪರೀಕ್ಷಿತ್‌- 2 ಚಿನ್ನ, ಬಾಲಕಿಯರ ವಿಭಾಗದಲ್ಲಿ ಚಿನ್ಮಯಿ- 2 ಚಿನ್ನ, ಪಿ.ದೀಕ್ಷಾ - 1 ಬೆಳ್ಳಿ, 1 ಚಿನ್ನ, ಆರ್.ತಮನ್ನಾ- 2 ಚಿನ್ನದ ಪದಕಗಳನ್ನು ಪಡೆದಿದ್ದಾರೆ.

12ರಿಂದ 14 ವರ್ಷದೊಳಗಿನವರ ವಿಭಾಗದಲ್ಲಿ ಕೆ.ವೈ.ವಿಶಾಲ್‌ - 2 ಚಿನ್ನ, ತುಷಾರ್‌ ಸಾಯಿ ಯಾದವ್‌- 2 ಚಿನ್ನ, ಪುರುಷರ ಜೂನಿಯರ್‌ 15 ರಿಂದ 17 ವರ್ಷದೊಳಗಿನ ವಿಭಾಗದಲ್ಲಿ ಜಾಶನ್‌ - 2 ಚಿನ್ನ, ಮಿನಿ ಸಬ್‌ ಜೂನಿಯರ್‌ 5 ರಿಂದ 7 ವರ್ಷದೊಳಗಿನ ವಿಭಾಗದಲ್ಲಿ ಜಿ.ಯುಗಾಂತ್‌- 2 ಚಿನ್ನ, ವಿಕ್ರಾಂತ್‌ಗೌಡ- 2 ಚಿನ್ನ, ವೈ.ಎ.ಆಯುಷ್‌ಗೌಡ- 1 ಚಿನ್ನ, 1 ಬೆಳ್ಳಿ, ಎಸ್.ಹೇಮಂತ್‌ - 1 ಚಿನ್ನ, 1 ಬೆಳ್ಳಿ, ಬಾಲಕಿಯರ ವಿಭಾಗದಲ್ಲಿ ಶೃತಿ - 2 ಚಿನ್ನ, ಎಸ್.ಶಾನ್ವಿ- 2 ಚಿನ್ನದ ಪದಕಗಳನ್ನು ಪಡೆದಿದ್ದಾರೆ.

ಪದಕ ವಿಜೇತರನ್ನು ಬೆಂ.ಗ್ರಾ ಜಿಲ್ಲಾ ಕರ್ನಾಟಕ ಟೇಕ್ವಾಂಡೋ ಅಕಾಡೆಮಿ ಉಪಾಧ್ಯಕ್ಷ ವಿ.ನಾರಾಯಣಸ್ವಾಮಿ, ಶಂಕರ್‌ ಟೇಕ್ವಾಂಡೋ ಅಕಾಡೆಮಿ ಅಧ್ಯಕ್ಷ ಜಿ.ಸಿ.ರಮೇಶ್, ತರಬೇತುದಾರರಾದ ಆರ್.ಶಂಕರ್‌, ಆರ್.ರಮ್ಯ ಮತ್ತಿತರರು ಅಭಿನಂದಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪೊಲೀಸರಿಗೆ ಹಣಕ್ಕೆ ಬೇಡಿಕೆ ಇಟ್ಟ ಆರೋಪ : ಪತ್ರಕರ್ತ ವಶ
ಪೊಲೀಸ್ ವಾಹನದಲ್ಲಿ ಕುಡುಕರು ಮನೆಗೆ : ವ್ಯವಸ್ಥೆಗೆ ಆಕ್ಷೇಪ