ಕನ್ನಡಪ್ರಭ ವಾರ್ತೆ ಹಳಿಯಾಳ
ಗ್ರಾಮದಲ್ಲಿ ಅಶಾಂತಿ ವಾತಾವರಣ ನಿರ್ಮಾಣ ಮಾಡಿದ ಗಣಪತಿ ಸಹದೇವ ಕರಂಜೇಕರ ಅವರನ್ನು ಗಡಿಪಾರು ಮಾಡಬೇಕೆಂದು ಆಗ್ರಹಿಸಿದ್ದಾರೆ.
ಕೆಸರೊಳ್ಳಿ ಗ್ರಾಮದ ಗಣಪತಿ ಸಹದೇವ ಕರಂಜೇಕರ ತಮ್ಮ ಕುಟುಂಬದ ಪ್ರಭಾವ ಬಳಸಿ ಗ್ರಾಮದ ಅಮಾಯಕರ ಮೇಲೆ ನಿರಂತರ ಹಲ್ಲೆ ನಡೆಸುತ್ತಾ ಬಂದಿರುತ್ತಾರೆ. ಈ ಹಿಂದೆಯೋ ಪೊಲೀಸ್ ಇಲಾಖೆ, ಹೆಸ್ಕಾಂ ಹಾಗೂ ವಿವಿಧ ಸರ್ಕಾರಿ ಇಲಾಖೆಯ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದಾರೆ. ಇವರ ಕುಟುಂಬದ ಸಹೋದರರ ಮೇಲೆ ಪ್ರಕರಣದ ದಾಖಲಾಗಿದ್ದು, ಗಣಪತಿ ಕರಂಜೇಕರ ಮೇಲೂ ರೌಡಿಶೀಟರ್ ತೆರೆಯಲಾಗಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.ಈ ವೇಳೆ ಕೆಸರೊಳ್ಳಿ ಗ್ರಾಮಸ್ಥರ ಪರವಾಗಿ ಡೊಂಗ್ರು ಕೆಸರೇಕರ, ಡೊಂಗ್ರು ಜುವೇಕರ, ಗಿರಿಜಾರಾಮ ಅಳ್ವಣಕರ, ಮುಸ್ಲಿಂ ಸಮುದಾಯದ ಪ್ರಮುಖ ಮೆಹಬೂಬ ಸುಭಾನಿ ಸನದಿ, ಉಮರಖಾನ್ ಮುಕ್ತೆಸರ್, ಕ್ರೈಸ್ತ ಸಮುದಾಯದ ಪ್ರಮುಖರಾದ ದಿಯೇಗಬಾಳಾ ಪಿಂಟೋ, ಮೇರಿ ರೋಜಾರಿಯೋ, ಕಮಲ ಸಿಕ್ವೇರಾ, ಸಂತಾನ ಸಾವಂತ, ಅನಿಲ ಫರ್ನಾಂಡೀಸ್, ರೋಹನ ಬೃಗಾಂಜಾ, ರೋಖಿ ಕ್ರಾಸ್ತಾ, ಎಪಿಪನ್ ಪಿರೇರಾ ಹಾಗೂ ಇತರರು ಇದ್ದರು.
ಹಳಿಯಾಳ ತಾಲೂಕಿನ ಕೆಸರೊಳ್ಳಿ ಗ್ರಾಮದ ಮೀನಿನ್ ಪಾವಲು ಸೋಜ ಎಂಬವರ ಮೇಲೆ ಹಲ್ಲೆ ನಡೆಸಿದ ಕುರಿತು ಹಳಿಯಾಳ ಠಾಣೆಯಲ್ಲಿ ಗುರುವಾರ ರಾತ್ರಿ ದೂರು ದಾಖಲಾಗಿದೆ. ಗ್ರಾಮದ ಕರಂಜೇಕರ ಸಹೋದರರಾದ ಗಣಪತಿ ಸಹದೇವ ಕರಂಜೇಕರ, ಸತೀಶ ಅಶೋಕ ಕರಂಜೇಕರ, ಶಿವಾಜಿ ಸಹದೇವ ಕರಂಜೇಕರ, ಲೋಕಪ್ಪಾ ಸಹದೇವ ಕರಂಜೇಕರ ಮಾರಣಾಂತಿಕವಾಗಿ ಹಲ್ಲೆಮಾಡಿ ಜೀವಬೆದರಿಕೆ ಒಡ್ಡಿದಾರೆಂದು ಅಂತೋನ ಪಾವ್ಲು ಸೋಜ ಎಂಬವರು ದೂರು ದಾಖಲಿಸಿದ್ದಾರೆ.