ಆತ್ಮಿ ಸಂಸ್ಥೆಯ ನಿಸ್ವಾರ್ಥ ಸೇವೆ ಇತರರಿಗೂ ಮಾದರಿ: ಎಎಸ್‌ಪಿ ವಿಜಯಕುಮಾರ ಎಸ್‌.ಸಂತೋಷ

KannadaprabhaNewsNetwork |  
Published : Jan 09, 2025, 12:49 AM IST
7ಕೆಡಿವಿಜಿ11-ದಾವಣಗೆರೆಯಲ್ಲಿ ಆತ್ಮಿ ಅಸೋಸಿಯೇಷನ್‌ನ 2ನೇ ವಾರ್ಷಿಕೋತ್ಸವ ಸತ್ವ ಸಂಗಮದಲ್ಲಿ ನಲ್ಲೂರು ರಾಘವೇಂದ್ರ, ಬಿ.ಪ್ರಸನ್ನ, ಜಿ.ಎಸ್.ಶೋಭಾ, ಲಕ್ಷ್ಮಿ ಅಜಿತ್ ಇತರರು. | Kannada Prabha

ಸಾರಾಂಶ

ಬಿಡುವಿಲ್ಲದ ಜೀವನ ಜಂಜಾಟದ ಮಧ್ಯೆಯೂ ಗೃಹಿಣಿಯರು, ಯುವತಿಯರು ಆತ್ಮಿ ಅಸೋಸಿಯೇಷನ್ ಮೂಲಕ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿರುವುದು ಇತರರಿಗೂ ಪ್ರೇರಣೆಯಾಗಿದೆ ಎಂದು ಹೆಚ್ಚುವರಿ ಪೊಲೀಸ್ ಅಧೀಕ್ಷಕ ವಿಜಯಕುಮಾರ ಎಂ.ಸಂತೋಷ ಶ್ಲಾಘಿಸಿದರು. ದಾವಣಗೆರೆಯಲ್ಲಿ ಆತ್ಮಿ ಅಸೋಸಿಯೇಷನ್ ಎರಡನೇ ವರ್ಷ ಸಮಾರಂಭದಲ್ಲಿ ಮಾತನಾಡಿದರು.

ಸತ್ವ ಸಂಗಮ ಸಮಾರಂಭ । ಸಮಾನ ಮನಸ್ಕ ಗೃಹಿಣಿಯರ ಮಾನವೀಯ ಕಾರ್ಯ ಎಲ್ಲರಿಗೂ ಪ್ರೇರಣೆ

ಕನ್ನಡಪ್ರಭ ವಾರ್ತೆ ದಾವಣಗೆರೆ

ಬಿಡುವಿಲ್ಲದ ಜೀವನ ಜಂಜಾಟದ ಮಧ್ಯೆಯೂ ಗೃಹಿಣಿಯರು, ಯುವತಿಯರು ಆತ್ಮಿ ಅಸೋಸಿಯೇಷನ್ ಮೂಲಕ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿರುವುದು ಇತರರಿಗೂ ಪ್ರೇರಣೆಯಾಗಿದೆ ಎಂದು ಹೆಚ್ಚುವರಿ ಪೊಲೀಸ್ ಅಧೀಕ್ಷಕ ವಿಜಯಕುಮಾರ ಎಂ.ಸಂತೋಷ ಶ್ಲಾಘಿಸಿದರು.

ಬಿಡುವಿಲ್ಲದ ಜೀವನ ಜಂಜಾಟದ ಮಧ್ಯೆಯೂ ಗೃಹಿಣಿಯರು, ಯುವತಿಯರು ಆತ್ಮಿ ಅಸೋಸಿಯೇಷನ್ ಮೂಲಕ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿರುವುದು ಇತರರಿಗೂ ಪ್ರೇರಣೆಯಾಗಿದೆ ಎಂದು ಹೆಚ್ಚುವರಿ ಪೊಲೀಸ್ ಅಧೀಕ್ಷಕ ವಿಜಯಕುಮಾರ ಎಂ.ಸಂತೋಷ ಶ್ಲಾಘಿಸಿದರು. ದಾವಣಗೆರೆಯಲ್ಲಿ ಆತ್ಮಿ ಅಸೋಸಿಯೇಷನ್ ಎರಡನೇ ವರ್ಷ ಸಮಾರಂಭದಲ್ಲಿ ಮಾತನಾಡಿದರು.

ನಗರದ ಶ್ರೀಮತಿ ಗೌರಮ್ಮ ನರಹರಿಶೇಟ್ ಕಲಾ ಭವನದಲ್ಲಿ ಆತ್ಮಿ ಅಸೋಸಿಯೇಷನ್ ಹಮ್ಮಿಕೊಂಡಿದ್ದ 2ನೇ ವರ್ಷದ ಸತ್ವ ಸಂಗಮ ಸಮಾರಂಭ ಉದ್ಘಾಟಿಸಿ ಮಾತನಾಡಿ, ತಮ್ಮ ಕುಟುಂಬ ನಿರ್ವಹಣೆ, ತಮ್ಮ ಉದ್ಯೋಗ ಹೀಗೆ ಎಲ್ಲವನ್ನೂ ಸರಿದೂಗಿಸಿಕೊಂಡು, ಸಮಾನ ಮನಸ್ಕ ಗೃಹಿಣಿಯರು, ಯುವತಿಯರು ಹೀಗೆ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿ ಇತರರಿಗೂ ಮಾದರಿಯಾಗಿರುವುದು ಆತ್ಮಿ ಸಂಸ್ಥೆಯಲ್ಲಿ ಕಾಣಬಹುದು ಎಂದರು.

ಅಂಧ ಮಕ್ಕಳು, ವಿಶೇಷಚೇತನರು, ವಯೋವೃದ್ಧರಿಗೆ ನಿರಂತರ ಆತ್ಮಿ ಸಹಾಯಹಸ್ತ ಚಾಚುತ್ತಿರುವುದು ಗಮನಾರ್ಹ. ಹೀಗೆ ಎಲ್ಲರ ಮನಮುಟ್ಟುವಂತಹ ಕಾರ್ಯಗಳ ಮೂಲಕ ಸಂಸ್ಥೆಯ ಸ್ಥಾಪನೆಯ ಉದ್ದೇಶವನ್ನು ಸಾರ್ಥಕಗೊಳಿಸುವ ಕೆಲಸ ಮಾಡುತ್ತಿದ್ದೀರಿ. ಇಂತಹ ವೇದಿಕೆ ಮೂಲಕ ಹಲವಾರು ಸೇವಾ ಕಾಯಕ ಮಾಡಿದವರನ್ನೂ ಗುರುತಿಸಿ, ಗೌರವಿಸುವ ಕಾರ್ಯ ಸಹ ಮೆಚ್ಚುವಂತಹದ್ದು ಎಂದು ಹೇಳಿದರು.

18 ವರ್ಷದೊಳಗಿನ ಮಕ್ಕಳಿಗೆ ತೊಂದರೆಯಾದರೆ, ಮನೆಗೆ ಬರದಿದ್ದರೆ ತಕ್ಷಣ‍ೇ 1091 ನಂಬರ್‌ ಸಹಾಯವಾಣಿಗೆ ಕರೆ ಮಾಡಿದರೆ, ಕೇವಲ 10 ನಿಮಿಷದಲ್ಲಿ ನಿಮ್ಮ ಸಹಾಯಕ್ಕೆ ಪೊಲೀಸ್ ಸಿಬ್ಬಂದಿ ಬರುತ್ತಾರೆ. ಇತ್ತೀಚೆಗೆ ಅಪರಾಧ ಕೃತ್ಯಗಳ ಜೊತೆಗೆ ಸೈಬರ್ ಕ್ರೈಂ ಸಹ ಹೆಚ್ಚುತ್ತಿದೆ. ಸಾಕಷ್ಟು ಜನರು ಇಂತಹ ಆನ್ ಲೈನ್ ವಂಚಕರ ಜಾಲಕ್ಕೆ ಸಿಕ್ಕಿ ಸಾಕಷ್ಟು ಜನ ಹಣ ಕಳೆದುಕೊಳ್ಳುತ್ತಿದ್ದಾರೆ. ಈ ಬಗ್ಗೆ ಜಾಗ್ರತೆ ವಹಿಸಿ. ಸಾಮಾಜಿಕ ಜಾಲತಾಣಗಳಲ್ಲಿ ವೈಯಕ್ತಿಕ ಮಾಹಿತಿ, ಫೋಟೋಗಳನ್ನು ಹಂಚಿಕೊಳ್ಳಬೇಡಿ ಎಂದು ಎಎಸ್ಪಿ ವಿಜಯಕುಮಾರ ಸಂತೋಷ ಎಚ್ಚರಿಸಿದರು.

ಯುವ ಉದ್ಯಮಿ ನಲ್ಲೂರು ಎಸ್.ರಾಘವೇಂದ್ರ ಮಾತನಾಡಿ, ಆತ್ಮಿ ಅಸೋಸಿಯೇಷನ್ ಮಾನವೀಯ ಕಾರ್ಯಗಳನ್ನು ಬರುತ್ತಿರುವುದು ಶ್ಲಾಘನೀಯವಾಗಿದೆ ಎಂದರು.

ಶ್ರೀ ಪುಟ್ಟರಾಜ ಗವಾಯಿಗಳ ಶ್ರೀ ವೀರೇಶ್ವರ ಪುಣ್ಯಾಶ್ರಮದ ಮಕ್ಕಳು ವಚನ ಗೀತೆ ಹಾಡಿದರು. ಹಿರಿಯ ವೈದ್ಯೆ ಡಾ.ಶುಕ್ಲಾ ಶೆಟ್ಟಿ, ಹಿರಿಯ ಕಲಾವಿ

ದರಾದ ಚಿಂದೋಡಿ ಮಧುಕೇಶ, ಹಿರಿಯ ವರ್ತಕ ಆರ್.ಜಿ.ನಾಗೇಂದ್ರ ಪ್ರಕಾಶ್‌ರಿಗೆ ಆತ್ಮಿ ಸೇವಾ ರತ್ನ ಪ್ರಶಸ್ತಿ ನೀಡಿ, ಗೌರವಿಸಲಾಯಿತು.

ಆತ್ಮೀ ಅಸೋಸಿಯೇಷನ್ ನಿಂದ ವೃದ್ಧಾಶ್ರಮದ ವೃದ್ಧರಿಗೆ ಕಣ್ಣಿನ ಪರೀಕ್ಷೆ ಮಾಡಿಸಿ, ಕನ್ನಡಕ ವಿತರಿಸಲಾಯಿತು. ಜಿಲ್ಲೆಯ ಸುಮಾರು 15 ಶಾಲೆ ಆಯಾಗಳಿಗೆ ಸೀರೆ ವಿತರಿಸಲಾಯಿತು. ಮಹಿಳಾ ಸ್ವಉದ್ಯೋಗಕ್ಕಾಗಿ ಹೊಲಿಗೆ ಯಂತ್ರ ಮತ್ತು ಇಸ್ತ್ರೀಪೆಟ್ಟಿಗೆ ವಿತರಿಸಲಾಯಿತು. ಇನ್ನೂ ಅನೇಕ ಸೇವಾ ಕಾರ್ಯ ಕೈಗೊಳ್ಳಲಾಯಿತು.

ಆತ್ಮಿ ಸಂಸ್ಥೆಯ ಅಧ್ಯಕ್ಷೆ ಬಿ.ಪ್ರಸನ್ನ, ಹಿರಿಯ ಜವಳಿ ವರ್ತಕರಾದ ಬಿ.ಸಿ.ಚಂದ್ರಶೇಖರ, ಸಂಸ್ಥೆಯ ಕಾರ್ಯದರ್ಶಿ ಜಿ.ಎಸ್.ಶೋಭಾ, ಖಜಾಂಚಿ ಲಕ್ಷ್ಮಿ ಅಜಿತ್‌, ಕಾತ್ಯಾಯಿನಿ ಸಿ.ಕೆ.ಅನಿಲಕುಮಾರ, ಟಿ.ಗಾಯತ್ರಿ, ಎಚ್.ಗಿರೀಶ, ಸದಸ್ಯರಾದ ನಂದಿನಿ ಗಂಗಾಧರ, ಪಾಲ್ಗುಣಿ ಸಮೀರ್, ನೀತಾ ವಿಕ್ರಂ ಅಂಬರಕರ್, ರೋಷಣಿ ವಿನೋದ, ಸಂಗೀತ ದಯಾನಂದ, ಸುಲೋಚನಾ ಸತೀಶ, ಶಾಂತಲಾ ಉಮಾಪತಯ್ಯ ಇತರರು ಇದ್ದರು.

PREV

Recommended Stories

ಹೆತ್ತವರ ಕನಸು ನನಸಾಗಿಸುವುದೇ ಮಕ್ಕಳ ಗುರಿಯಾಗಿರಲಿ: ಸಚಿವೆ ಹೆಬ್ಬಾಳ್ಕರ್
ರಾಜ್ಯದ ಅರ್ಥ ವ್ಯವಸ್ಥೆ ಆರೋಗ್ಯವಂತವಾಗಿದೆ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್