ಆಸ್ಪತ್ರೆಗಳ ಮೇಲೆ ದಾಳಿ: ನಕಲಿ ವೈದ್ಯನ ಬಂಧನ

KannadaprabhaNewsNetwork |  
Published : Jan 09, 2024, 02:00 AM IST
 ಜೇವರ್ಗಿ : ತಾಲ್ಲೂಕಿನ ನಕಲಿ  ವೈದ್ಯರ ಮೇಲೆ ದಾಳಿ ನಕಲಿ ಆಸ್ಪತ್ರೆಗಳು ಸಿಜ್ ಮಾಡಿಸಿದ ಅಧಿಕಾರಿಗಳು, ತಹಶೀಲ್ದಾರ ಮಲ್ಲಣ್ಣ ಯಲಗೋಡ, ತಾಲ್ಲುಕು ಆರೋಗ್ಯಾಧಿಕಾರಿ ಡಾ.ಸಿದ್ದು ಪಾಟೀಲ,  ಸಿ.ಪಿಐ ರಾಜೇಸಾಹೇಬ್ ನದಾಫ್, ನೆಲೋಗಿ ಪಿ.ಎಸ್.ಐ. ಅಶೋಕ ಪಾಟೀಲ ಇದ್ದರು. | Kannada Prabha

ಸಾರಾಂಶ

ನಕಲಿ ವೈದ್ಯರ ಹಾವಳಿ ಅಧಿಕವಾಗಿದೆ ಎನ್ನುವ ದೂರುಗಳ ಆದಾರದ ಮೇಲೆ ಜೇವರ್ಗಿಯ ತಹಸೀಲ್ದಾರ್‌ ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳ ತಂಡ ತಾಲ್ಲೂಕಿನ ಅನೇಕ ಕಡೆಗಳಲ್ಲಿ ಮಿಂಚಿನ ದಾಳಿ ನಡೆಸಿ ಒರ್ವ ನಕಲಿ ವೈದ್ಯನನ್ನು ಬಂಧಿಸಿ ೮ ನಕಲಿ ಆಸ್ಪತ್ರೆಗಳನ್ನು ಬಂಧ ಮಾಡಿಸಿದ ಘಟನೆ ಸೋಮವಾರ ನಡೆದಿದೆ.

ಕನ್ನಡಪ್ರಭ ವಾರ್ತೆ ಜೇವರ್ಗಿ

ನಕಲಿ ವೈದ್ಯರ ಹಾವಳಿ ಅಧಿಕವಾಗಿದೆ. ಎನ್ನುವ ದೂರುಗಳ ಆದಾರದ ಮೇಲೆ ತಹಸೀಲ್ದಾರ್‌ ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳ ತಂಡ ತಾಲೂಕಿನ ಅನೇಕ ಕಡೆಗಳಲ್ಲಿ ಮಿಂಚಿನ ದಾಳಿ ನಡೆಸಿ ಒರ್ವ ನಕಲಿ ವೈದ್ಯನನ್ನು ಬಂಧಿಸಿ ೮ ನಕಲಿ ಆಸ್ಪತ್ರೆಗಳನ್ನು ಬಂಧ ಮಾಡಿಸಿದ ಘಟನೆ ಸೋಮವಾರ ನಡೆದಿದೆ.

ತಾಲ್ಲೂಕಿನ ನೆಲೋಗಿಯಲ್ಲಿ ಇಬ್ಬರು, ಸೊನ್ನದಲ್ಲಿ ಮೂರು ಜನ, ನೇದಲಗಿಯಲ್ಲಿ ಇಬ್ಬರು, ಜೇರಟಗಿಯಲ್ಲಿ ಇಬ್ಬರು ಸೇರಿದಂತೆ 8ಜನ ನಕಲಿ ವೈದ್ಯರ ಆಸ್ಪತ್ರೆಗಳನ್ನು ಮುಚ್ಚಿಸಿ ಓರ್ವನನ್ನು ಬಂಧಿಸಲಾಗಿದ್ದು, 7 ಜನ ನಕಲಿ ವೈದ್ಯರು ಪರಾರಿಯಾಗಿದ್ದಾರೆ.ಸೆರೆ ಸಿಕ್ಕ ಒಬ್ಬ ವೈದ್ಯನನ್ನು ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ. ಜೇವರ್ಗಿ ಮತ್ತು ಯಡ್ರಾಮಿ ತಾಲ್ಲೂಕಿನಲ್ಲಿರುವ ನಕಲಿ ವೈದ್ಯರನ್ನು ಗುರುತಿಸಿ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಾಲೂಕು ಆರೋಗ್ಯ ಅಧಿಕಾರಿ ಡಾ. ಸಿದ್ದು ಪಾಟೀಲ ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ತಹಶೀಲ್ದಾರ್ ಮಲ್ಲಣ್ಣ ಯಲಗೋಡ, ಜೇವರ್ಗಿ ಸಿ.ಪಿಐ ರಾಜೇಸಾಹೇಬ್ ನದಾಫ್, ನೆಲೋಗಿ ಪಿ.ಎಸ್.ಐ. ಅಶೋಕ ಪಾಟೀಲ ಸೇರಿದಂತೆ ಆರೋಗ್ಯ ಇಲಾಖೆಯ ವೈದ್ಯಾಧಿಕಾರಿಗಳು ಹಾಗೂ ಸಿಬ್ಬಂದಿ ನಕಲಿ ವೈದ್ಯರ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಗೆಹರಿಸಿಕೊಳ್ಳಲು ನಮ್ಮಲ್ಲಿ ಸಮಸ್ಯೆಗಳೇ ಇಲ್ಲ : ಡಿಕೆಶಿ!
ರಾಜಣ್ಣ ನೇಮಿಸಿದ್ದು ನಾನೇ ಎಂದ ಡಿಕೆಗೆ ಸಿದ್ದು ಟಾಂಗ್‌