-ದಾಳಿ ವ್ಯಕ್ತಿಗತ ದಾಳಿಯಲ್ಲ, ಅದು ಅಹಿಂದ ವರ್ಗದ ಮೇಲಿನ ದಾಳಿ । ಕಾಂಗ್ರೆಸ್ ಮುಖಂಡರ ಆಕ್ರೋಶ । ಕಿಡಿಗೇಡಿಗಳ ವಿರುದ್ಧ ಎಫ್ಐಆರ್ಗೆ ಆಗ್ರಹ
ಕೆಂಪೇಗೌಡ ಜಯಂತಿ ಕಾರ್ಯಕ್ರಮದಲ್ಲಿ ಶಾಸಕ ಪ್ರದೀಪ್ ಈಶ್ವರ್ ಅವರ ಮೇಲೆ ನಡೆದಿರುವುದು ಕೇವಲ ವ್ಯಕ್ತಿಗತ ದಾಳಿಯಲ್ಲ, ಅದು ಅಹಿಂದ ವರ್ಗದ ಮೇಲಿನ ತೀವ್ರ ದಾಳಿ ಎಂದು ಕಾಂಗ್ರೆಸ್ ಮುಖಂಡರು ಆರೋಪಿಸಿದ್ದಾರೆ.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ದಸಂಸ ಹಿರಿಯ ಮುಖಂಡ ಸು.ದಾ. ವೆಂಕಟೇಶ್ ಮಾತನಾಡಿ ಶನಿವಾರ ನಗರದ ಕನ್ನಡ ಭವನದಲ್ಲಿ ಕಾರ್ಯಕ್ರಮವೂ ಶಾಂತಿಯುತವಾಗಿ ಆರಂಭವಾಗಿತ್ತು. ಆದರೆ ಹೊರಗಿನಿಂದ ಬಂದ ಕೆಲ ಕಿಡಿಗೇಡಿಗಳು, ಮದ್ಯದ ಅಮಲಿನಲ್ಲಿದ್ದವರು ಶಾಸಕರ ಮೇಲೆ ಅಕ್ಷರಶಃ ದಾಳಿ ನಡೆಸಲು ಮುಂದಾಗಿದ್ದು ಸರ್ವಥಾ ಸರಿಯಲ್ಲ ಎಂದರು.ಒಕ್ಕಲಿಗರ ಸಂಘದ ಅಧ್ಯಕ್ಷ ಪಿ.ಎನ್. ಕೇಶವರೆಡ್ಡಿ ಗಲಾಟೆ ಮಾಡುವವರನ್ನು ನಿಯಂತ್ರಿಸುವ ಸಂದರ್ಭದಲ್ಲಿ ಜೋರು ದನಿಯಲ್ಲಿ ಇದು ಅಂಬೇಡ್ಕರ್ ಜಯಂತಿಯಲ್ಲ. ಕೆಂಪೇಗೌಡರ ಜಯಂತಿ. ಶಿಸ್ತನ್ನು ಕಾಪಾಡಿ ಎಂದು ಹೇಳುವ ಮೂಲಕ ಅಂಬೇಡ್ಕರ್ ಮತ್ತು ದಲಿತ ಸಮುದಾಯಕ್ಕೂ ಅಪಮಾನ ಮಾಡಿದ್ದಾರೆ. ಇದು ನಾವು ದೊಡ್ಡ ಸಮುದಾಯ ಎಂದು ಹೇಳಿಕೊಳ್ಳುವವರಿಗೆ ಶೋಭೆ ತರುವುದಿಲ್ಲ. ಕಾರ್ಯಕ್ರಮವನ್ನು ಹಾಳು ಮಾಡಬೇಕು ಎಂದು ದುರುದ್ದೇಶದಿಂದ ಬಂದವರು ಶಾಸಕರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿರುವುದನ್ನು ಕನ್ನಡ ಭವನದಲ್ಲಿದ್ದ ಜನತೆ ಕಣ್ಣಾರೆ ಕಂಡಿದ್ದಾರೆ ಎಂದರು.
ಹಣ ಕೊಟ್ಟು ಗಲಭೆ:
ಸುದ್ದಿಗೋಷ್ಠಿಯಲ್ಲಿ ನಾಯನಹಳ್ಳಿ ನಾರಾಯಣಸ್ವಾಮಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ನಾಗಭೂಷಣ್, ರಕ್ಷಿತ್ ರೆಡ್ಡಿ, ನಗರಸಭೆ ಮಾಜಿ ಸದಸ್ಯ ಮಹಮ್ಮದ್ ಜಾಫರ್, ಮುಖಂಡರಾದ ಕೋಲಾಟ್ಲು ರಾಮಚಂದ್ರ, ನಾಗೇಶ್ ರೆಡ್ಡಿ,ರಮೇಶ್ ಬಾಬು, ನಾರಾಯಣಮ್ಮ ಹಮೀಮ್, ಖಲೀಲ್, ತಿಪ್ಪೇನಹಳ್ಳಿ ನಾರಾಯಣ್, ಪೆದ್ದಣ್ಣ ಸೇರಿದಂತೆ ಹಲವರು ಉಪಸ್ಥಿತರಿದ್ದರು.