ಖೋಟಾನೋಟು ಚಲಾವಣೆ ಯತ್ನ:ಹೊರ ರಾಜ್ಯದ ಮೂವರ ಬಂಧನ

KannadaprabhaNewsNetwork |  
Published : Oct 19, 2025, 01:00 AM IST
Miran Mohiduddin | Kannada Prabha

ಸಾರಾಂಶ

ನಗರದಲ್ಲಿ ಖೋಟಾನೋಟು ಚಲಾವಣೆಗೆ ಯತ್ನಿಸಿದ್ದ ಹೊರ ರಾಜ್ಯದ ಮೂವರನ್ನು ಜಯನಗರ ಠಾಣೆ ಪೊಲೀಸರು ಸೆರೆ ಹಿಡಿದಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ನಗರದಲ್ಲಿ ಖೋಟಾನೋಟು ಚಲಾವಣೆಗೆ ಯತ್ನಿಸಿದ್ದ ಹೊರ ರಾಜ್ಯದ ಮೂವರನ್ನು ಜಯನಗರ ಠಾಣೆ ಪೊಲೀಸರು ಸೆರೆ ಹಿಡಿದಿದ್ದಾರೆ.

ತಮಿಳುನಾಡು ಮೂಲದ ಮೀರ್‌ ಮೊಹಿದ್ದೀನ್‌, ಶೇಕ್‌ ಮೊಹಮ್ಮದ್ ಹಾಗೂ ರಾಜೇಶ್ವರನ್‌ ಬಂಧಿತರಾಗಿದ್ದು, ಈ ಜಾಲದಲ್ಲಿ ತಪ್ಪಿಸಿಕೊಂಡಿರುವ ಇತರೆ ಆರೋಪಿಗಳ ಪತ್ತೆಗೆ ತನಿಖೆ ಮುಂದುವರಿದಿದೆ. ಆರೋಪಿಗಳಿಂದ 500 ರು. ಮುಖ ಬೆಲೆಯ 31 ನಕಲಿ ನೋಟುಗಳು ಹಾಗೂ ಕಾರು ಜಪ್ತಿಯಾಗಿದೆ. ಇತ್ತೀಚೆಗೆ ಜಯನಗರದ ಬಳಿ ಕಾರಿನಲ್ಲಿ ಖೋಟಾನೋಟು ತಂದು ಚಲಾವಣೆಗೆ ಕೆಲವರು ಯತ್ನಿಸಿರುವ ಬಗ್ಗೆ ಮಾಹಿತಿ ಸಿಕ್ಕಿತು. ಈ ಸುಳಿವು ಆಧರಿಸಿ ಸಬ್ ಇನ್ಸ್‌ಪೆಕ್ಟರ್ ಬಸವರಾಜ ಪಾಟೀಲ್ ನೇತೃತ್ವದ ಕಾರ್ಯಾಚರಣೆ ನಡೆಸಿದಾಗ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ತಮಗೆ 10 ಲಕ್ಷ ರು. ಅಸಲಿ ನೋಟು ನೀಡಿದರೆ 30 ಲಕ್ಷ ರು. ಮೌಲ್ಯದ ನಕಲಿ ನೋಟು ಕೊಡುವುದಾಗಿ ತಮಿಳುನಾಡು ಗ್ಯಾಂಗ್ ಆಫರ್‌ ನೀಡಿತ್ತು. ಈ ಮಾತಿಗೆ ಒಪ್ಪಿದ ತಮ್ಮ ಗ್ರಾಹಕರಿಗೆ ಖೋಟು ಪೂರೈಸಲು ಆ ತಂಡದ ಮೂವರು ಬಂದಿದ್ದರು. ಜಯನಗರದ 5ನೇ ಬ್ಲಾಕ್‌ನಲ್ಲಿ ಕಾರಿನಲ್ಲಿ ಕುಳಿತು ಆರೋಪಿಗಳು ಕಾರು ನಿಲ್ಲಿಸಿಕೊಂಡಿದ್ದರು. ಈ ಬಗ್ಗೆ ಖಚಿತ ಮಾಹಿತಿ ಪಡೆದು ದಾಳಿ ನಡೆಸಲಾಯಿತು ಎಂದು ಅಧಿಕಾರಿಗಳು ಹೇಳಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನೀರಿನಲ್ಲಿ ಕಾಳು ಹಾಕಿ ಕಲಬೆರಿಕೆ ಪತ್ತೆ ಮಾಡಿ
ಭಾಷಣ ಮಾಡಿಕೊಂಡು ಹೋದವನಲ್ಲ, ಪಕ್ಷದ ಎಲ್ಲಾ ಕೆಲ್ಸ ಮಾಡಿದ್ದೇನೆ: ಡಿಕೆಶಿ