ಕನ್ನಡಪ್ರಭ ವಾರ್ತೆ ಗುರುಮಠಕಲ್
ತಾಲೂಕಿನ ಚಿಂತನಹಳ್ಳಿ ತಾಂಡಾದಲ್ಲಿ 2023-24ನೇ ಸಾಲಿನ ಕಲ್ಯಾಣ ಕರ್ನಾಟಕ ಮೈಕ್ರೋ (ನಾನ್ ಸೋಶಿಯಲ್) ಅನುದಾನದಲ್ಲಿ 350 ಲಕ್ಷದ ಬಾಕ್ಸ್ ಕಲ್ವರ್ಟ್ ನಿರ್ಮಾಣ ಕಾಮಗಾರಿಗೆ ಅಡಿಗಲ್ಲು ನೆರವೇರಿಸಿ ಅವರು ಮಾತನಾಡಿದರು.
ಈ ರಸ್ತೆ ಕೇವಲ ಚಿಂತನಹಳ್ಳಿ ತಾಂಡಾ ಮಾತ್ರವಲ್ಲದೇ ಸಾಕಷ್ಟು ಗ್ರಾಮಗಳ ಸಂಪರ್ಕ ಕಲ್ಪಿಸುವ ರಸ್ತೆಯಾಗಿದೆ. ಧಾರ್ಮಿಕ ಸ್ಥಳವಾದ ಗವಿಸಿದ್ದೇಶ್ವರಕ್ಕೆ ತೆರಳುವ ಮಾರ್ಗವಾಗಿರುವುದರಿಂದ ಇದು ಅತ್ಯವಶ್ಯಕವಾಗಿದೆ. ತಮ್ಮ ಸ್ವಗ್ರಾಮದ ಸುತ್ತಲಿನ ಗ್ರಾಮಸ್ಥರು ನನ್ನ ಸೋಲು-ಗೆಲುವಿನಲ್ಲಿ ಜತೆಗಿದ್ದು ಸೇವೆಗೆ ಅವಕಾಶ ನೀಡಿದ್ದೀರಿ. ಇಷ್ಟು ವರ್ಷ ನಮ್ಮನ್ನು ಆಳಿದವರು ನಮ್ಮ ಭಾಗದ ಅಭಿವೃದ್ಧಿ ಮಾಡಿಲ್ಲ. ನಾವು ಸ್ಥಳೀಯರಾಗಿರುವುದರಿಂದದಿ ಈ ಭಾಗದ ಅಭಿವೃದ್ಧಿಯೇ ನಮ್ಮ ಧ್ಯೇಯವಾಗಿದೆ ಎಂದರು.ತಾಂಡಾದಲ್ಲಿ ಸೇವಾಲಾಲ್ ದೇವಸ್ಥಾನ ನಿರ್ಮಾಣಕ್ಕೆ ಬೇಡಿಕೆ ಇದೆ. ಶಾಸಕರ ಅನುದಾನದಲ್ಲಿ ₹18 ಲಕ್ಷ ಮತ್ತು ಮುಜರಾಯಿ ಇಲಾಖೆಯಿಂದ ₹8 ಲಕ್ಷ ಸೇರಿ ಒಟ್ಟು ₹23 ಲಕ್ಷ ಮೀಸಲಿದೆ. ಹೆಚ್ಚಿನ ಅನುದಾನ ತನ್ನ ಅವಧಿಯಲ್ಲಿ ನೀಡಿ ಭವ್ಯ ಮಂದಿರ ನಿರ್ಮಾಣಕ್ಕೆ ಕ್ರಮ ವಹಿಸಲಾಗುವುದು ಎಂದರು. ಗವಿ ಸಿದ್ಧಲಿಂಗೇಶ್ವರಕ್ಕೆ ತೆರಳುವ ಮುಖ್ಯ ರಸ್ತೆಯ ಅಭಿವೃದ್ಧಿಗೆ ₹1 ಕೋಟಿ ಮತ್ತು ಯಂಪಾಡ ರಸ್ತೆ ₹2 ಕೋಟಿ ಮೀಸಲಿಡಲಾಗುವುದು ಎಂದರು.
ಗುರುಮಠಕಲ್ ತಾಲೂಕಿನ ಚಿಂತನಹಳ್ಳಿ ತಾಂಡದಲ್ಲಿ 350 ಲಕ್ಷ ರು.ಗಳ ವೆಚ್ಚದ ಬಾಕ್ಸ್ ಕಲ್ವರ್ಟ್ ನಿರ್ಮಾಣ ಅಡಿಗಲ್ಲು ಸಮಾರಂಭದಲ್ಲಿ ಶಾಸಕ ಶರಣಗೌಡ ಕಂದಕೂರು ಮಾತನಾಡಿದರು.