ಕ್ರೀಡೆಯತ್ತ ಯುವ ಪೀಳಿಗೆಯ ಚಿತ್ತ: ಸ್ವಾಮಿ

KannadaprabhaNewsNetwork |  
Published : Sep 26, 2024, 11:37 AM ISTUpdated : Sep 26, 2024, 11:38 AM IST
ದಸರಾ ಕ್ರೀಡಾಕೂಟದ ವಾಲಿಬಾಲ್ ಪಂದ್ಯವನ್ನು ಉಧ್ಘಾಟಿಸುತ್ತಿರುವ ಪಿ ಎಸ್ ಐ - ಎಂ ಕೆ ಬಸವರಾಜ.  | Kannada Prabha

ಸಾರಾಂಶ

Attitude of young generation towards sports: Swamy

ಪರಶುರಾಂಪುರ: ಆಧುನಿಕ ಕಾಲಘಟ್ಟದಲ್ಲಿ ಯುವಪೀಳಿಗೆ ಕ್ರೀಡೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುತ್ತಿರುವುದು ಸಂತಸದ ಸಂಗತಿ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷ ಎ. ಜಗಳೂರು ಸ್ವಾಮಿ ಹೇಳಿದರು. ಗ್ರಾ.ಪಂ, ಜಿಲ್ಲಾ ಕ್ರೀಡಾ ಮತ್ತು ಯುವಜನ ಸೇವಾ ಇಲಾಖೆ, ದಸರಾ ಕ್ರೀಡಾಕೂಟದ ತಂಡ, ವಾಲಿಬಾಲ್ ಕ್ಲಬ್, ಗೆಳೆಯರ ಬಳಗ ಸೇರಿ ವಿವಿಧ ಯುವಕರ ಸಂಘದ ಸಂಘಗಳ ಆಶ್ರಯದಲ್ಲಿ ಕ್ರೀಡಾಕೂಟ ಆಯೋಜಿಸಿದೆ ಎಂದರು. ಕ್ರೀಡಾಕೂಟಕ್ಕೆ ಚಾಲನೆ ನೀಡಿದ ಪಿಎಸ್ಐಎಂಕೆ ಬಸವರಾಜು ಮಾತನಾಡಿ, ಯುವ ಪೀಳಿಗೆ ಕ್ರೀಡೆಯಲ್ಲಿ ಹೆಚ್ಚು ತೊಡಗಿಸಿಕೊಳ್ಳಬೇಕು ಎಂದರು. ಕ್ರೀಡಾಪಟು ರಾಜಮ್ಮರ ತಿಪ್ಪೇಸ್ವಾಮಿ ಮಾತನಾಡಿದರು. ಗ್ರಾಪಂ ಸದಸ್ಯ ನಾಗರಾಜು, ನಾಗಭೂಷಣ, ಮಾಜಿ ಸದಸ್ಯ ಕರಿಯಣ್ಣ, ಐಓಸಿ. ನಾಗರಾಜಣ್ಣ, ಗೌತಮ, ಮಧುಸೂದನ, ಹರೀಶ ತಿಪ್ಪೇಸ್ವಾಮಿ, ಹೋಟೆಲ್ ರಘು, ತಿಮ್ಮಣ್ಣ, ರಾಜಣ್ಣ, ನಾಗರಾಜ, ರಮೇಶ, ತಿಪ್ಪೇರುದ್ರ, ಬಸವರಾಜು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!