ನರಸಿಂಹರಾಜಪುರ: ಸಂತ ನೋಬರ್ಟ್ ವಿಕಲಚೇತನರ ವಿಶೇಷ ಶಾಲೆಗೆ ರಾಜ್ಯ ಸರ್ಕಾರದ 2023-24 ನೇ ಸಾಲಿನ ಅತ್ಯುತ್ತಮ ವಿಶೇಷ ಶಾಲೆ ಪ್ರಶಸ್ತಿ ಸಿಕ್ಕಿದೆ.
ಭಾನುವಾರ ಬೆಂಗಳೂರಿನ ಕಂಠೀರವ ಸ್ಟೇಡಿಯಂನಲ್ಲಿ ವಿಕಲ ಚೇತನರ ದಿನಾಚರಣೆ ಅಂಗವಾಗಿ ನಡೆದ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ , ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ , ವಿಕಲಚೇತನ ಇಲಾಖೆ ಮುಖ್ಯಾಧಿಕಾರಿಗಳ ಸಮ್ಮುಖದಲ್ಲಿ ನರಸಿಂಹರಾಜಪುರ ಸಂತ ನೋಬರ್ಟ್ ವಿಕಲಚೇತನರ ವಿಶೇಷ ಶಾಲೆ ನಿರ್ದೇಶಕ ರೆ.ಫಾ. ಜೋವಿಯೇಲ್ ವಡಕ್ಕೆಲ್ ಅವರಿಗೆ ಅತ್ಯುತ್ತಮ ವಿಶೇಷ ಶಾಲೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.1995 ರಲ್ಲಿ ಪ್ರಾರಂಭ: ಸಂತ ನೋರ್ಬಟೈನ್ ಫಾದರ್ಸ್ 1995 ರಲ್ಲಿ ಸೋಷಿಯಲ್ ವೆಲ್ಫೇರ್ ಸೊಸೈಟಿ ಪ್ರಾರಂಭಿಸಿದರು. ಈ ಸೊಸೈಟಿಯನ್ನು ಕರ್ನಾಟಕ ಸರ್ಕಾರದಲ್ಲಿ ನೋಂದಣಿ ಮಾಡಲಾಗಿದೆ. ಈ ಸಂಸ್ಥೆ ಪ್ರಮುಖ ಉದ್ದೇಶ ತಾಲೂಕಿನ ಎಲ್ಲಾ ಮಕ್ಕಳಿಗೆ ಉತ್ತಮ ಶಿಕ್ಷಣ ಹಾಗೂ ವಿಶೇಷ ನ್ಯೂನ್ಯತೆ ಯುಳ್ಳ ಮಕ್ಕಳನ್ನು ಸಮಾಜದ ಮುಖ್ಯ ವಾಹಿನಿಗೆ ತರುವುದಾಗಿದೆ. ಪ್ರಸ್ತುತ ಸಂತ ನೋಬರ್ಟ್ ವಿಕಲ ಚೇತನ ( ಬುದ್ದಿ ಮಾಂದ್ಯ) ಶಾಲೆಯಲ್ಲಿ 50 ಮಕ್ಕಳು ವಿಶೇಷ ಶಿಕ್ಷಣ ಪಡೆಯುತ್ತಿದ್ದಾರೆ. 2010 ರಿಂದ ಫಿಸಿಯೋಥೆರಪಿ ಸೆಂಟರನ್ನು ಪ್ರಾರಂಭಿಸಲಾಗಿದೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.