ಕನ್ನಡಪ್ರಭವಾರ್ತೆ ತಿಪಟೂರು
ಶಿಬಿರದಲ್ಲಿ ಸಿದ್ದೇಶ್ವರ ಆಸ್ವತ್ರೆಯ ಹೃದಯ ತಜ್ಞ ಡಾ.ಸಂತೋಷ್ ಹೃದಯಸ್ತಂಭನ ಮತ್ತು ಹೃದಯಘಾತ ನಡುವಿನ ವ್ಯತ್ಯಾಸವನ್ನು ವಿವರಿಸಿ, ಹೃದಯ ಸ್ತಂಭವು ಆಕಸ್ಮಿಕವಾಗಿ ಹೃದಯದ ಸ್ಪಂದನೆ ನಿಂತು ಹೋಗುವ ಅಪಾಯಕಾರಿ ಸ್ಥಿತಿ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ತಕ್ಷಣ ಸರಿಯಾದ ಕ್ರಮ ಕೈಗೊಳ್ಳದಿದ್ದರೆ ಜೀವಾಪಾಯ ಉಂಟಾಗಬಹುದು. ತಕ್ಷಣ ಸಿ.ಪಿ.ಆರ್ ಪ್ರಾರಂಭಿಸುವುದು ಅತ್ಯಗತ್ಯ. ವ್ಯಕ್ತಿಯನ್ನು ನೆಟ್ಟಗೆ ಮಲಗಿಸಿ, ಎದೆ ಮಧ್ಯಭಾಗದಲ್ಲಿ ಎರಡು ಕೈಗಳನ್ನು ಒಂದರ ಮೇಲೆ ಒಂದನ್ನು ಇಟ್ಟು, ಸಮಬಲದಲ್ಲಿ ಒತ್ತುವಿಕೆ ನೀಡಬೇಕು. ೩೦ ಒತ್ತುವಿಕೆಗಳ ನಂತರ ೨ ಬಾರಿ ಉಸಿರಾಟ ನೀಡುವ ವಿಧಾನವನ್ನು ಅನುಸರಿಸಬೇಕು. ಪ್ರಕ್ರಿಯೆಯನ್ನು ವೈದ್ಯಕೀಯ ಸಹಾಯ ಬರುವವರೆಗೆ ಅಥವಾ ವ್ಯಕ್ತಿ ಸ್ಪಂದಿಸುವವರೆಗೆ ನಿರಂತರವಾಗಿ ಮುಂದುವರಿಸುವುದು ಬಹಳ ಮುಖ್ಯ ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿಸಂಸ್ಥೆಯ ಉಪಾಧ್ಯಕ್ಷೆ ಪೂರ್ಣಿಮಾ, ಡಾ.ಪ್ರಶಾಂತ್, ಮಾಜಿ ಕಾರ್ಯದರ್ಶಿ ವಿದ್ಯಾಧರ್, ನಿಜಲಿಂಗಪ್ಪ, ಆರ್ಥಿಕ ಸಮಾಲೋಚಕಿ ರೇಖಾ, ಹಾಗೂ ಇಂಡಿಯನ್ ರೆಡ್ ಕ್ರಾಸ್ ಸಂಸ್ಥೆಯ ಎಲ್ಲಾ ಹಿರಿಯ ಸದಸ್ಯರು ಸಾರ್ವಜನಕರು ಭಾಗವಹಿಸಿದ್ದರು.