ಇಲ್ಲಿನ ತಾಲೂಕು ಆಸ್ಪತ್ರೆಯಲ್ಲಿ ವಿಶ್ವ ಸ್ತನ್ಯಪಾನ ಸಪ್ತಾಹದ ಅಂಗವಾಗಿ ಅರಿವು ಕಾಯಕ್ರಮ ನಡೆಯಿತು. ಈ ವೇಳೆ ಕಾರ್ಯಕ್ರಮದ ಮೂಲ ಉದ್ದೇಶವನ್ನು ಗರ್ಭಿಣಿ ಬಾಣಂತಿಯರಿಗೆ ತಿಳಿಸಿಕೊಡಲಾಯಿತು.
ಕೊರಟಗೆರೆ: ಇಲ್ಲಿನ ತಾಲೂಕು ಆಸ್ಪತ್ರೆಯಲ್ಲಿ ವಿಶ್ವ ಸ್ತನ್ಯಪಾನ ಸಪ್ತಾಹದ ಅಂಗವಾಗಿ ಅರಿವು ಕಾಯಕ್ರಮ ನಡೆಯಿತು. ಈ ವೇಳೆ ಕಾರ್ಯಕ್ರಮದ ಮೂಲ ಉದ್ದೇಶವನ್ನು ಗರ್ಭಿಣಿ ಬಾಣಂತಿಯರಿಗೆ ತಿಳಿಸಿಕೊಡಲಾಯಿತು. ತಾಯಂದಿರು ಮಗುವಿಗೆ ಎದೆಹಾಲು ಕುಡಿಯುವುದರಿಂದ ಆಗುವ ಅನುಕೂಲಗಳನ್ನು, ಅದರ ಮಹತ್ವವನ್ನು ತಿಳಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿಗಳಾದ ಡಾ.ಲಕ್ಷ್ಮೀಕಾಂತ, ಹಿರಿಯ ವೈದ್ಯಾಧಿಕಾರಿ ಡಾ ಮೋಹನ್ ದಾಸ್ ಹಾಗೂ ಮಕ್ಕಳ ತಜ್ಞರಾದ ಡಾ. ಷಣ್ಮುಗಪ್ರಿಯ ಅವರು ಉಪಸ್ಥಿತರಿದ್ದರು. ಶುಶ್ರೂಶಕ ಅಧಿಕಾರಿ ಶಿವರಾಜ್ ವಂದಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.