ಕನ್ನಡಪ್ರಭ ವಾರ್ತೆ ಸಾಗರ ಅಯೋಧ್ಯೆಯಲ್ಲಿ ಶ್ರೀರಾಮ ಮೂರ್ತಿಯ ಪ್ರಾಣಪ್ರತಿಷ್ಠಾಪನೆಯ ಹಿನ್ನೆಲೆಯಲ್ಲಿ ಸೋಮವಾರ ತಾಲೂಕಿನಾದ್ಯಂತ ಸಂಭ್ರಮಾಚರಣೆ ಕಂಡುಬಂತು. ಎಲ್ಲ ಕಡೆಗಳಲ್ಲಿ ಜನರು ಶ್ರೀರಾಮನ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಧನ್ಯತೆ ಮೆರೆದರು. ಸಾರ್ವತ್ರಿಕವಾಗಿ ರಾಮನ ಪೂಜೆ ಸಲ್ಲಿಸಿದ್ದಲ್ಲದೇ ಮನೆ ಮನೆಗಳಲ್ಲಿ ರಾಮೋತ್ಸವ ನಡೆದಿತ್ತು. ಹಲವು ಕಡೆಗಳಲ್ಲಿ ಶ್ರೀರಾಮನ ಉತ್ಸವಮೂರ್ತಿ ಮೆರವಣಿಗೆ, ರಾಮಸಂಕೀರ್ತನೆ ನಡೆಯಿತು.
ಪಟ್ಟಣದ ಸುಭಾಷ್ ನಗರ ಚಿಲುಮೆಕಟ್ಟೆ ಭೂತೇಶ್ವರ ದೇವಸ್ಥಾನದ ಸಮೀಪ ವಿಶ್ವಹಿಂದೂ ಪರಿಷತ್ತು ಮತ್ತು ಬಜರಂಗದಳ ವತಿಯಿಂದ ಶ್ರೀರಾಮನಿಗೆ ವಿಶೇಷ ಪೂಜೆ ಹಾಗೂ ಭಜನೆ ಕಾರ್ಯಕ್ರಮ ನಡೆಯಿತು. ಅನಂತರ ಭಕ್ತಾದಿಗಳಿಗೆ ಅನ್ನಸಂತರ್ಪಣೆ ನಡೆಸಲಾಯಿತು.
ವಿಶ್ವ ಹಿಂದೂ ಪರಿಷತ್ತಿನ ಜಿಲ್ಲಾಧ್ಯಕ್ಷೆ ಪ್ರತಿಮಾ ಜೋಗಿ, ಸಂಘಟನೆಗಳ ಪ್ರಮುಖರಾದ ಪುರುಷೋತ್ತಮ್, ಕಿರಣ್ ಗೌಡ, ಮೈತ್ರಿ ಪಾಟೀಲ್, ಶೇಖರ್, ಬಿಜೆಪಿ ನಗರ ಮಂಡಲ ಅಧ್ಯಕ್ಷ ಗಣೇಶಪ್ರಸಾದ್, ಪ್ರಮುಖರಾದ ಚೇತನ್, ರವೀಂದ್ರ ಬಿ.ಟಿ., ಅರುಣ ಕುಗ್ವೆ, ಸತೀಶ್ ಮೊಗವೀರ ಇನ್ನಿತರರು ಹಾಜರಿದ್ದರು.- - - ಟಾಪ್ ಕೊಟ್ ಅಯೋಧ್ಯೆ ರಾಮ ಮಂದಿರ ಉದ್ಘಾಟನೆ ಐತಿಹಾಸಿಕ ಕ್ಷಣವಾಗಿದೆ. ದೇಶವಾಸಿಗಳ ಶತಮಾನದ ಕನಸನ್ನು ಪ್ರಧಾನಿ ನರೇಂದ್ರ ಮೋದಿ ನನಸು ಮಾಡಿದ್ದಾರೆ. ರಾಮಜನ್ಮಭೂಮಿಯಲ್ಲಿ ಮರ್ಯಾದಾ ಪುರುಷೋತ್ತಮ ಶ್ರೀರಾಮನ ಮೂರ್ತಿ ಪ್ರತಿಷ್ಠಾಪನೆ ನೆರವೇರಿರುವುದು ದೇಶದ ಸನಾತನ ಹಿಂದೂ ಧರ್ಮಗಳ ಶತಶತಮಾನದ ಆಸೆ ಈಡೇರಿದಂತಾಗಿದೆ
- - -
-22ಕೆ.ಎಸ್.ಎ.ಜಿ.1:ಸಾಗರ ಪಟ್ಟಣದ ಅಗ್ರಹಾರದ ಶ್ರೀಕೋದಂಡರಾಮ ದೇವಸ್ಥಾನ ವತಿಯಿಂದ ಬಡಾವಣೆಯಲ್ಲಿ ರಾಮನ ಉತ್ಸವಮೂರ್ತಿ ಮೆರವಣಿಗೆ, ರಾಮಸಂಕೀರ್ತನೆ ನಡೆಯಿತು.