ಕನ್ನಡಪ್ರಭ ವಾರ್ತೆ ಮಂಡ್ಯ
ಬಳಿಕ ಮಾತನಾಡಿದ ಜಿಲ್ಲಾ ಬಿಜೆಪಿ ಮುಖಂಡ ಎಚ್.ಆರ್.ಅರವಿಂದ್, ಉತ್ತರ ಕರ್ನಾಟಕ ಭಾಗದ ರೈತರ ಹೋರಾಟಕ್ಕೆ ಬೆಂಬಲ ನೀಡಿ ಆಹೋರಾತ್ರಿ ಹೋರಾಟ ಮಾಡಿ ರೈತರ ಜೊತೆ ಇದ್ದು ಕಬ್ಬಿಗೆ ಬೆಲೆ ಕೊಡಿಸಿರುವುದು ಶ್ಲಾಘನೀಯ ಎಂದರು.
ಪ್ರಪಥಮ ರೈತರ ಬಜೆಟ್ ಮಂಡಿಸಿದ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ರೈತಪರ ಹೋರಾಟ, ಕಾಳಜಿ ಮೈಗೂಡಿಸಿಕೊಂಡಿರುವ ಬಿ.ವೈ.ವಿಜಯೇಂದ್ರ ಅವರ ರಾಜಕೀಯ ಭವಿಷ್ಯ ಉಜ್ವಲವಾಗಲಿ. ಮುಂದಿನ ದಿನಗಳಲ್ಲಿ ಜಿಲ್ಲೆಗೆ ತಮ್ಮದೇ ಆದ ಕೊಡಗೆ ನೀಡಲಿ. ರಾಜ್ಯದಲ್ಲಿ ಉತ್ತಮ ನಾಯಕರಾಗಿ ಜನ ಸೇವೆ ಮಾಡುತ್ತಾರೆ. ರಾಜ್ಯ ಸರ್ಕಾರಕ್ಕೆ ಹೋರಾಟದ ಮೂಲಕ ಕಿವಿಹಿಂಡುವ ಕಾರ್ಯ ಮತ್ತಷ್ಟು ಸಾಗಲಿ ಎಂದರು.ಬಿ.ವೈ.ವಿಜಯೇಂದ್ರ ಅವರಿಗೆ ದೇವರು ಆಯಸ್ಸು, ಆರೋಗ್ಯ ರಾಜಕೀಯ ಭವಿಷ್ಯ, ಉನ್ನತಸ್ಥಾನ ಮಾನಗಳನ್ನು ಕೊಟ್ಟು ಕಾಪಾಡಲಿ, ರೈತ ಪರ, ದೀನ-ದುರ್ಬಲ ವರ್ಗಗಳ ಪರ ನಿಂತು ಹೋರಾಟ ಮಾಡುವ ಚೈತನ್ಯ ಹೆಚ್ಚಾಗಲಿ ಎಂದು ಆಶಿಸಿದರು.
ಪುತ್ರನ ಹುಟ್ಟುಹಬ್ಬದಂದು ಮಳವಳ್ಳಿ ಶಿವಣ್ಣರಿಂದ ಬಡ ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್ ವಿತರಣೆ
ಕನ್ನಡಪ್ರಭ ವಾರ್ತೆ ಮದ್ದೂರುಉಳ್ಳವರು ತಮ್ಮ ಮತ್ತು ಕುಟುಂಬದವರ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಿಕೊಳ್ಳುತ್ತಿರುವ ಇಂದಿನ ದಿನಗಳಲ್ಲಿ ರಾಮ್ ಮನೋಹರ ಲೋಹಿಯಾ ವಿಚಾರ ವೇದಿಕೆಯ ಅಧ್ಯಕ್ಷ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಳವಳ್ಳಿ ಶಿವಣ್ಣ ತಮ್ಮ ಪುತ್ರನ ಹುಟ್ಟುಹಬ್ಬದಂದು ಬಡ ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್ ವಿತರಣೆ ಮಾಡುವ ಮೂಲಕ ವಿಶಿಷ್ಟವಾಗಿ ಆಚರಿಸಿದರು.
ಕಾರ್ಯಕ್ರಮದಲ್ಲಿ ತಾಲೂಕು ಕುರುಬರ ಸಂಘದ ಅಧ್ಯಕ್ಷ ಅಶ್ವಿನ್ ರಾಮಕೃಷ್ಣೇಗೌಡ, ಖಜಾಂಚಿ ಜವರಾಯಿಗೌಡ, ಕನಕ ಸಹಕಾರ ಸಂಘದ ನಿರ್ದೇಶಕ ಅರುವ, ಮುಖಂಡ ಚಂದ್ರಕಾಂತ್, ರಮೇಶ್ ಭಾಗವಹಿಸಿದ್ದರು.