ಬಾಬು ಜಗಜೀವನ ರಾಂ ಅವರ ಜೀವನ ನಮಗೆ ಆದರ್ಶವಾಗಿದೆ-ಶಾಸಕ ಲಮಾಣಿ

KannadaprabhaNewsNetwork |  
Published : Apr 06, 2025, 01:47 AM IST
ಪೊಟೋ-ಪಟ್ಟಣದ ತಹಸೀಲ್ದಾರೆ ಕಚೇರಿಯಲ್ಲಿ ಬಾಬು ಜಗಜೀವನ ರಾಮ್ ಅವರ ಜನ್ಮ ದಿನಾಚರಣೆಯಲ್ಲಿ ಶಾಸಕ ಡಾ₹ಚಂದ್ರು ಲಮಾಣಿ ಮಾತನಾಡಿದರು. | Kannada Prabha

ಸಾರಾಂಶ

ರಾಷ್ಟ್ರದ ಸೇವೆಗಾಗಿ ಬದುಕನ್ನೇ ಮೀಸಲಿಟ್ಟ ಹಸಿರು ಕ್ರಾಂತಿ ಮತ್ತು ಸಮಾನತೆಯ ಹರಿಕಾರ, ಉಪ ಪ್ರಧಾನಿ ಡಾ.ಬಾಬು ಜಗಜೀವನ ರಾಂ ಅವರ ಆದರ್ಶ, ಚಿಂತನೆಗಳು ಮತ್ತು ದೇಶ ಸೇವೆಗಾಗಿ ಸಲ್ಲಿಸಿದ ಕ್ಷಣಗಳು ಸದಾ ಸ್ಮರಣೀಯ. ಅವರ ಶ್ರೇಷ್ಠ ವ್ಯಕ್ತಿತ್ವ ಹಾಗೂ ಜೀವನ ಚರಿತ್ರೆ ತಿಳಿದು ಗೌರವದಿಂದ ಸ್ಮರಿಸುವುದು ಎಲ್ಲರ ಕರ್ತವ್ಯವಾಗಿದೆ ಎಂದು ಶಾಸಕ ಡಾ. ಚಂದ್ರು ಲಮಾಣಿ ಹೇಳಿದರು.

ಲಕ್ಷ್ಮೇಶ್ವರ: ರಾಷ್ಟ್ರದ ಸೇವೆಗಾಗಿ ಬದುಕನ್ನೇ ಮೀಸಲಿಟ್ಟ ಹಸಿರು ಕ್ರಾಂತಿ ಮತ್ತು ಸಮಾನತೆಯ ಹರಿಕಾರ, ಉಪ ಪ್ರಧಾನಿ ಡಾ.ಬಾಬು ಜಗಜೀವನ ರಾಂ ಅವರ ಆದರ್ಶ, ಚಿಂತನೆಗಳು ಮತ್ತು ದೇಶ ಸೇವೆಗಾಗಿ ಸಲ್ಲಿಸಿದ ಕ್ಷಣಗಳು ಸದಾ ಸ್ಮರಣೀಯ. ಅವರ ಶ್ರೇಷ್ಠ ವ್ಯಕ್ತಿತ್ವ ಹಾಗೂ ಜೀವನ ಚರಿತ್ರೆ ತಿಳಿದು ಗೌರವದಿಂದ ಸ್ಮರಿಸುವುದು ಎಲ್ಲರ ಕರ್ತವ್ಯವಾಗಿದೆ ಎಂದು ಶಾಸಕ ಡಾ. ಚಂದ್ರು ಲಮಾಣಿ ಹೇಳಿದರು.ಶನಿವಾರ ಪಟ್ಟಣದ ತಹಸೀಲ್ದಾರ್ ಕಚೇರಿಯಲ್ಲಿ ಡಾ. ಬಾಬು ಜಗಜೀವನ ರಾಮ್ ಅವರ ೧೧೮ನೇ ಜನ್ಮದಿನಾಚರಣೆ ಹಾಗೂ ಸಮತಾ ದಿನ ಆಚರಣೆಯಲ್ಲಿ ಪಾಲ್ಗೊಂಡು ಮಾತನಾಡಿದರು.

ಬುದ್ಧ, ಬಸವ ವಿಚಾರಧಾರೆಗಳೊಂದಿಗೆ ಪ್ರೇರಿತರಾದ ಜಗಜೀವನ ರಾಮ್ ದೇಶದ ಕಟ್ಟಕಡೆಯ ಸಮುದಾಯದ ಹಿತರಕ್ಷಣೆಗಾಗಿ ಶ್ರಮಿಸಿದರು. ಕಾರ್ಮಿಕ ಸಚಿವರಾಗಿದ್ದ ವೇಳೆ ದೇಶದ ಕಾರ್ಮಿಕರ ಕಾಯ್ದೆಗಳ ಶಿಲ್ಪಿ ಎಂಬ ಗೌರವಕ್ಕೆ ಪಾತ್ರರಾದರು. ಸಂಪರ್ಕ ಖಾತೆ ಸಚಿವರಾಗಿ ವಿಮಾನಯಾನ ರಾಷ್ಟ್ರೀಕರಣ, ಅಂಚೆ ಸೇವೆ ಬಲಿಷ್ಠಗೊಳಿಸಿದರು. ರೇಲ್ವೆ ಸಚಿವರಾಗಿ ರೇಲ್ವೆ ವಿದ್ಯುದ್ದೀಕರಣಗೊಳಿಸಿದರು. ಭಾರತ ಭೀಕರ ಬರಗಾಲಕ್ಕೆ ತುತ್ತಾದಾಗ ಹಸಿರು ಕ್ರಾಂತಿಗೆ ನಾಂದಿ ಹಾಡುವ ಮೂಲಕ ಭಾರತವನ್ನು ಹಸಿವು ಮುಕ್ತಗೊಳಿಸುವ ಕಾರ್ಯ ಶ್ಲಾಘನೀಯ. ಬಾಬೂಜಿ ದೇಶವು ಆಹಾರೋತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸಲು ವೈಜ್ಞಾನಿಕ ಕಾರ್ಯಕ್ರಮ ರೂಪಿಸಿ ''''''''ಹಸಿರು ಕ್ರಾಂತಿಯ ಹರಿಕಾರರೆಂದು ಖ್ಯಾತರಾದರು. ಭಾರತದ ಸಂವಿಧಾನ ರಚನಾ ಸಭೆಯ ಸದಸ್ಯರೂ, ಉಪಪ್ರಧಾನಿಯಾಗಿ ಸೇವೆ ಸಲ್ಲಿಸಿದ ಅವರು ದೇಶದ ಸರ್ವತೋಮುಖ ಏಳಿಗೆಗೆ ತಮ್ಮ ಜೀವನವನ್ನು ಮುಡುಪಿಟ್ಟ ಬಾಬೂಜಿ ಅವರ ಜನ್ಮದಿನವನ್ನೀಗ ಸಮತಾ ದಿನವನ್ನಾಗಿ ಆಚರಿಸಲಾಗುತ್ತಿದೆ. ಏ.೧೪ರಂದು ಅಂಬೇಡ್ಕರ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸೋಣ ಎಂದರು.

ಈ ವೇಳೆ ತಹಸೀಲ್ದಾರ ವಾಸುದೇವ ಸ್ವಾಮಿ ಮಾತನಾಡಿ ಬಾಬು ಜಗಜೀವನ್ ರಾಮ್ ಅವರು ತಮ್ಮ ಆಡಳಿತ ಅವಧಿಯಲ್ಲಿ ಮಾಡಿದ ದೇಶ ಸೇವೆ ಅವರನ್ನು ಸದಾ ಸ್ಮರಿಸುವಂತೆ ಮಾಡಿದೆ. ಇಂತಹ ಮಹಾನ ನಾಯಕರ ಜೀವನ ಸಾಧನೆ ಮತ್ತು ಆಡಳಿತ ವೈಖರಿ ಸಮಾಜಕ್ಕೆ ಪ್ರೇರಣೆಯಾಗಿದೆ ಎಂದರು.

ಈ ವೇಳೆ ತಾಪಂ ಇಓ ಕೃಷ್ಣಪ್ಪ ಧರ್ಮರ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಗೋಪಾಲ ಲಮಾಣಿ, ಮುಖ್ಯಾಧಿಕಾರಿ ಮಹೇಶ ಹಡಪದ, ಜಿಪಂ ಮಾಜಿ ಅಧ್ಯಕ್ಷ ಎಸ್ ಪಿ ಬಳಿಗಾರ, ಹೆಸ್ಕಾಂ ಅಧಿಕಾರಿ ಆಂಜನಪ್ಪ, ಫಕ್ಕಿರೇಶ ಮ್ಯಾಟಣ್ಣವರ, ಅಮರೇಶ ತೆಂಬದಮನಿ, ರಾಜು ಓಲೇಕಾರ, ಅನಿಲ ಮುಳಗುಂದ, ನಾಗರಾಜ ದೊಡ್ಡಮನಿ, ಕೆ.ಓ. ಹುಲಿಕಟ್ಟಿ, ರಂಗಣ್ಣ ಬದಿ, ಸುರೇಶ ಬೀರಣ್ಣವರ, ಫಕ್ಕಿರೇಶ ಭಜಕ್ಕನವರ, ಜಗದೀಶ ಹುಲಿಗೆಮ್ಮನವರ, ಮಂಜುನಾಥ ರಾಮಗೇರಿ, ಟಾಕಪ್ಪ ಪೂಜಾರ, ಹಜರೇಸಾಬ ಅರ್ಕಸಾಲಿ ಸೇರಿದಂತೆ ಕಂದಾಯ, ಸಮಾಜ ಕಲ್ಯಾಣ ಮತ್ತು ಇತರೆ ಇಲಾಖೆಗಳ ಅಧಿಕಾರಿ, ಸಿಬ್ಬಂದಿಗಳು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸಗೊಬ್ಬರ ಬಳಕೆ ಕಡಿಮೆ ಮಾಡಿ : ಸಿಎಂ ಸಲಹೆ
''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''