ಬಾದನಹಟ್ಟಿ ಶಿವಯೋಗಿಬಸಯ್ಯ ತಾತನವರ ಮಠದಿಂದ ಶ್ರೀಶೈಲಕ್ಕೆ ಪಾದಯಾತ್ರೆ

KannadaprabhaNewsNetwork |  
Published : Mar 28, 2024, 12:46 AM ISTUpdated : Mar 28, 2024, 12:47 AM IST
ಕುರುಗೋಡು ೦೧.ತಾಲ್ಲೂಕು ಸಮೀಪದ ಬಾದನಹಟ್ಟಿ ಗ್ರಾಮದ ಭಕ್ತರು ಸದ್ಗುರು ಕರಿಬಸವ ಶರಣ ನೇತೃತ್ವದಲ್ಲಿ ೩೨ನೇ ವರ್ಷದ ಪಾದಯಾತ್ರೆ ಪ್ರಾರಂಭಿಸಿದರು | Kannada Prabha

ಸಾರಾಂಶ

ಎಂಟು ದಿನಗಳ ಕಾಲ ಜರುಗುವ ಪಾದಯಾತ್ರೆ ಕುರುಗೋಡು, ಕೊಂಚೀರಿ, ದರೂರು ಮೂಲಕ ಆಂಧ್ರಪ್ರದಶದ ಎಳ್ಳಾರ್ತಿ, ಹಿರೇಹೋತೂರು, ಕೊಡುಮುರು, ಕರ್ನೂಲ್, ನಂದಿಕೊಟ್ಕೂರು ಮೂಲಕ ಶ್ರೀಶೈಲ ಕ್ಷೇತ್ರಕ್ಕೆ ತಲುಪಲಿದೆ.

ಕುರುಗೋಡು: ತಾಲೂಕು ಸಮೀಪದ ಬಾದನಹಟ್ಟಿ ಗ್ರಾಮದ ಸದ್ಗುರು ಕರಿಬಸವ ಶರಣ ನೇತೃತ್ವದಲ್ಲಿ ೩೧ನೇ ವರ್ಷದ ಶ್ರೀಶೈಲ ಪಾದಯಾತ್ರೆ ಬುಧವಾರ ಪ್ರಾರಂಭಗೊಂಡಿತು.

ಎಂಟು ದಿನಗಳ ಕಾಲ ಜರುಗುವ ಪಾದಯಾತ್ರೆ ಕುರುಗೋಡು, ಕೊಂಚೀರಿ, ದರೂರು ಮೂಲಕ ಆಂಧ್ರಪ್ರದಶದ ಎಳ್ಳಾರ್ತಿ, ಹಿರೇಹೋತೂರು, ಕೊಡುಮುರು, ಕರ್ನೂಲ್, ನಂದಿಕೊಟ್ಕೂರು ಮೂಲಕ ಶ್ರೀಶೈಲ ಕ್ಷೇತ್ರಕ್ಕೆ ತಲುಪಲಿದೆ. ಮಹಿಳೆಯರು ಸೇರಿ ಎರಡು ಸಾವಿರಕ್ಕೂ ಅಧಿಕ ಜನರು ಪಾದಯಾತ್ರೆಯಲ್ಲಿ ಭಾಗವಹಿಸಿದ್ದರು.

ಪಾದಯಾತ್ರೆಗೆ ಚಾಲನೆ ನೀಡಿ ಮಾತನಾಡಿದ ಸದ್ಗುರು ಕರಿಬಸವ ಶರಣರು, ನಾಡಿಕೆ ಉತ್ತಮ ಮಳೆಬೆಳೆ ಬರಲಿ, ರೈತಾಪಿ ವರ್ಗ ಹರ್ಷಚಿತ್ತರಾಗಲು ಎಂಬ ಲೋಕ ಕಲ್ಯಾಣಾರ್ಥವಾಗಿ ಕಳೆದ ೩೨ ವರ್ಷಗಿಳಿಂದ ಶ್ರೀಶೈಲಕ್ಕೆ ಪಾದಯಾತ್ರೆ ತೆರಳುತ್ತಿದ್ದೇನೆ. ಈ ಯಾತ್ರೆಯಲ್ಲಿ ವೃದ್ಧರು ಮತ್ತು ಮಹಿಳೆಯರು ಭಾಗವಹಿಸುವುದು ವಿಶೇಷ ಎಂದರು.

ಕುರುಗೋಡು ಯಲ್ಲಮ್ಮತಾಯಿ ಮಾತನಾಡಿ, ಶಿವಯೋಗಿ ಬಸಯ್ಯತಾತನವರ ಮಠದಿಂದ ಶ್ರೀಶೈಲ ಭ್ರಮರಾಂಭ ಮಲ್ಲಿಕಾರ್ಜುನ ಜ್ಯೋತಿರ್ಲಿಂಗ ದರ್ಶನಕ್ಕೆ ೩೨ನೇ ವರ್ಷದ ಶ್ರೀಶೈಲ ಪಾದಯಾತ್ರೆ ಹಮ್ಮಿಕೊಂಡಿರುವುದು ನಿಜಕ್ಕೂ ಹೆಮ್ಮೆಯ ಸಂಗತಿ ಎಂದರು.

ನಂತರ ಸಾಲು ಸಾಲಾಗಿ ಬಂದ ಪಾದಯಾತ್ರಿಗಳಿಗೆ ಶ್ರೀಗಾದಿಲಿಂಗಪ್ಪತಾತನವರ ಸಂಘದ ಸದಸ್ಯರು ಅನ್ನಸಂತರ್ಪಣೆ ಮಾಡಿ ಸಿಂದಿಗೇರಿ ಮಾರ್ಗದ ಮೂಲಕ ಬೀಳ್ಕೊಟ್ಟರು. ಈ ಸಂದರ್ಭದಲ್ಲಿ ಕುರುಗೋಡು ಶ್ರೀಗಾದಿಲಿಂಗಪ್ಪತಾತನವರ ಸಂಘದ ಸದಸ್ಯರು, ಬಾದನಹಟ್ಟಿ ಗ್ರಾಮದ ಭಕ್ತರು ಇದ್ದರು.

ಫೋಟೋ; ಕುರುಗೋಡು೧

ಕುರುಗೋಡು ತಾಲೂಕು ಸಮೀಪದ ಬಾದನಹಟ್ಟಿ ಗ್ರಾಮದ ಭಕ್ತರು ಸದ್ಗುರು ಕರಿಬಸವ ಶರಣ ನೇತೃತ್ವದಲ್ಲಿ ೩೨ನೇ ವರ್ಷದ ಪಾದಯಾತ್ರೆ ಪ್ರಾರಂಭಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಚಾರಣ ತಾಣಗಳು ಇಂದು ದುಬಾರಿ ಆಗುತ್ತಿವೆ: ಡಾ.ಶ್ರೀಧರ್‌
5 ವರ್ಷದಲ್ಲಿ ರೈಲ್ವೆ ಕೋಚಿಂಗ್‌ ಟರ್ಮಿನಲ್‌ ದ್ವಿಗುಣಕ್ಕೆ ನಿರ್ಧಾರ