ಜಾಮೀನು ಮಂಜೂರು ಸತ್ಯಕ್ಕೆ ಲಭಿಸಿದ ಜಯ: ರಾಜೀವ್ ಗೌಡ

KannadaprabhaNewsNetwork |  
Published : Jan 31, 2026, 01:30 AM IST
ರಾಜೀವ್ | Kannada Prabha

ಸಾರಾಂಶ

ನನ್ನ ಸಂಕಷ್ಟದಲ್ಲೂ ಶಿಡ್ಲಘಟ್ಟ ಜನತೆಗೆ ನನ್ನೊಂದಿಗಿದ್ದು, ನನಗೆ ಆತ್ಮಸ್ಥೈರ್ಯ ತುಂಬಿದ್ದ ಕಾರ್ಯಕರ್ತರು, ಅಣ್ಣತಮ್ಮಂದಿರು, ಮುಖಂಡರು ಹಾಗೂ ತಂದೆತಾಯಂದಿರಿಗೆ ಶಿರಭಾಗಿ ನಮಿಸುತೇನೆಂದು ತಿಳಿಸಿ, ಈ ಘಟನೆ ದೇಶದಾದ್ಯಂತ ಸುದ್ದಿಯಾಗಿದ್ದು ನನಗೆ ನೋವಾಗಿದೆ.

ಚಿಂತಾಮಣಿ: ಶಿಡ್ಲಘಟ್ಟ ಪೌರಾಯುಕ್ತೆ ಅಮೃತಾ ಗೌಡರ ನಿಂದಿಸಿ ಕಾಂಗ್ರೆಸ್ ಮುಖಂಡ ರಾಜೀವ್‌ಗೌಡ ೨ ದಿನಗಳ ಹಿಂದೆ ಬಂಧನಕ್ಕೆ ಒಳಗಾಗಿದ್ದು, ವಕೀಲರ ಮೂಲಕ ನಿರೀಕ್ಷಣಾ ಜಾಮೀನಿಗಾಗಿ ಕೋರ್ಟ್ ಮೊರೆ ಹೋಗಿದ್ದು, ಅಂತಿಮವಾಗಿ ಶಿಡ್ಲಘಟ್ಟದ ಜೆಎಂಎಫ್‌ಸಿ ನ್ಯಾಯಾಲಯ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿದೆ.

ನಗರದ ಚಿಂತಾಮಣಿಯ ತಾಲೂಕು ಉಪಕಾರಾಗೃಹದಲ್ಲಿ ಬಂಧನಕ್ಕೊಳಗಾಗಿ ಷರತ್ತು ಬದ್ಧ ಜಾಮೀನಿನ ಮೇಲೆ ಬಿಡುಗಡೆಗೊಂಡು ಮಾತನಾಡಿದ ರಾಜೀವ್ ಗೌಡ, ನಾನು ನ್ಯಾಯಕ್ಕಾಗಿ, ಸತ್ಯಕ್ಕಾಗಿ ಹೋರಾಟ ಮಾಡುತ್ತಿದ್ದೇನೆ. ಕಾರಣಾಂತರಗಳಿಂದ ಈ ಘಟನೆ ನಡೆದಿದ್ದು, ವೈಯಕ್ತಿಕವಾಗಿ ಯಾವುದೇ ದುರುದ್ದೇಶವಿರಲಿಲ್ಲ, ಆದರೂ ನಾನು ಸಂಕಷ್ಟಕ್ಕೆ ಸಿಲುಕಿದೆ, ನ್ಯಾಯಾಲಯ ನನಗೆ ಜಾಮೀನು ಮಂಜೂರು ಮಾಡಿದ್ದು ಸತ್ಯಕ್ಕೆ ಲಭಿಸಿದ ಜಯ ಎಂದರು.

ನನ್ನ ಸಂಕಷ್ಟದಲ್ಲೂ ಶಿಡ್ಲಘಟ್ಟ ಜನತೆಗೆ ನನ್ನೊಂದಿಗಿದ್ದು, ನನಗೆ ಆತ್ಮಸ್ಥೈರ್ಯ ತುಂಬಿದ್ದ ಕಾರ್ಯಕರ್ತರು, ಅಣ್ಣತಮ್ಮಂದಿರು, ಮುಖಂಡರು ಹಾಗೂ ತಂದೆತಾಯಂದಿರಿಗೆ ಶಿರಭಾಗಿ ನಮಿಸುತೇನೆಂದು ತಿಳಿಸಿ, ಈ ಘಟನೆ ದೇಶದಾದ್ಯಂತ ಸುದ್ದಿಯಾಗಿದ್ದು ನನಗೆ ನೋವಾಗಿದೆ. ನಾನು ಕ್ಷೇತ್ರಕ್ಕೆ ಮಾಡಿಕೊಂಡು ಬಂದಿರುವ ಆ್ಯಂಬುಲೆನ್ಸ್ ಸೇವೆ ಇವತ್ತಿಗೂ ೨೪ ಗಂಟೆಗಳ ಕಾಲ ನಿರಂತರವಾಗಿ ಕಾರ್ಯನಿರ್ವಹಿಸುತ್ತಿವೆ, ಕೋರೋನಾ ಸಂದರ್ಭದಲ್ಲಿ ಸಂತ್ರಸ್ಥರಿಗೆ ಕಿಟ್‌ಗಳನ್ನು ನೀಡಿದ್ದೆ, ಮುಂದಿನ ದಿನಗಳಲ್ಲೂ ಕೂಡ ನನ್ನ ಕರ್ಮಭೂಮಿ ಶಿಡ್ಲಘಟ್ಟದ ಜನತೆಯ ಸೇವೆಗೆ ಬದ್ಧನಾಗಿರುತ್ತೇನೆ ಎಂದು ನುಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಟಿಬಿ ಗೇಟ್‌ ಬದಲಿಸಲು ಹಣ ಕೊಡಿ : ಬಿವೈವಿ
ರಾಯ್‌ ಸಾವಿಗೆ ಐ.ಟಿ. ಕಿರುಕುಳ ಕಾರಣ : ಬಾಬು