ಕನ್ನಡಪ್ರಭ ವಾರ್ತೆ ಉಪ್ಪಿನಂಗಡಿ
ಸಾಮಾಜಿಕ ಕಾರ್ಯಕರ್ತ ವಿಲ್ಫ್ರೆಡ್ ಡಿಸೋಜಾ ಪ್ರಾಸ್ತಾವಿಕ ಮಾತುಗಳನಾಡಿದರು. ಗ್ರಾಮ ಪಂಚಾಯಿತಿ ಅಧ್ಯಕ್ಷ ಗಂಗಾಧರ ಗೌಡ ಪಿ.ಎನ್. ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಪ್ರಮುಖರಾದ ವಿಮಲಾ ಬೆದ್ರೋಡಿ, ಉಮೇಶ್ ಓಡ್ರಪಾಲ್, ಪ್ರಸಿಲ್ಲಾ ಬೆಡ್ರೋಡಿ, ರತ್ನಾ, ರಾಮಚಂದ್ರ ಆಲಾಜೆ, ಕ್ಷೇತ್ರಾ ಶಿಕ್ಷಣಾಧಿಕಾರಿ ಲೋಕೇಶ್ ಎಸ್ ಆರ್, ಚಕ್ರಪಾಣಿ ಎ ವಿ, ಯಶೋಧ ವಿ, ಸಿದ್ದಪ್ಪ ನಾಯ್ಕ, ಧನಂಜಯ ಬಾರಿಕೆ, ರಾಜಾರಾಮ ಕೆ ಬಿ, ನವೀನ್, ಯು ಟಿ ತೌಷಿಫ್, ಉದಯ ರಾವ್ ಮಣಿಕ್ಕಳ, ಗೋಪಾಲ ವಳಾಲ್, ಮಂಜುನಾಥ ಕೆ ವಿ ಮೊದಲಾದವರು ಇದ್ದರು.
ಕನಸು ನನಸಾಗಿದ್ದು ಹೇಗೆ?:ಬಜತ್ತೂರು ಗ್ರಾಮದ ವಳಾಲು ಸರ್ಕಾರಿ ಶಾಲೆ ೬ ಎಕ್ರೆ ಭೂಮಿಯನ್ನು ಹೊಂದಿದ್ದರೂ, ಬದಲಾದ ಕಾಲಘಟ್ಟದಲ್ಲಿ ಮಕ್ಕಳು ಖಾಸಗಿ ಶಾಲೆಯತ್ತ ಆಕರ್ಷಿತರಾದಾಗ ಮಕ್ಕಳನ್ನು ಮತ್ತೆ ಸರ್ಕಾರಿ ಶಾಲೆಗೆ ಸೆಳೆಯಲು ಒಗ್ಗೂಡಿದ ತಂಡ ಶಿಕ್ಷಣ ಸಮನ್ವಯ ಟ್ರಸ್ಟ್ ಎಂಬ ಸಂಸ್ಥೆ ಹುಟ್ಟು ಹಾಕಲಾಯಿತು. ಅದರ ಮೂಲಕ ಎಲ್ಲಾ ಹಳೆ ವಿದ್ಯಾರ್ಥಿಗಳನ್ನು ಸಂಪರ್ಕಿಸಿ ಆರ್ಥಿಕ ಸಹಕಾರ ಕೋರಲಾಯಿತು. ಸುಮಾರು ೧೫ ಲಕ್ಷ ರು. ಸಂಗ್ರಹಣೆಯ ಗುರಿಯೊಂದಿಗೆ ಸಾಗಿದ ಈ ಟ್ರಸ್ಟ್ ಯಶಸ್ವಿಯಾಗಿ ಬಸ್ಸೊಂದನ್ನು ಖರೀದಿಸಿದೆ. ತನ್ಮೂಲಕ ದೂರದ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಕರೆತರಲು ಮತ್ತು ಕರೆದೊಯ್ಯಲು ಕ್ರಮ ಕೈಗೊಳ್ಳಲಾಗಿದೆ. ತನ್ಮೂಲಕ ಸರಕಾರಿ ಶಾಲೆಯಲ್ಲೇ ಎಲ್ಕೆಜಿಯಿಂದ ಎಸ್ಸೆಸ್ಸೆಲ್ಸಿ ವರೆಗಿನ ಶಿಕ್ಷಣವನ್ನು ಆಂಗ್ಲಮಾಧ್ಯಮದಲ್ಲೇ ಉಚಿತವಾಗಿ ಪಡೆಯುವಂತಾಗಲು ಈ ಟ್ರಸ್ಟ್ ಕಾರ್ಯೋನ್ಮುಖಗೊಂಡಿದೆ.