ಕೊಳಕೇರಿ ಸುನ್ನಿ ಮುಸ್ಲಿಂ ಜಮಾಹತ್‌ನಲ್ಲಿ ಬಕ್ರಿದ್ ಸಡಗರ

KannadaprabhaNewsNetwork |  
Published : Jun 18, 2024, 12:45 AM IST
ಬಕ್ರಿದ್ | Kannada Prabha

ಸಾರಾಂಶ

ಹಬ್ಬದ ಹಿನ್ನೆಲೆ ದಿನದ ಮಹತ್ವ ಹಾಗೂ ಧರ್ಮ ಸಂದೇಶ ನೀಡಿ ಶುಭ ಹಾರೈಸಲಾಯಿತು. ನಂತರ ಸಿಹಿ ತಿಂಡಿ ಪಾನೀಯ ವಿತರಿಸಲಾಯಿತು.

ಕನ್ನಡಪ್ರಭ ವಾರ್ತೆ ನಾಪೋಕ್ಲು

ಇಲ್ಲಿಗೆ ಸಮೀಪದ ಕೊಳಕೇರಿ ಸುನ್ನಿ ಮುಸ್ಲಿಂ ಜಮಾಹತ್ ಮಸೀದಿಯಲ್ಲಿ ಬಕ್ರಿದ್ ಹಬ್ಬದ ಪ್ರಯುಕ್ತ ವಿಶೇಷ ಸಾಮೂಹಿಕ ಪ್ರಾರ್ಥನೆ, ನಮಾಜ್ ಅನ್ನು ಮುಸ್ಲಿಂ ಸಮುದಾಯ ಬಾಂಧವರು ಸೋಮವಾರ ನೆರವೇರಿಸಿದರು.

ಜಮಾಹತ್ ಕತೀಬರಾದ ಜುರೈಜ್ ಸಹದಿ ಕಾಸರಗೋಡು ವಿಶೇಷ ಪ್ರಾರ್ಥನೆ ನೆರವೇರಿಸಿ ದಿನದ ಮಹತ್ವ ಹಾಗೂ ಧರ್ಮ ಸಂದೇಶ ನೀಡಿ ಶುಭ ಹಾರೈಸಿದರು.

ಈ ಸಂದರ್ಭ ಜಮಾಹತ್ ಅಧ್ಯಕ್ಷರಾದ ಬಿ.ಎ. ನಾಸಿರ್ ಮತ್ತು ಕಾರ್ಯದರ್ಶಿ ರಫೀಕ್ ಎಂ. ಎಚ್. ಹಫೀಲ್ ಸಹದಿ ಎಮ್.

ಎಮ್. ಇಸ್ಮಾಯಿಲ್ ಜಮಾಹತ್ ಪದಾಧಿಕಾರಿಗಳು, ಸದಸ್ಯರು ಹಾಗೂ ಜನಾಂಗ ಬಾಂಧವರು ಅಧಿಕ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.

ನಮಾಜ್ ನಂತರ ಸಿಹಿ ತಿಂಡಿ ಮತ್ತು ಪಾನೀಯ ವಿತರಿಸಲಾಯಿತು. ಬಳಿಕ ತಮ್ಮ ತಮ್ಮ ಕುಟುಂಬ

ದಿಂದ ನಿಧನ ಹೊಂದಿದವರ ಸಮಾಧಿಗೆ (ಖಬರ್ ಸ್ಥಾನ) ಹೋಗಿ ಪ್ರಾರ್ಥನೆ ನೆರವೇರಿಸಿದ ಬಳಿಕ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಾಲು ಸಾಲು ರಜೆ, ಪ್ರವಾಸಿ ತಾಣ ರಷ್‌
ಭೂಮಿ ಮಾರಿದ ಇನ್ಫಿ ಬಗ್ಗೆ ಕಾರ್ತಿ ತೀವ್ರ ಆಕ್ರೋಶ