ಕುದೂರು: ಹಾಲಿ ಸಂಸದ ಡಿ.ಕೆ.ಸುರೇಶ್ ಅವರನ್ನು ಸೋಲಿಸುವ ತನಕ ಶಾಸಕ ಎಚ್.ಸಿ.ಬಾಲಕೃಷ್ಣರವರು ವಿರಮಿಸದಂತೆ ಕಾಣುತ್ತಿಲ್ಲ ಎಂದು ಮಾಜಿ ಶಾಸಕ ಎ.ಮಂಜುನಾಥ್ ತಿಳಿಸಿದರು.
ಜನರನ್ನು ಹೀಗೆ ಹೆದರಿಸಿಕೊಂಡು ಮತ ಕೇಳುವುದು ಬಾಲಕೃಷ್ಣರವರ ನಿಜ ಪ್ರವೃತ್ತಿಯಾಗಿದೆ. ಇವರು ಲೋಕಸಭಾ ಚುನಾವಣೆಗೆ ಇಂತಹ ಒಂದೊಂದು ಭಾಷಣ ಮಾಡುವಾಗಲೂ ಡಿ.ಕೆ.ಸುರೇಶ್ ಅವರಿಗೆ ಹತ್ತತ್ತು ಸಾವಿರ ಮತಗಳು ನಮಗೆ ವರದಾಯಕವಾಗುತ್ತದೆ ಎಂದು ಹೇಳಿದರು.
ಎಚ್.ಸಿ.ಬಾಲಕೃಷ್ಣರವರ ಇಂತಹ ಒಂದು ಹೇಳಿಕೆ ಇಡೀ ರಾಜ್ಯದ ಎಲ್ಲಾ ಶಾಸಕರನ್ನು ಜನರು ಪ್ರಶ್ನಿಸುತ್ತಾರೆ. ಜನತಾ ಜನಾರ್ಧನ ಎಂದು ಬಾಯಲ್ಲಿ ಹೇಳಿದರೆ ಮಾತ್ರ ಸಾಲದು. ಆ ಜನಾರ್ಧನನನ್ನು ಹೀಗೆ ಹೆದುರಿಸುವ ಕೆಲಸ ಮಾಡಬಾರದು. ಹೀಗೆ ಮಾತನಾಡಿದರೆ ನಾವು ಪಡೆಯುತ್ರಿರುವುದು ಸರ್ಕಾರಕ್ಕೋ ಅಥವಾ ಕಾಂಗ್ರೆಸ್ ಪಕ್ಷದ ಹಂಗೋ ಎಂದು ಮತದಾರರು ಕಸಿವಿಸಿಗೆ ಒಳಗಾಗುತ್ತಾರೆ ಎಂದರು.ಜನರಿಂದಲೂ ಆಕ್ರೋಶ:
ಗ್ರಾಮಸ್ಥ ಗಂಗಣ್ಣ ಮಾತನಾಡಿ, ಅಯೋಧ್ಯೆ ರಾಮ ನಮ್ಮ ನಂಬಿಕೆ, ಅಲ್ಲಿಂದ ಬರುವ ಅಕ್ಷತೆ ನಮಗೆ ಪವಿತ್ರವಾದದ್ದು. ನಮ್ಮ ಮತ ಪಡೆದು ಇಂದು ಶಾಸಕರು ಹೀಗೆ ಮಾತನಾಡುತ್ತಿರುವುದು ಸರಿಯಲ್ಲ. ಕರ್ನಾಟಕ ಈ ಹಿಂದಿನಿಂದಲೂ ಒಂದು ಸಂಪ್ರದಾಯ ಪಾಲಸಿಕೊಂಡು ಬಂದಿದೆ ರಾಜ್ಯ ಸರ್ಕಾರಕ್ಕೆ ಮತ ಹಾಕಿದ ಜನರೇ ಕೇಂದ್ರ ಸಕರ್ಾರದ ಆಯ್ಕೆಗೆ ಮನಸ್ಸು ಬದಲಿಸಿ ಹಾಕುತ್ತೇವೆ. ಅಂತಹುದರಲ್ಲಿ ಜನರ ಮೇಲೆ ಹೀಗೆ ಬ್ಲಾಕ್ ಮೇಲ್ ತಂತ್ರ ಬಳಸಬಾರದು. ಇದು ಅವರಿಗೆ ಮುಂದಿನ ಚುನಾವಣೆಯಲ್ಲಿ ಮುಳುಗುನೀರು ತರುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.31ಕೆಆರ್ ಎಂಎನ್ 7.ಜೆಪಿಜಿ
ಮಾಜಿ ಶಾಸಕ ಎ.ಮಂಜುನಾಥ್.