ಬಾಲಕೃಷ್ಣರಾಜು ಅವಿರೋಧ ಆಯ್ಕೆ

KannadaprabhaNewsNetwork |  
Published : Mar 23, 2024, 01:02 AM IST
41 | Kannada Prabha

ಸಾರಾಂಶ

ದೆಹಲಿಯ ಆಗ್ರಾದ ಜೆ.ಪಿ. ಪ್ಯಾಲೇಸ್ ನಲ್ಲಿ 4 ದಿನ ನಡೆದ 16ನೇ ವರ್ಷದ ವಾರ್ಷಿಕ ಸಮ್ಮೇಳನದಲ್ಲಿ ಮೈಸೂರು ಮತ್ತು ಚಾಮರಾಜನಗರ ರೆವೆನ್ಯೂ ಜಿಲ್ಲೆಗಳನ್ನೊಳಗೊಂಡಂತೆ ರಚಿಸಲಾಗಿರುವ ಅಲಯನ್ಸ್ ಜಿಲ್ಲೆ 255 ರ ಜಿಲ್ಲಾ ರಾಜ್ಯಪಾಲರಾಗಿ ಬಾಲಕೃಷ್ಣರಾಜು ಅವರು ಸರ್ವಾನುಮತದಿಂದ ಚುನಾಯಿತರಾದರು.

ಕನ್ನಡಪ್ರಭ ವಾರ್ತೆ ಮೈಸೂರು

ಅಂತಾರಾಷ್ಟ್ರೀಯ ಅಲಯನ್ಸ್ ಕ್ಲಬ್ಸ್ ಜಿಲ್ಲೆ 255ರ ರಾಜ್ಯಪಾಲರಾಗಿ ಶಿಕ್ಷಣ ಕ್ಷೇತ್ರದ ಬಾಲಕೃಷ್ಣರಾಜು ಅವಿರೋಧ ಆಯ್ಕೆಯಾದರು.

ದೆಹಲಿಯ ಆಗ್ರಾದ ಜೆ.ಪಿ. ಪ್ಯಾಲೇಸ್ ನಲ್ಲಿ 4 ದಿನ ನಡೆದ 16ನೇ ವರ್ಷದ ವಾರ್ಷಿಕ ಸಮ್ಮೇಳನದಲ್ಲಿ ಮೈಸೂರು ಮತ್ತು ಚಾಮರಾಜನಗರ ರೆವೆನ್ಯೂ ಜಿಲ್ಲೆಗಳನ್ನೊಳಗೊಂಡಂತೆ ರಚಿಸಲಾಗಿರುವ ಅಲಯನ್ಸ್ ಜಿಲ್ಲೆ 255 ರ ಜಿಲ್ಲಾ ರಾಜ್ಯಪಾಲರಾಗಿ ಬಾಲಕೃಷ್ಣರಾಜು ಅವರು ಸರ್ವಾನುಮತದಿಂದ ಚುನಾಯಿತರಾದರು.

ಸಮ್ಮೇಳನದಲ್ಲಿ ಅಂತರ ರಾಷ್ಟ್ರೀಯ ಅಧ್ಯಕ್ಷ ಎಸ್. ಬಾಲಚಂದ್ರ ಅವರಿಂದ ಪ್ರಮಾಣ ವಚನ ಸ್ವೀಕರಿಸಿದರು.

ಅಂತರಾಷ್ಟ್ರೀಯ ನಿರ್ದೇಶಕರಾದ ನಾಗರಾಜ್ ವಿ. ಬೈರಿ ಅವರಿಂದ ಆಯ್ಕೆ ಪತ್ರ ಪಡೆದರು. ಜಿಲ್ಲೆಯ ಮೊದಲನೇ ಉಪ ಜಿಲ್ಲಾ ರಾಜ್ಯಪಾಲರಾಗಿ ಆಯ್ಕೆ ಆಗಿರುವ ಎಸ್. ವೆಂಕಟೇಶ್, ಜಿಲ್ಲಾ ಸಂಪುಟ ಕಾರ್ಯದರ್ಶಿ, ಗಂಗಾಧರಪ್ಪ, ಜಿಲ್ಲಾ ಸಂಪುಟ ಖಜಾಂಚಿ ಕೃಷ್ಣೋಜಿ ರಾವ್, ಜಿಲ್ಲಾ ಪಿಆರ್.ಒ ಎನ್. ಬೆಟ್ಟೇಗೌಡ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಟಿ ಆತ್ಮ*ತ್ಯೆಗೆ ಸರ್ಕಾರಿ ನೌಕರಿಗೆ ಸೇರುವಂತೆ ಕುಟುಂಬ ಒತ್ತಡ ಕಾರಣ?
ನಮ್ಮವರಿಗೆ ಇಲ್ಲದ ಪರಿಹಾರ ಅವರಿಗೆ ಏಕೆ : ಬಿಜೆಪಿ ಆಕ್ರೋಶ