ರಬಕವಿ-ಬನಹಟ್ಟಿ ನಗರದಲ್ಲಿ ಮಾರುತಿ ದೇವರ ಜಾತ್ರೆಯ ನಿಮಿತ್ತ ಮೂರು ದಿನಗಳ ಕಾಲ ನೀರೋಕುಳಿ ಮತ್ತು ಹಾಲೋಕುಳಿ ಸಂಭ್ರಮದಿಂದ ಜರುಗಿದವು.
ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ
ನಗರದಲ್ಲಿ ಮಾರುತಿ ದೇವರ ಜಾತ್ರೆಯ ನಿಮಿತ್ತ ಮೂರು ದಿನಗಳ ಕಾಲ ನೀರೋಕುಳಿ ಮತ್ತು ಹಾಲೋಕುಳಿ ಸಂಭ್ರಮದಿಂದ ಜರುಗಿದವು. ಆರತಿ ಹಿಡಿದ ಮುತ್ತೈದೆಯರು, ಸಾಂಬಾಳ ವಾದನ ಸೇರಿ ಮಂಗಳ ವಾದ್ಯಗಳೊಡನೆ ಮಾರುತಿ ದೇವರ ಪಲ್ಲಕ್ಕಿ ಸಹಿತ ಓಕುಳಿ ಆಡುವ ಯುವಕರನ್ನು ದೇಗುಲಕ್ಕೆ ಕರೆ ತಂದು ಓಕುಳಿ ಹೊಂಡದ ನೀರನ್ನು ಮಾರುತಿಗೆ ಸಮರ್ಪಿಸಿದರು.ಹಾಲೋಕುಳಿಯಲ್ಲಿ ಸುಮಾರು ೬೦ ಅಡಿಗೂ ಎತ್ತರದ ಹಾಲೋಕುಳಿ ಕಂಬ ಏರುವ ಸ್ಪರ್ಧೆಯಲ್ಲಿ ನಗರದ ಯುವಕರ ನಾಲ್ಕು ತಂಡಗಳ ಪಾಲ್ಗೊಂಡಿದ್ದವು, ಯುವಕರು ಹಾಲಗಂಬ ಏರಲು ಪ್ರಯತ್ನಿಸಿದರೆ ಕೆಳಗೆ ನಿಂತ ಹಲವು ಯುವಕರು ನೀರೆರೆಸಿ, ಗ್ರೀಸ್ ಮೆತ್ತಿದ ಕಂಭಕ್ಕೆ ಬಾಳೆ ಹಣ್ಣು, ಬೆಣ್ಣೆ ಮೊದಲಾದವುಗಳನ್ನು ಎರಚಿ ಹಾಲಗಂಬ ಏರುವ ಪ್ರಯತ್ನ ವಿಫಲಗೊಳಿಸಲು ಪ್ರಯತ್ನಿಸಿದರು. ಅವೆಲ್ಲವನ್ನೂ ಮೀರಿ ತುಗಲಿ ಲಕ್ಕವ್ವದೇವಿ, ಯಲ್ಲಮ್ಮ ದೇವಿ, ಘಟ್ಟಗಿ ಬಸವೇಶ್ವರ, ಮಹಿರ್ಷಿ ಭಗೀರಥ ತಂಡಗಳು ಹಾಲಗಂಬದ ತುದಿಮುಟ್ಟಿ ಬೆಳ್ಳಿ ಕಡೆ ಬಹುಮಾನ ಪಡೆದುಕೊಂಡರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.