ಗದಗ: ಬಣಜಿಗ ಸಮಾಜದವರಿಗೆ ಸಮಸ್ಯೆ ಬಂದಾಗ ಗಟ್ಟಿ ಧ್ವನಿಯಾಗಿ ನಿಂತವರಲ್ಲಿ ಕೆ.ಎಚ್. ಪಾಟೀಲ ಹಾಗೂ ನನ್ನ ಸಹೋದರ ಡಿ.ಆರ್. ಪಾಟೀಲ ಮುಂಚೂಣಿಯಲ್ಲಿ ನಿಲ್ಲುತ್ತಾರೆ ಎಂದು ಕಾನೂನು, ಪ್ರವಾಸೋದ್ಯಮ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಹೇಳಿದರು.
ಗದಗ ಶಹರ ಅಭಿವೃದ್ಧಿಗೆ ಶ್ರಮ ವಹಿಸಲಾಗುತ್ತಿದೆ. ಗದಗ ಅಭಿವೃದ್ಧಿ ಹೊಂದಿದರೆ ನಗರದಲ್ಲಿ ವ್ಯಾಪಾರ-ವಹಿವಾಟು ನಡೆಸುವವರು ಅಭಿವೃದ್ಧಿ ಹೊಂದುತ್ತಾರೆ. ಆದರೆ, ಅಭಿವೃದ್ಧಿ ಕೆಲಸಗಳಿಗೆ ಅಡ್ಡಗಾಲು ಹಾಕಿದವರಿಗೆ ಬೆಂಬಲ ನೀಡಬೇಡಿ. ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ ಅವರು ಉತ್ತಮ ಸಂಸ್ಕೃತಿ ಹೊಂದಿರುವ ನಾಯಕ. ಅವರಿಗೆ ಮತ ನೀಡುವ ಮೂಲಕ ಆಶೀರ್ವಾದ ಮಾಡಬೇಕು ಎಂದು ಮನವಿ ಮಾಡಿದರು.
ಗದಗ-ಬೆಟಗೇರಿ ಶಹರ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಬಿ.ಬಿ. ಅಸೂಟಿ ಮಾತನಾಡಿದರು. ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ, ಮಾಜಿ ಶಾಸಕ ಡಿ.ಆರ್. ಪಾಟೀಲ, ಜಿ.ಎಸ್. ಗಡ್ಡದೇವರಮಠ ಮತಯಾಚಿಸಿದರು.ಬಣಜಿಗ ಸಮಾಜದ ಅಧ್ಯಕ್ಷ ನಾಗೇಶ ಸವಡಿ, ಮುಖಂಡರಾದ ರೇವಣಸಿದ್ದಪ್ಪ ಯಳಮಲಿ, ಉಮೇಶ ಹುಬ್ಬಳ್ಳಿ, ಈಶಣ್ಣ ರಾಮನಕೊಪ್ಪ, ಸುರೇಶ ನಿಲೂಗಲ್, ಸಿದ್ರಾಮಪ್ಪ ಉಮಚಗಿ, ಗಂಗಾಧರ ಮುನವಳ್ಳಿ, ಅಮರೇಶ ನಾಶಿ, ಶಾಂತಪ್ಪ ಅಕ್ಕಿ, ಲಲಿತಾ ಇಂಗಳಳ್ಳಿ, ಬಸವರಾಜ ಅಂಗಡಿ, ಬಸವರಾಜ ರಾಮನಕೊಪ್ಪ, ಬಸವರಾಜ ಉಮಚಗಿ, ಚೇತನ ಅಂಗಡಿ, ಶ್ರೀಧರ ವಜ್ರಬಂಡಿ, ವಿರೂಪಾಕ್ಷಪ್ಪ ಅಕ್ಕಿ, ಗಿರೀಶ ಕೊರಿ, ಶರಣಪ್ಪ ಹೊಸಂಗಡಿ, ನಗರಸಭೆ ಸದಸ್ಯರಾದ ಲಲಿತಾ ಅಸೂಟಿ, ಶಕುಂತಲಾ ಅಕ್ಕಿ ಇದ್ದರು.