ರಾಣಿಬೆನ್ನೂರು: ತಮಿಳುನಾಡಿಗೆ ಕಾವೇರಿ ನದಿ ನೀರು ಬಿಡುಗಡೆ ಮಾಡುವಂತೆ ಕಾವೇರಿ ನದಿ ನೀರು ನಿಯಂತ್ರಣ ಸಮಿತಿ ಮತ್ತು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ನೀಡಿರುವ ಆದೇಶದ ವಿರುದ್ಧ ಕರೆ ನೀಡಲಾಗಿದ್ದ ಕರ್ನಾಟಕ ಬಂದ್ಗೆ ಗುರುವಾರ ನಗರದಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಈ ಸಮಯದಲ್ಲಿ ಮಾತನಾಡಿದ ಪ್ರತಿಭಟನಾಕಾರರು, ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆ ಕೊರತೆಯಿದೆ. ಮುಂದಿನ ದಿನಗಳಲ್ಲಿ ರಾಜ್ಯದ ರೈತರಿಗೆ ನೀರಿನ ಅಭಾವ ಎದುರಾಗಲಿದೆ. ಹೀಗಾಗಿ ನೀರು ಹರಿಸುವುದು ರೈತರಿಗೆ ಅನ್ಯಾಯ ಎಸಗಿದಂತಾಗುತ್ತದೆ. ಆದ್ದರಿಂದ ಯಾವುದೇ ಕಾರಣಕ್ಕೂ ತಮಿಳುನಾಡಿಗೆ ನೀರು ಹರಿಸಬಾರದು ಎಂದು ಆಗ್ರಹಿಸಿದರು.
ಹನುಮಂತಪ್ಪ ಕಬ್ಬಾರ, ಕಿರಣ ಗುಳೇದ, ಶಂಕರ ಬಾರ್ಕಿ, ಈರಣ್ಣ ಕೊಂಡಜ್ಜಿ, ಪ್ರವೀಣ ಸರವಂದ, ಪ್ರಶಾಂತಗೌಡ ಬಾಳನಗೌಡ್ರ, ವಿಜಯಕುಮಾರ ಎಂ., ನಾರಾಯಣ ಲಕ್ಷ್ಮೇಶ್ವರ, ಮಾಲತೇಶ ಜಿ.ಜಿ., ವೀರೇಶ ಬಾರ್ಕಿ, ಪರಶುರಾಮ ಕಸವಾಳ, ಹನುಮಂತ ಕೊಂಡಜ್ಜಿ, ನಟರಾಜ ಕೋಟಿಹಾಳ, ಶ್ರೀನಿವಾಸ ಕಾತರಕಿ, ಹನುಮಂತ ಮಕರಬ್ಬಿ, ಹನುಮಂತ ಕರಿಯಜ್ಜಿ, ಮಂಜುನಾಥ ನ್ಯಾಮತಿ ಮತ್ತಿತರರಿದ್ದರು.