ಕನ್ನಡಪ್ರಭ ವಾರ್ತೆ ಸೊರಬ
ಮಂಗಳವಾರ ಪಟ್ಟಣದ ಬಂಗಾರ ಧಾಮದಲ್ಲಿ ಬಂಗಾರಪ್ಪ ಫೌಂಡೇಷನ್ ಹಾಗೂ ಬಂಗಾರಪ್ಪ ಅಭಿಮಾನಿ ಬಳಗದಿಂದ ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ ಅವರ 12ನೇ ವರ್ಷದ ಪುಣ್ಯಸ್ಮರಣೆ ಅಂಗವಾಗಿ ಹಮ್ಮಿಕೊಂಡಿದ್ದ ಬಂಗಾರಪ್ಪ ಸವಿನೆನಪು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಅಪ್ಪಟ ಸಮಾಜವಾದಿ ಆಗಿದ್ದ ಬಂಗಾರಪ್ಪ ಅವರು, ಅನೇಕರಿಗೆ ರಾಜಕಾರಣದ ಮೆಟ್ಟಿಲಾಗಿದ್ದರು. ತಮ್ಮ ಸ್ವಾಭಿಮಾನಕ್ಕೆ ಧಕ್ಕೆ ಬಂದಾಗ ಹೊಸ ಪಕ್ಷ ಕಟ್ಟಿ ಎದೆಗಾರಿಕೆ ಪ್ರದರ್ಶಿಸಿದ ಅಪರೂಪದ ರಾಜಕಾರಣಿ. ಬಡವರನ್ನು ಗಮನದಲ್ಲಿಟ್ಟುಕೊಂಡು ಆಶ್ರಯ, ಆರಾಧನಾ, ವಿಶ್ವ ಯೋಜನೆಗಳನ್ನು ಜಾರಿಗೊಳಿಸಿದ್ದರು. ರಾಜ್ಯ ರಾಜಕಾರಣದಲ್ಲಿ ಮಾಜಿ ಮುಖ್ಯಮಂತ್ರಿಯೊಬ್ಬರು ಈ ಹೊತ್ತಿಗೂ ಜನಮಾನಸದಲ್ಲಿ ಉಳಿದಿದ್ದಾರೆ ಎಂದರೆ ಅದು ಬಂಗಾರಪ್ಪ ಒಬ್ಬರೇ ಎಂದು ಸ್ಮರಿಸಿದರು.ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಕಾರ್ಯಕ್ರಮ ಉದ್ಘಾಟಿಸಿ, ಬಂಗಾರಪ್ಪ ಅವರು ಕಾರ್ಯ ಚಟುವಟಿಕೆಯಿಂದಾಗಿ ಹಾಗೂ ವಿಚಾರಧಾರೆಯಿಂದ ನಮ್ಮ ನಡುವೆ ಇನ್ನೂ ಬದುಕಿದ್ದಾರೆ. ಅವರ ಅನುಭವ ಮತ್ತು ಆದರ್ಶದಿಂದಾಗಿ ರಾಜಕಾರಣದಲ್ಲಿ ನಾನು ಈ ಸ್ಥಾನಕ್ಕೆ ಬೆಳೆಯಲು ಸಾಧ್ಯವಾಗಿದೆ. ಉತ್ತರ ಕರ್ನಾಟಕದಲ್ಲಿ ಬಂಗಾರಪ್ಪ ಎಂದರೆ ದೈವತ್ವ ಭಾವನೆ ಇದೆ. ತಂದೆ- ತಾಯಿಯರ ಬಗ್ಗೆ ಅಪಾರವಾದ ಕಾಳಜಿಯನ್ನು ಹೊಂದಿ ಸ್ಮಾರಕವನ್ನು ನಿರ್ಮಿಸಿರುವ ಮಧು ಬಂಗಾರಪ್ಪ ಅವರ ಕಾರ್ಯ ಅತ್ಯಂತ ಶ್ಲಾಘನೀಯ ಎಂದರು.
ಸಚಿವ ಎಸ್. ಮಧು ಬಂಗಾರಪ್ಪ ಪ್ರಾಸ್ತಾವಿಕವಾಗಿ ಮಾತನಾಡಿ, ಬಂಗಾರಪ್ಪ ನವರ ಚಿಂತನೆ ವಿಚಾರಗಳು ನಾಡಿನ ಜನತೆಗೆ ತಲುಪಬೇಕು. ಈ ಸ್ಮಾರಕವನ್ನು ನಿರ್ಮಿಸಲು ಹೆಚ್ಚು ಅವಧಿಯನ್ನು ತೆಗೆದುಕೊಂಡಿದ್ದಕ್ಕೆ ಕ್ಷಮೆಯನ್ನು ಕೇಳುತ್ತೇನೆ. ಈ ಧಾಮವು ಸ್ಫೂರ್ತಿಯ ನೆಲೆಯಾಗಬೇಕು. ಬಂಗಾರಪ್ಪ ಅವರ ಜನತೆಯ ನಡುವೆ ಇರುವ ನಾಯಕರಾಗಿದ್ದರು. ಅವರ ಹೆಸರನ್ನು ಉಳಿಸಿಕೊಂಡು ಬೆಳೆಸಿಕೊಂಡು ಹೋಗುವ ಕಾರ್ಯವನ್ನು ಮಾಡುತ್ತೇನೆ. ಬಂಗಾರಪ್ಪನವರ ಚಿಂತನೆ ಒಂದು ಅಧ್ಯಯನ ಪೀಠವಾಗಬೇಕು ಎಂದರು.
- - - ಬಾಕ್ಸ್ ಬಂಗಾರಪ್ಪಗೆ ಬಿಜೆಪಿ ಸರಿಯಾಗಿ ನಡೆಸಿಕೊಳ್ಳಲಿಲ್ಲ: ಲಿಂಬಾವಳಿಸ್ವಾಭಿಮಾನಕ್ಕೆ ಧಕ್ಕೆಯಾದಾಗ ರಾಜಿ ರಾಜಕಾರಣ ಎಂದೂ ಮಾಡದ ಎಸ್.ಬಂಗಾರಪ್ಪ ಅವರನ್ನು ಬಿಜೆಪಿ ಸರಿಯಾಗಿ ನಡೆಸಿಕೊಳ್ಳಲಿಲ್ಲ. ಬಿಜೆಪಿಯಲ್ಲಿ ಆತ್ಮಗೌರವಕ್ಕೆ ಬೆಲೆ ಇಲ್ಲದ ವಿಷಮ ವಾತಾವರಣ ಇದೆ. ಈ ಕಾರಣದಿಂದಲೇ ಎಸ್. ಬಂಗಾರಪ್ಪ ಪಕ್ಷ ತೊರೆಯುವಂತಾಗಿತ್ತು ಎಂದು ಬಿಜೆಪಿ ಮುಖಂಡ ಅರವಿಂದ ಲಿಂಬಾವಳಿ ಹೇಳಿದರು.
ಬಂಗಾರಪ್ಪ ಅವರು ಬಿಜೆಪಿಗೆ ಬರುವ ಮೊದಲು ರಾಜ್ಯದಲ್ಲಿ ಕೇವಲ 44 ಸ್ಥಾನಗಳನ್ನು ಹೊಂದಿತ್ತು. ಬಂಗಾರಪ್ಪ ಬಂದ ಮೇಲೆ ವಿಧಾನಸಭಾ ಸ್ಥಾನಗಳು ಅಧಿಕವಾಗಿ ಯಡಿಯೂರಪ್ಪ ಅವರಂಥವರು ಮುಖ್ಯಮಂತ್ರಿ ಆಗುವ ಭಾಗ್ಯ ಬಂದಿದೆ. ಶಿವಮೊಗ್ಗದಲ್ಲಿ ಇಬ್ಬರು ಹಿರಿಯ ರಾಜಕಾರಣಿಗಳು ಪೈಪೋಟಿಯಲ್ಲಿ ವಾಣಿಜ್ಯ ನಿವೇಶನಗಳ ಖರೀದಿಸಿದ್ದಾರೆ. ಆದರೆ, ರಸ್ತೆಯ ಬದಿಯಲ್ಲೇ ಇರುವ ಬಂಗಾರಪ್ಪ ಧಾಮವನ್ನು ವಾಣಿಜ್ಯೀಕರಣಗೊಳಿಸದೇ ಸಾರ್ವಜನಿಕ ಸೇವೆಗೆ ಅಣಿಮಾಡಿಕೊಟ್ಟಿರುವುದು ಮಧು ಬಂಗಾರಪ್ಪ ಅವರ ಹೆಗ್ಗಳಿಕೆ ಎಂದು ಲಿಂಬಾವಳಿ ಹೇಳಿದರು.- - - -26ಕೆಪಿಸೊರಬ04: