ಶಿವಮೊಗ್ಗ: ನಗರದ ರೈಲ್ವೆ ನಿಲ್ದಾಣದಲ್ಲಿ ಬಾಂಗ್ಲಾ ದೇಶದ ಮುದ್ರೆ ಹೊತ್ತು ಪತ್ತೆಯಾದ 2 ಬಾಕ್ಸ್ಗಳನ್ನು ಇರಿಸಿದ್ದ ಆರೋಪಿಗಳನ್ನು ಬಂಧಿಸಿರುವ ಪೊಲೀಸರು, ಮಂಗಳವಾರ ಮಹಜರು ಮಾಡುವ ಸಲುವಾಗಿ ಸ್ಥಳಕ್ಕೆ ಆರೋಪಿಗಳನ್ನು ಕರೆದೊಯ್ದರು.
ಕಡಿಮೆ ಬಡ್ಡಿ ದರದಲ್ಲಿ ಸಾಲ ಕೊಡಿಸುವ ಆಸೆ ಹುಟ್ಟಿಸಿ, ಮುಂಗಡ ಬಡ್ಡಿ ವಸೂಲು ಮಾಡುತ್ತಿದ್ದ ಈ ತಂಡ ಬಳಿಕ ಫಲಾನುಭವಿಗಳಿಗೆ ಹಣ ತುಂಬಿದ ಟ್ರಂಕ್ ಎಂದು ನಂಬಿಸಿ, ಕಸ ತುಂಬಿದ ಬಾಕ್ಸ್ ನೀಡಿ ವಂಚನೆ ನಡೆಸುತ್ತಿತ್ತು. ಇದರ ಒಂದು ಭಾಗವಾಗಿಯೇ ಶನಿವಾರ ರಾತ್ರಿ ಈ ತ್ಯಾಜ್ಯ ತುಂಬಿದ ಬಾಕ್ಸ್ಗಳನ್ನು ರೈಲ್ವೆ ನಿಲ್ದಾಣಕ್ಕೆ ತಂದು ಇರಿಸಲಾಗಿತ್ತು. ಇದು ತೀವ್ರ ಆತಂಕ್ಕೆ ಕಾರಣವಾಗಿತ್ತು. ಬಾಕ್ಸ್ಗಳು ಪತ್ತೆಯಾದ ಬೆನ್ನಲ್ಲೇ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು.
ತಿಪಟೂರು ಮೂಲದ ಗಿರೀಶ್ ವಂಚನೆಗೆ ಒಳಗಾಗಿದ್ದು, ಜಯನಗರ ಪೊಲೀಸ್ ಠಾಣೆಗೆ ಅವರು ದೂರು ನೀಡಿದ್ದರು. ಈ ದೂರಿನ ಆಧಾರದ ಮೇಲೆ ಆರೋಪಿಗಳನ್ನು ಪೊಲೀಸರು ಬಂಧಿಸಿದರು.