ಒಳಮೀಸಲಾತಿಗೆ ಬಂಜಾರ ಸಮಾಜದ ವಿರೋಧ

KannadaprabhaNewsNetwork |  
Published : Mar 07, 2026, 03:15 AM IST
ಡಾ.ರಾಜೇಂದ್ರಬಾಬು ನಾಯಿಕ | Kannada Prabha

ಸಾರಾಂಶ

ಒಳಮೀಸಲಾತಿಗೆ ಬಂಜಾರ ಸಮಾಜದ ವಿರೋಧವಿದ್ದು, ಹಳೆಯ ಮೀಸಲಾತಿ ಆಧಾರದಲ್ಲಿ ನೇಮಕಾತಿ ಮಾಡುವ ಸರ್ಕಾರದ ನಿರ್ಧಾರಕ್ಕೆ ಸ್ವಾಗತವಿದೆ ಎಂದು ಬಂಜಾರ ಸಮಾಜದ ಮುಖಂಡ ಹಾಗೂ ಶ್ರೀ ತುಳಸಿಗಿರೀಶ ಫೌಂಡೇಶನ್ ಅಧ್ಯಕ್ಷ ಡಾ.ಬಾಬುರಾಜೇಂದ್ರ ನಾಯಿಕ ಹೇಳಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಒಳಮೀಸಲಾತಿಗೆ ಬಂಜಾರ ಸಮಾಜದ ವಿರೋಧವಿದ್ದು, ಹಳೆಯ ಮೀಸಲಾತಿ ಆಧಾರದಲ್ಲಿ ನೇಮಕಾತಿ ಮಾಡುವ ಸರ್ಕಾರದ ನಿರ್ಧಾರಕ್ಕೆ ಸ್ವಾಗತವಿದೆ ಎಂದು ಬಂಜಾರ ಸಮಾಜದ ಮುಖಂಡ ಹಾಗೂ ಶ್ರೀ ತುಳಸಿಗಿರೀಶ ಫೌಂಡೇಶನ್ ಅಧ್ಯಕ್ಷ ಡಾ.ಬಾಬುರಾಜೇಂದ್ರ ನಾಯಿಕ ಹೇಳಿದರು.

ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಈಗಿರುವ ಹಳೆಯ ಮೀಸಲಾತಿ ವ್ಯವಸ್ಥೆಯ ಆಧಾರದ ಮೇಲೆ ಮುಂದುವರಿಸುವ ನಿರ್ಧಾರ ಕೈಗೊಂಡಿರುವುದನ್ನು ಸರ್ಕಾರವು ಸರ್ಕಾರಿ ಉದ್ಯೋಗಗಳ ನೇಮಕಾತಿಯನ್ನು ಒಳಮೀಸಲಾತಿಯ ಆಧಾರದ ಮೇಲೆ ಅಲ್ಲದೆ ಬಂಜಾರ ಸಮುದಾಯ ಸ್ವಾಗತಿಸುತ್ತದೆ. ಸಮಸ್ತ ಬಂಜಾರಾ ಸಮಾಜ ಸರ್ಕಾರಕ್ಕೆ ಅಭಿನಂದನೆಗಳನ್ನು ಸಲ್ಲಿಸುತ್ತದೆ. ಈ ನಿರ್ಧಾರದಿಂದ ಉದ್ಯೋಗ ನೇಮಕಾತಿ ಪ್ರಕ್ರಿಯೆ ವಿಳಂಬವಾಗದೆ ಮುಂದುವರಿಯಲು ಸಹಾಯವಾಗಲಿದ್ದು, ಅರ್ಹ ಅಭ್ಯರ್ಥಿಗಳಿಗೆ ಅವಕಾಶ ಸಿಗುತ್ತದೆ. ಸರ್ಕಾರದ ಈ ಕ್ರಮವು ಸಮಾನ ಅವಕಾಶ ಮತ್ತು ಸಾಮಾಜಿಕ ನ್ಯಾಯವನ್ನು ಕಾಪಾಡುವತ್ತ ಒಂದು ಉತ್ತಮ ಹೆಜ್ಜೆಯಾಗಿದೆ. ಭವಿಷ್ಯದಲ್ಲಿಯೂ ಸರ್ಕಾರ ಇದೇ ರೀತಿಯಲ್ಲಿ ನೇಮಕಾತಿ ಪ್ರಕ್ರಿಯೆಯನ್ನು ಮುಂದುವರಿಸಲಿದೆ ಎಂದು ಬಂಜಾರ ಸಮುದಾಯ ನಿರೀಕ್ಷಿಸುತ್ತದೆ. ಅನುಸೂಚಿತ ಜಾತಿ ವರ್ಗದ ಒಳಗಿನ ಅಂತರಿಕ ಮೀಸಲಾತಿಯಲ್ಲಿ ಪ್ರಮುಖ ಆಕ್ಷೇಪಣೆಗಳಿವೆ. ಉಪಜಾತಿಗಳ ನಡುವೆ ಸಂಭವನೀಯ ಅನ್ಯಾಯ ಕೋಟಾದ ಅಂತರಿಕ ಪುನರ್ವಿತರಣೆಯಿಂದ ಕೆಲವು ಸಮುದಾಯಗಳ ಈಗಿರುವ ಲಾಭ ಕಡಿಮೆಯಾಗುವ ಹಾಗೂ ಅಸಮಾನತೆ ಉಂಟಾಗುವ ಭಯ ಇದೆ ಎಂದರು. ಕಾನೂನು ಅನಿಶ್ಚಿತತೆ: ಈ ವಿಷಯ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿದೆ. ಅಂತಿಮ ತೀರ್ಪು ಬರುವ ಮೊದಲು ನೀತಿಯನ್ನು ಜಾರಿಗೆ ತಂದರೇ ರಾಜ್ಯ ಸರ್ಕಾರದಲ್ಲಿ ಸಂಕೀರ್ಣತೆಗಳು ಉಂಟಾಗುವ ಸಾಧ್ಯತೆ ಇದೆ. ಸಾಕಷ್ಟು ಸಾಮಾಜಿಕ ಅಧ್ಯಯನ ದತ್ತಾಂಶದ ಕೊರತೆ ಮೀಸಲಾತಿ ಉಪವರ್ಗೀಕರಣಕ್ಕೆ ಹಿಂದುಳಿದಿರುವ ಮಟ್ಟ ಮತ್ತು ಪ್ರಾತಿನಿಧ್ಯ ಕುರಿತು ಬಲವಾದ ವೈಜ್ಞಾನಿಕ ಹಾಗೂ ಪ್ರಾಯೋಗಿಕ ಅಧ್ಯಯನ ಅಗತ್ಯವಾಗಿದೆ ಎಂದರು.ಸಮುದಾಯ ವಿರೋಧ: ಹಲವಾರು ಪೀಡಿತ ಸಮುದಾಯಗಳು ಅಂತರಿಕ ಮೀಸಲಾತಿಯಿಂದ ತಮ್ಮ ಶಿಕ್ಷಣ ಹಾಗೂ ಉದ್ಯೋಗ ಅವಕಾಶಗಳಿಗೆ ಹಾನಿಯಾಗಬಹುದು ಎಂದು ಆಕ್ಷೇಪ ವ್ಯಕ್ತಪಡಿಸಿವೆ ಎಂದರು.ನೀತಿ ಜಾರಿಗೆ ಅಪಾಯ: ಪ್ರಕರಣ ನ್ಯಾಯಾಲಯದಲ್ಲಿ ಬಾಕಿ ಇರುವಾಗಲೇ ನೀತಿಯನ್ನು ಜಾರಿಗೆ ತಂದರೆ ಆಡಳಿತಾತ್ಮಕ ಹಾಗೂ ಕಾನೂನು ವಿವಾದಗಳು ಉಂಟಾಗಬಹುದು. ಅಂತರಿಕ ಮೀಸಲಾತಿಯನ್ನು ಜಾರಿಗೆ ತರಲು ಸಮಾನತೆಯ ಹಕ್ಕು ಮತ್ತು ಸಂವಿಧಾನಾತ್ಮಕ ನಿಯಮಗಳಿಗೆ ಅನುಗುಣವಾದ ಸ್ಪಷ್ಟ ನ್ಯಾಯಿಕ ಬೆಂಬಲ ಅಗತ್ಯವಾಗಿದೆ ಎಂದು ವಿವರಿಸಿದರು.ಗೋಷ್ಠಿಯಲ್ಲಿ ಮುಖಂಡರಾದ ಶಾಂತು ರಾಠೋಡ, ಬಸವರಾಜ ಚವ್ಹಾಣ, ರವಿ ಲಮಾಣಿ, ರವಿ ರಾಠೋಡ, ಬಾಬು ಚವ್ಹಾಣ, ಸುರೇಶ ಬಿಜಾಪುರ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜಿಲ್ಲೆಗೆ ಒಲಿದುಬಂದ 17ಕ್ಕೂ ಅಧಿಕ ಕೊಡುಗೆಗಳು
ಎಲ್ಲೆಂದರಲ್ಲೇ ಕಸ ಹಾಕುವವರಿಗೆ ದಂಡ ವಿಧಿಸಲು ಜಿಬಿಎ ಮುಖ್ಯ ಆಯುಕ್ತ ಸೂಚನೆ