ಕನ್ನಡಪ್ರಭ ವಾರ್ತೆ ತಾಳಿಕೋಟೆ
ಈ ರಸ್ತೆಯಲ್ಲಿ ಮುಳ್ಳು ಕಂಠಿ-ತಗ್ಗು ದಿನ್ನೆಗಳು ತುಂಬಿಕೊಂಡ ಪರಿಣಾಮವಾಗಿ ವಾಹನಗಳ ಸಂಚಾರ, ಕಾಲ್ನಡಿಗೆಯಲ್ಲಿಯೂ ತೆರಳುವುದು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿತ್ತು. ಪ್ರತಿನಿತ್ಯ ಈ ರಸ್ತೆಯ ಮೂಲಕ ಜಮೀನುಗಳಿಗೆ ತೆರಳುವ ರೈತರು ಮತ್ತು ಸಾರ್ವಜನಿಕರು ತೀವ್ರ ಸಂಕಷ್ಟ ಅನುಭವಿಸುತ್ತಿದ್ದರು.
ಈ ಸಮಸ್ಯೆ ಕುರಿತು ಅಲ್ಲಿನ ರೈತರು ಬಿಜೆಪಿ ಮುಖಂಡ ಬಸನಗೌಡ ಪಾಟೀಲ(ಯಡಿಯಾಪೂರ) ಅವರ ಗಮನಕ್ಕೆ ತರಲಾಗಿತ್ತು. ಈ ಮನವಿಯ ಮೇರೆಗೆ ಸ್ಥಳಕ್ಕೆ ಭೇಟಿ ನೀಡಿದ ಬಸನಗೌಡ ಪಾಟೀಲ ಯಡಿಯಾಪೂರ ಅವರು ರಸ್ತೆಯ ದುಃಸ್ಥಿತಿ ಪರಿಶೀಲಿಸಿ ವಿಳಂಬ ಮಾಡದೇ ಸ್ವಂತ ಖರ್ಚಿನಲ್ಲಿ ಸುಮಾರು ೧.೫೦ ಕಿ.ಮೀ. ರಸ್ತೆಯನ್ನು ಜೆಸಿಬಿ ಯಂತ್ರದ ಮೂಲಕ ಸ್ವಚ್ಛಗೊಳಿಸಿ, ಮಣ್ಣು, ಕಲ್ಲು ಹಾಗೂ ಗರಸು ಹಾಕಿಸಿ ಸಂಚಾರಕ್ಕೆ ಮುಕ್ತಗೊಳಿಸಿದ್ದಾರೆ.ಈ ಕಾರ್ಯ ಶ್ಲಾಘಿಸಿದ ರೈತರಾದ ಬಸಂತರಾಯ ಕೊಣ್ಣೂರ, ಶಿವಾನಂದ ಕೊಣ್ಣೂರ, ಮಲ್ಲಣ್ಣ ಕೊಣ್ಣೂರ, ಸಿದ್ದು ಹುಗ್ಗಿ, ಮಾತಾಬಸಾಬ ಮುಜಾವರ, ಸಿದ್ದನಗೌಡ ಕೊಣ್ಣೂರ, ಸುರೇಶ್ ಕೊಣ್ಣೂರ, ಶ್ರೀಶೈಲ ಕೊಣ್ಣೂರ, ರಾಮನಗೌಡ ಕೊಣ್ಣೂರ, ಶಂಕರಗೌಡ ಕೊಣ್ಣೂರ, ಭೀಮನಗೌಡ ಕೊಣ್ಣೂರ ಸೇರಿ ಸುತ್ತಮುತ್ತಲಿನ ರೈತರು ಬಸನಗೌಡ ಪಾಟೀಲ(ಯಡಿಯಾಪೂರ) ಅವರನ್ನು ಸನ್ಮಾನಿಸಿ ಗೌರವಿಸಿದರು.
- ಬಸನಗೌಡ. ಎಸ್. ಪಾಟೀಲ(ಯಡಿಯಾಪುರ) ಬಿಜೆಪಿ ಮುಖಂಡರು ದೇವರ ಹಿಪ್ಪರಗಿಕ್ಷೇತ್ರ