ಬಸವಕಲ್ಯಾಣದಲ್ಲಿ ಬಸವ ಜಯಂತಿ ಅದ್ಧೂರಿ ಮೆರವಣಿಗೆ

KannadaprabhaNewsNetwork |  
Published : May 10, 2024, 11:45 PM IST
ಚಿತ್ರ 10ಬಿಡಿಆರ್‌19: ಬಸವೇಶ್ವರರ ಬೆಳ್ಳಿ ಪುತ್ಥಳಿಯನ್ನು ಅಲಂಕೃತ ವಾಹನದಲ್ಲಿಟ್ಟು ನಡೆಸಿದ ಮೆರವಣಿಗೆಯಲ್ಲಿ ಭಕ್ತರಿಗೆ ದರ್ಶನ ನೀಡುವ ಬಸವೇಶ್ವರರ ಮೂರ್ತಿಗೆ ಮೆರವಣಿಗೆಯುದ್ದಕ್ಕೂ ಭಕ್ತರು ನೀರನ್ನು ಹಾಕಿ ಟೆಂಗು, ಕಾಯಿ, ಕರ್ಪೂರ ಒಡೆದು ಪೂಜೆ ಸಲ್ಲಿಸಿದರು.  | Kannada Prabha

ಸಾರಾಂಶ

ಶರಣರ ವೇಷಧಾರಿ ಮಕ್ಕಳಿದ್ದ ತೆರೆದ ವಾಹನದ ಮೇಲೆ ಮಕ್ಕಳಿಂದ ವಚನಗಳ ನೃತ್ಯಕ್ಕೆ ಹೆಜ್ಜೆ ಹಾಕಿ ಕುಣಿದು ಕುಪ್ಪಳಿಸಿದರು

ಕನ್ನಡಪ್ರಭ ವಾರ್ತೆ ಬಸವಕಲ್ಯಾಣ

ಬಸವ ಜಯಂತಿ ನಿಮಿತ್ತ ಮಹಾತ್ಮಾ ಬಸವೇಶ್ವರರು ನಡೆದಾಡಿದ ಪುಣ್ಯ ಭೂಮಿ ಬಸವಕಲ್ಯಾಣದಲ್ಲಿ ಅದ್ಧೂರಿ ಮೆರವಣಿಗೆ ನಡೆಯಿತು.

ಇಲ್ಲಿನ ಬಸವೇಶ್ವರ ದೇವಸ್ಥಾನದಲ್ಲಿ ಬೆಳಗ್ಗೆ 8ಕ್ಕೆ ಪೂಜೆ ಸಲ್ಲಿಸಿ ಅಲ್ಲಿಂದ ಅಲಂಕೃತಗೊಂಡ ಬಸವೇಶ್ವರರ ಪಲ್ಲಕ್ಕಿ ಮೆರವಣಿಗೆಗೆ ಅದ್ಧೂರಿ ಚಾಲನೆ ನೀಡಲಾಯಿತು.

ಮೆರವಣಿಗೆಯು ಐತಿಹಾಸಿಕ ಪರುಷ ಕಟ್ಟೆ, ಐತಿಹಾಸಿಕ ಚಾಲುಕ್ಯರ ಕೋಟೆ, ಗಾಂಧಿ ವೃತ್ತ, ಬಸವೇಶ್ವರ ವೃತ್ತ, ಡಾ. ಅಂಬೇಡ್ಕರ ವೃತ್ತ, ಹರಳಯ್ಯ ವೃತ್ತದ ಮೂಲಕ ಸಾಗಿತು.

ಮೆರವಣಿಗೆಯುದ್ದಕ್ಕೂ ಸಾವಿರಾರು ಸಂಖ್ಯೆಯಲ್ಲಿ ಬಸವ ಭಕ್ತರು ಪಾಲ್ಗೊಂಡಿದ್ದರು. ಜಾನಪದ ಕಲಾ ತಂಡಗಳಾದ ಮಹಿಳಾ ಡೊಳ್ಳು, ಲಂಬಾಣಿ ನೃತ್ಯ, ಬ್ಯಾಂಡ್‌, ಕುದರೆ ಮೇಲೆ ಕುಳಿತಿರುವ ಬಸವೇಶ್ವರ ವೇಷಧಾರಿ, ಅಕ್ಕಮಹಾದೇವಿ ವೇಷಧಾರಿ ಇನ್ನುಳಿದ ಶರಣರ ವೇಷಧಾರಿಗಳ ವಾಹನಗಳ ಮೆರವಣಿಗೆ ಗಮನ ಸೆಳೆಯುವಂತಿತ್ತು.

ಶರಣರ ವೇಷಧಾರಿ ಮಕ್ಕಳಿದ್ದ ತೆರೆದ ವಾಹನದ ಮೇಲೆ ಮಕ್ಕಳಿಂದ ವಚನಗಳ ನೃತ್ಯಕ್ಕೆ ಹೆಜ್ಜೆ ಹಾಕಿ ಕುಣಿದು ಕುಪ್ಪಳಿಸಿದರು. ಮೆರವಣಿಗೆ ಇಲ್ಲಿನ ನಗರಸಭೆ ಕಚೇರಿ ಕಟ್ಟಡದ ಹತ್ತಿರ ಬಂದಾಗ ನಗರಸಭೆಯ ಆಯುಕ್ತರು ರಾಜು, ಮಾಜಿ ಎಂಎಲ್‌ಸಿ ವಿಜಯಸಿಂಗ್‌, ಹುಲಸೂರಿನ ಶಿವಾನಂದ ಮಹಾಸ್ವಾಮಿಗಳು, ಅಭಿಯಂತರರಾದ ಶಿವಶರಣಪ್ಪ ಸಜ್ಜನಶೆಟ್ಟಿ ಅವರುಗಳು ಪೂಜೆ ಸಲ್ಲಿಸಿ ನಮನ ಸಲ್ಲಿಸಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪತ್ರಕರ್ತ ತಗಡೂರಿಗೆ ಲೋಹಿಯಾ ಪ್ರಶಸ್ತಿ ಪ್ರದಾನ
ಕನ್ನಡದಲ್ಲಿ ರೈಲ್ವೆ ಪರೀಕ್ಷೆಗೆ ಇಲಾಖೆ : ಕರವೇ