ಶ್ರೇಷ್ಠ ವಿಚಾರದಿಂದ ಬಸವಣ್ಣನವರು ಜಗಜ್ಯೋತಿ

KannadaprabhaNewsNetwork |  
Published : May 02, 2025, 11:46 PM IST
1ಕೆಕೆಆರ್3:ಕುಕನೂರು ತಾಲೂಕಿನ ಮಸಬಹಂಚಿನಾಳ ಗ್ರಾಮದಲ್ಲಿ ಬಸವ ಜಯಂತಿ ಅಂಗವಾಗಿ ಬಸವೇಶ್ವರ ಭಾವಚಿತ್ರ ಮೆರವಣಿಗೆ ಜರುಗಿತು. ಈ ವೇಳೆ ಮಾಜಿ ಸಚಿವ ಹಾಲಪ್ಪ ಆಚಾರ್ ಭಾಗವಹಿಸಿದ್ದರು. | Kannada Prabha

ಸಾರಾಂಶ

ಸಮಾಜದ ಮೌಢ್ಯಗಳನ್ನು ಹೋಗಲಾಡಿಸಲು ಬಸವೇಶ್ವರರು ಕಲ್ಯಾಣದಲ್ಲಿ ಸಮಾನತೆ ಕ್ರಾಂತಿ ಮಾಡಿದರು. ಅನುಭವ ಮಂಟಪದಲ್ಲಿ ಸಮಾಜದಲ್ಲಿ ಸರ್ವ ಶ್ರೇಷ್ಠತೆ ನೀಡುವ ಅನುಭವ ಹಂಚುವ ಮಹನೀಯರಿದ್ದರು. ಅವರ ಅಮೃತಧಾರೆಯಿಂದ ಸಮಾಜ ಇಂದು ಸಮಾನತೆ ಹಾದಿಯಲ್ಲಿ ಹೆಜ್ಜೆಹಾಕುತ್ತಿದೆ.

ಕುಕನೂರು:

ಬಸವಣ್ಣನವರು ಶ್ರೇಷ್ಠ ವಿಚಾರಗಳನ್ನು ಜಗತ್ತಿಗೆ ನೀಡುವ ಮೂಲಕ ಜಗಜ್ಯೋತಿ ಆಗಿದ್ದಾರೆ ಎಂದು ಮಾಜಿ ಸಚಿವ ಹಾಲಪ್ಪ ಆಚಾರ್ ಹೇಳಿದರು.

ತಾಲೂಕಿನ ಮಸಬಹಂಚಿನಾಳ ಗ್ರಾಮದಲ್ಲಿ ಬಸವ ಜಯಂತಿ ಅಂಗವಾಗಿ ಜರುಗಿದ ಬಸವೇಶ್ವರ ಭಾವಚಿತ್ರ ಮೆರವಣಿಗೆಯಲ್ಲಿ ಮಾತನಾಡಿದ ಅವರು, ಸಮಾಜದ ಮೌಢ್ಯಗಳನ್ನು ಹೋಗಲಾಡಿಸಲು ಬಸವೇಶ್ವರರು ಕಲ್ಯಾಣದಲ್ಲಿ ಸಮಾನತೆ ಕ್ರಾಂತಿ ಮಾಡಿದರು. ಅನುಭವ ಮಂಟಪದಲ್ಲಿ ಸಮಾಜದಲ್ಲಿ ಸರ್ವ ಶ್ರೇಷ್ಠತೆ ನೀಡುವ ಅನುಭವ ಹಂಚುವ ಮಹನೀಯರಿದ್ದರು. ಅವರ ಅಮೃತಧಾರೆಯಿಂದ ಸಮಾಜ ಇಂದು ಸಮಾನತೆ ಹಾದಿಯಲ್ಲಿ ಹೆಜ್ಜೆಹಾಕುತ್ತಿದೆ ಎಂದರು.ಬಸವಣ್ಣನವರ ವಚನಗಳು ಬಾಳಿಗೆ ಶಕ್ತಿ ನೀಡುವ ಶ್ರೇಷ್ಠತೆ ಹೊಂದಿವೆ. ಕಾಯಕ ಮಾಡಿ ಬದುಕಿದರೆ ಅದುವೇ ಕೈಲಾಸ. ಪ್ರತಿಯೊಬ್ಬರು ಕಾಯಕವೇ ಕೈಲಾಸ ಎಂದು ದುಡಿದು ಬದುಕಿ ಎಂದು ಸಾರಿದರು ಎಂದರು.

ಗ್ರಾಪಂ ಅಧ್ಯಕ್ಷ ಹನುಮಂತ ಬನ್ನಿಕೊಪ್ಪ ಹಾಗೂ ಗ್ರಾಮಸ್ಥರಿದ್ದರು. ಗ್ರಾಮದಲ್ಲಿ ಬಸವೇಶ್ವರ ಮೂರ್ತಿ ಮೆರವಣಿಗೆ ಜರುಗಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೆಂಗಳೂರಲ್ಲಿ ಲಾಲ್‌ಬಾಗ್‌ ಮಾದರಿಯಲ್ಲಿ ಮತ್ತೆರಡು ಪಾರ್ಕ್‌ ನಿರ್ಮಾಣ: ಡಿ.ಕೆ.ಶಿವಕುಮಾರ್
ಸಂಕ್ರಾಂತಿ: ಇಂದು ಗವಿಗಂಗಾಧರನಿಗೆ ಸೂರ್ಯರಶ್ಮಿ ಸ್ಪರ್ಶ