ಕನ್ನಡಪ್ರಭ ವಾರ್ತೆ ಮಂಡ್ಯ
ನಗರದ ಮಿಮ್ಸ್ ಹೆರಿಗೆ ವಾರ್ಡ್ ಆವರಣದ ಮಮತೆಯ ಮಡಿಲು ನಿತ್ಯ ಅನ್ನದಾಸೋಹ ಕೇಂದ್ರದಲ್ಲಿ ಪರಿಸರ ರೂರಲ್ ಡೆವಲಪ್ ಮೆಂಟ್ ಸೊಸೈಟಿ ವತಿಯಿಂದ ನಡೆದ ವಿಶ್ವಗುರು ಶ್ರೀ ಬಸವಣ್ಣರವರ ಜಯಂತ್ಯುತ್ಸವದಲ್ಲಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದರು.
ಬಸವಣ್ಣನವರು ಕೂಡಲಸಂಗಮದಲ್ಲಿ ದೀಕ್ಷೆ ಪಡೆದವರು. ಸಮಾಜದ ಒಳಿತಿಗಾಗಿ ಹೆಣ್ಣು ಗಂಡು ಎಂಬ ಭೇದವಿಲ್ಲದೆ ಜಾತಿ ನಿರ್ಮೂಲನೆ ಮಾಡಬೇಕು ಎಂದು ಹೇಳಿ ಜಾತಿಯಿಂದ ಮನುಕುಲ ನಾಶವಾಗುತ್ತದೆ ಎಂಬುದನ್ನು ತಿಳಿದು ಅಂತರ್ಜಾತಿ ವಿವಾಹ ಮಾಡಿದ ಮಹಾಪುರುಷ ಎಂದರು.ಬಸವಣ್ಣನವರ ಮಾರ್ಗದರ್ಶನ ದಲ್ಲಿ ಡಾ.ಬಿ.ಆ.ಅಂಬೇಡ್ಕರ್ ಅವರು ಸಂವಿಧಾನದಲ್ಲಿ ಎಲ್ಲಾ ಆಶಯಗಳನ್ನು ಅಳವಡಿಸಿದ್ದಾರೆ. ಜಾತಿ ಭೇದವಿಲ್ಲದೆ ಸಮನಾಗಿ, ಏಕತೆಗಾಗಿ ಎಲ್ಲರೂ ದುಡಿಯೋಣ ಎಂದು ತಿಳಿಸಿದರು.
ಕಾಯಕ ಸಿದ್ಧಾಂತವನ್ನೇ ಮೂಲ ಮಂತ್ರವಾಗಿಸಿಕೊಂಡು ಜಗತ್ತಿಗೆ ಸಮಾನತೆಯ ತತ್ವವನ್ನು ಸಾರಿದ ಮಹಾನ್ ಪುರುಷ ಬಸವಣ್ಣ ಅವರ ಆದರ್ಶಗಳನ್ನು ಪ್ರತಿ ಯೊಬ್ಬರು ಅನುಸರಿಸಬೇಕು ಎಂದು ಕಿವಿಮಾತು ಹೇಳಿದರು.
ಪ್ರತಿಯೊಬ್ಬ ನೌಕರರಿಗೂ ಜನರ ಸೇವೆ ಮಾಡಲು ಒಂದು ಅವಕಾಶವಿದೆ: ಚಂದ್ರಶೇಖರ್
ಸರ್ಕಾರಿ ಉದ್ಯೋಗದಲ್ಲಿರುವ ಪ್ರತಿಯೊಬ್ಬ ನೌಕರರಿಗೂ ಜನರ ಸೇವೆ ಮಾಡಲು ಒಂದು ಅವಕಾಶವಿರುತ್ತದೆ. ನನಗೆ ಸಿಕ್ಕ ಅವಕಾಶದಲ್ಲಿ ಸಾಧ್ಯವಾದಷ್ಟು ಜನಸೇವೆ ಮಾಡಿದ್ದೇನೆ ಎಂದು ಭೂ-ದಾಖಲೆಗಳ ಇಲಾಖೆ ಪರ್ಯಾವೇಕ್ಷಕ ಅಧಿಕಾರಿ ಎಸ್.ಎಲ್.ಚಂದ್ರಶೇಖರ್ ಹೇಳಿದರು.
ರೆವಿನ್ಯೂ ಇನ್ಸ್ ಪೆಕ್ಟರ್ ಟಿ.ಪಿ.ರೇವಣ್ಣ ಮಾತನಾಡಿ, ಸರ್ಕಾರಿ ಅಧಿಕಾರಿಗಳು ಸೇವಾ ದಿನಗಳಲ್ಲಿ ನಿತ್ಯ ಒಂದಲ್ಲ ಒಂದು ಒತ್ತಡದಲ್ಲಿರುತ್ತಾರೆ. ನಿವೃತ್ತರಾದ ನಂತರವಾದರೂ ನೆಮ್ಮದಿಯ ಜೀವನ ನಡೆಸಬೇಕು ಎಂದರು.