ಕಲಬುರಗಿ: ವಚನಗಳ ಮೂಲಕ ಸಮಾಜ ಜಾಗೃತಿಗೊಳಿಸಿದ ಶರಣ ಶ್ರೇಷ್ಠ ಆದರ್ಶ ಗುರು ಬಸವಣ್ಣ ನವರಾಗಿದ್ದಾರೆ ಎಂದು ಜಿಲ್ಲಾ ಕಸಾಪ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಹೇಳಿದರು.
ಆರೋಗ್ಯ ಇಲಾಖೆಯ ಹಿರಿಯ ಮೇಲ್ವಿಚಾರಕ ಸುರೇಶ ದೊಡ್ಮನಿ ಮಾತನಾಡಿ, ಸಾಮಾಜಿಕ ತಾರತಮ್ಯ, ಜಾತೀಯತೆ ಹೋಗಲಾಡಿಸಿ, ಸಮ ಸಮಾಜದ ನಿರ್ಮಾಣ ಮಾಡುವ ಮೂಲಕ ಇಡೀ ಮನುಕುಲದ ಶ್ರೇಯಸ್ಸಿಗೆ ದುಡಿದ ಮಹಾನದ ಮಾನವತಾವಾದಿ ಬಸವಣ್ಣನವರು ಎಂದು ಹೇಳಿದರು.
ಹಿರಿಯ ಶರಣ ಸಾಹಿತಿ ಎಸ್.ಎಂ ಧುಲಂಗೆ, ಜಿಲ್ಲಾ ಕಸಾಪದ ರವೀಂದ್ರಕುಮಾರ ಭಂಟನಳ್ಳಿ, ಜಗದೀಶ ಮರಪಳ್ಳಿ, ಶಕುಂತಲಾ ಪಾಟೀಲ ಜಾವಳಿ, ರಜನಿ ಜಮಾದಾರ, ಸುರೇಖಾ ಜೇವರ್ಗಿ, ಸಂತೋಷ ಕುಡಳ್ಳಿ, ಡಾ. ರೆಹಮಾನ್ ಪಟೇಲ್, ಎಂ ಎನ್ ಸುಗಂಧಿ, ಉಮೇಶ ಕೋಟನೂರ, ಧರ್ಮರಾಜ ಜವಳಿ, ವಿಶ್ವನಾಥ ತೊಟ್ನಳ್ಳಿ, ಮಹೇಶ ಚಿಂತನಪಳ್ಳಿ, ಸಂಜೀವಕುಮಾರ ಡೊಂಗರಗಾಂವ, ಗುರುಬಸಪ್ಪ ಸಜ್ಜನಶೆಟ್ಟಿ, ಬಾಬುರಾವ ಪಾಟೀಲ ಚಿತ್ತಕೋಟಾ, ಮಹೇಶ ಜೇವರ್ಗಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.