ಯಳಂದೂರಿನಲ್ಲಿ ಅದ್ಧೂರಿ ಬಸವ ಜಯಂತಿ ಆಚರಣೆ । ಗಣ್ಯರು ಉಪಸ್ಥಿತಿ
ಪಟ್ಟಣದ ಬಸವೇಶ್ವರ ವೃತ್ತದಲ್ಲಿ ನಂದಿಕಂಬಗಳಿಗೆ ಪೂಜೆ ಸಲ್ಲಿಸುವ ಮೂಲಕ ಮೆರವಣಿಗೆಗೆ ಚಾಲನೆ ನೀಡಲಾಯಿತು. ಮೆರವಣಿಗೆಯಲ್ಲಿ ಕಪ್ಪು ಬಣ್ಣದ ಜಲ್ಲಿಕಟ್ಟು ಶನಿಕರ, ಅಲಂಕೃತ ಹಳ್ಳಿಕಾರ್ ಹೋರಿಗಳು, ಮಂಗಳವಾದ್ಯಗಳ ತಂಡ, ವೀರಗಾಸೆ ಕುಣಿತ, ಗೊರುಕನ ನೃತ್ಯತಂಡ, ಡೊಳ್ಳು ಕುಣಿತ, ಅಶ್ವಾರೂಢ ಬಸವೇಶ್ವರ ಪುತ್ಥಳಿ, ಬೆಳ್ಳಿ ರಥದಲ್ಲಿ ಸಾಗಿದ ಬಸವೇಶ್ವರರ ಭಾವಚಿತ್ರ, ವಿವಿಧ ಗ್ರಾಮಗಳಿಂದ ಆಗಮಿಸಿದ್ದ ಭಜನಾ ತಂಡಗಳ ಸಮ್ಮುಖದಲ್ಲಿ ಮೆರವಣಿಗೆ ಕಣ್ಮನ ಸೆಳೆಯಿತು.
ಗುಂಡ್ಲುಪೇಟೆ ಶಾಸಕ ಗಣೇಶ್ ಪ್ರಸಾದ್, ಮಾಜಿ ಶಾಸಕ ಎನ್. ಮಹೇಶ್, ಎಸ್. ಬಾಲರಾಜು, ಜೆಡಿಎಸ್ನ ಪುಟ್ಟಸ್ವಾಮಿ, ಕಾರಾಪುರ ವಿರಕ್ತ ಮಠದ ಬಸವರಾಜಸ್ವಾಮಿ ಒಡೆಯರ್, ಸಾಲೂರು, ಗೌಡಹಳ್ಳಿ, ಹರವೆ, ವಾಟಾಳು, ಮುಡಿಗುಂಡ, ಅಗರಕಲ್ಲು, ಮರಿಯಾಲ, ಗೌಡಹಳ್ಳಿ, ಕುದೇರು, ಹೊನ್ನೂರು ಮಾವಳ್ಳಿ, ಕೆಸ್ತೂರು ಮಠ ಸೇರಿದಂತೆ ವಿವಿಧ ಮಠಗಳ ಸ್ವಾಮೀಜಿಗಳು, ಕಾಡಾ ಅಧ್ಯಕ್ಷ ಮರಿಸ್ವಾಮಿ, ತೋಟೇಶ್, ವೀರಶೈವ ಮಹಾಸಭಾದ ಮೂಡ್ಲುಪುರ ನಂದೀಶ್, ವೀರಶೈವ ಮಹಾಸಭಾದ ಜಿಲ್ಲಾ ಕಾರ್ಯದರ್ಶಿ ಗೌಡಹಳ್ಳಿ ರವಿ, ಬಸವ ಉತ್ಸವ ಸಮಿತಿ ಅಧ್ಯಕ್ಷ ಕೆಸ್ತೂರು ಪುಟ್ಟಸುಬ್ಬಪ್ಪ, ಉಪಾಧ್ಯಕ್ಷ ಶಿವಕುಮಾರ ಸ್ವಾಮಿ, ಕಾರ್ಯದರ್ಶಿ ಕೊಮರನಪುರ ಚಂದ್ರಶೇಖರ್, ಕೆಸ್ತೂರು ಮಹದೇವಸ್ವಾಮಿ, ಯುವ ಘಟಕದ ಅಧ್ಯಕ್ಷ ಮಲ್ಲಿಗೆಹಳ್ಳಿ ಸಂತೋಷ್ ಸೇರಿದಂತೆ ಅನೇಕರು ಇದ್ದರು.---2507ವೈಎಲ್ಡಿಪಿ01ಯಳಂದೂರು ಪಟ್ಟಣದಲ್ಲಿ ಶನಿವಾರ ನಡೆದ ಬಸವ ಉತ್ಸವ ಕಾರ್ಯಕ್ರಮದಲ್ಲಿ ಸುತ್ತೂರು ಶ್ರೀಗಳು ನಂದಿ ಕಂಬಕ್ಕೆ ಪೂಜೆ ಸಲ್ಲಿಸಿ ಮೆರವಣಿಗೆಗೆ ಚಾಲನೆ ನೀಡಿದರು. ಶಾಸಕ ಎ.ಆರ್. ಕೃಷ್ಣಮೂರ್ತಿ ಸೇರಿ ಹಲವರಿದ್ದರು.2507ವೈಎಲ್ಡಿಪಿ02ಯಳಂದೂರು ಪಟ್ಟಣದಲ್ಲಿ ಶನಿವಾರ ನಡೆದ ಬಸವ ಉತ್ಸವ ಕಾರ್ಯಕ್ರಮದಲ್ಲಿ ಅಲಂಕೃತ ವಾಹನಗಳಲ್ಲಿ ಸಾಗಿದ ಬಸವೇಶ್ವರರ ಮೆರವಣಿಗೆ.