ಮತಗಟ್ಟೆಗಳಿಗೆ ಮೂಲ ಸೌಲಭ್ಯ ಕಲ್ಪಿಸಬೇಕು: ತಾ.ಪಂ. ಇಒ

KannadaprabhaNewsNetwork |  
Published : Mar 20, 2024, 01:15 AM IST
ಅಫಜಲ್ಪುರ ಪಟ್ಟಣದ ತಾಲೂಕು ಪಂಚಾಯತ ಸಭಾಂಗಣದಲ್ಲಿ ಲೋಕಸಭೆ ಚುನಾವಣೆ ಅಂಗವಾಗಿ ತಾಲೂಕು ಪಂಚಾಯತ ಕಾರ್ಯ ನಿರ್ವಾಹಕ ಅಧಿಕಾರಿ ವೀರಣ್ಣ ಕವಲಗಿ ಅವರ  ಅಧ್ಯಕ್ಷತೆಯಲ್ಲಿ ಪೂರ್ವ ಭಾವಿ  ಸಭೆ ಜರುಗಿತು  | Kannada Prabha

ಸಾರಾಂಶ

ಪ್ರತಿ ಮತಗಟ್ಟೆಯಲ್ಲಿ ಟೇಬಲ್ ಕುರ್ಚಿ ಕುಡಿಯುವ ನೀರು, ಸ್ವಚ್ಛತೆ ವಿದ್ಯುತ್ ಸೌಲಭ್ಯ ಶೌಚಾಲಯ ವ್ಯವಸ್ಥೆ ರ್ಯಾಂಪ್ ವ್ಯವಸ್ಥೆ,ಸೇರಿದಂತೆ ಇತರೆ ಮೂಲ ಸೌಲಭ್ಯಗಳು ಮತಗಟ್ಟೆಗಳ ಕೊಠಡಿಗಳಿಗೆ ಒದಗಿಸಬೇಕು.

ಕನ್ನಡಪ್ರಭ ವಾರ್ತೆ ಅಫಜಲ್ಪುರ

ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ತಾಲೂಕಿನ ಪ್ರತಿಯೊಂದು ಗ್ರಾಮ ಪಂಚಾಯತಿ ವತಿಯಿಂದ ಮತಗಟ್ಟೆಗಳಿಗೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು ಎಂದು ತಾಲೂಕು ಪಂಚಾಯತ ಕಾರ್ಯ ನಿರ್ವಾಹಕ ಅಧಿಕಾರಿ ವೀರಣ್ಣ ಕವಲಗಿ ಹೇಳಿದರು.

ಅವರು ಪಟ್ಟಣದ ತಾಲೂಕು ಪಂಚಾಯತ ಸಭಾಂಗಣದಲ್ಲಿ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಆಯೋಜಿಸಿದ್ದ ಪೂರ್ವ ಭಾವಿ ಸಭೆಯಲ್ಲಿ ಮಾತನಾಡಿ ಪ್ರತಿ ಮತಗಟ್ಟೆಯಲ್ಲಿ ಟೇಬಲ್ ಕುರ್ಚಿ ಕುಡಿಯುವ ನೀರು, ಸ್ವಚ್ಛತೆ ವಿದ್ಯುತ್ ಸೌಲಭ್ಯ ಶೌಚಾಲಯ ವ್ಯವಸ್ಥೆ ರ್ಯಾಂಪ್ ವ್ಯವಸ್ಥೆ,ಸೇರಿದಂತೆ ಇತರೆ ಮೂಲ ಸೌಲಭ್ಯಗಳು ಮತಗಟ್ಟೆಗಳ ಕೊಠಡಿಗಳಿಗೆ ಒದಗಿಸಬೇಕು. ಬೇಸಿಗೆ ಕಾಲ ಇರುವುದರಿಂದ ಮತದಾರರ ಸರದಿ ಹೆಚ್ಚಾದಲ್ಲಿ ನೆರಳಿನ ಕೊರತೆಯಾದರೆ ಶ್ಯಾಮಿಯಾನದ ವ್ಯವಸ್ಥೆ ಒದಗಿಸಬೇಕು. ಸಣ್ಣ ಪುಟ್ಟ ಯಾವುದೇ ರಿಪೇರಿ ಗಳಿದ್ದರೆ ಗಮನಕ್ಕೆ ತಂದು ಸರಿಪಡಿಸಿಕೊಳ್ಳಬೇಕು ಎಂದು ಹೇಳಿದರು ಈ ಸಂದರ್ಭದಲ್ಲಿ ಸಹಾಯಕ ನಿರ್ದೇಶಕ ರಮೇಶ ಪಾಟೀಲ ಕ್ಷೇತ್ರ ಶಿಕ್ಷಣಾಧಿಕಾರಿ ಹಾಜಿಮಲಂಗ ಇಂಡಿಕರ ಸೇರಿದಂತೆ ಅಭಿಯಂತರರು ಅಭಿವೃದ್ಧಿ ಅಧಿಕಾರಿಗಳು ಸಿ ಆರ್ ಪಿ ಬಿ ಆರ್ ಸಿ ಸೇರಿದಂತೆ ಸರ್ಕಾರಿ ಶಾಲೆಗಳ ಮುಖ್ಯ ಗುರುಗಳಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅನಕ್ಷರತೆ ಬಾಲ್ಯ ವಿವಾಹ ಕೇಸ್‌ ರದ್ದತಿಗೆ ಆಧಾರವಾಗದು: ಕೋರ್ಟ್‌
ಕೆಎಸ್‌ಡಿಎಲ್‌ನಿಂದ ₹400ನ ಮಲ್ಲಿಗೆ ಸೋಪ್‌!