ಕನ್ನಡಪ್ರಭ ವಾರ್ತೆ ಉಡುಪಿ
ಸಂಘದ ಅಧ್ಯಕ್ಷ ಉಮೇಶ್ ಆಚಾರ್ಯ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿ, ಈ ಮಹೋತ್ಸವದಲ್ಲಿ ಗೋವಾದ ಮುಖ್ಯಮಂತ್ರಿ ಡಾ.ಪ್ರಮೋದ್ ಪಾಂಡುರಂಗ ರಾವ್ ಸಾವಂತ್ ಗೌರವ ಅತಿಥಿಯಾಗಿ ಭಾಗವಹಿಸಲಿದ್ದು, ದೇವಸ್ಥಾನದ ಆಡಳಿತ ಮೊಕ್ತೇಸರ ಬಿ. ಅಪ್ಪಣ್ಣ ಹೆಗ್ಡೆ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.
ಪುಣೆಯ ಭಾರತೀಯ ಸಂತಸಭಾದ ಸಂಘಟನಾ ಪ್ರಧಾನ ಕಾರ್ಯದರ್ಶಿ ಡಾ.ಸಂದೀಪ್ ರಾಜ್ ಮಹಾದೇವರಾವ್ ಮಹಿಂದ್, ಮೂಡ್ಲಕಟ್ಟೆ ಐಎಂಜೆ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ಸಿದ್ದಾರ್ಥ ಶೆಟ್ಟಿ ಭಾಗವಹಿಸಲಿದ್ದಾರೆ. ಕೊಡಗಿನ ರಾಷ್ಟ್ರೀಯವಾದಿ ನಾಟಕಕಾರ ಅಡ್ಡಂಡ ಸಿ. ಕಾರ್ಯಪ್ಪ ದಿಕ್ಸೂಚಿ ಭಾಷಣ ಮಾಡಲಿದ್ದಾರೆ.ಬೆಳಗ್ಗೆ 9 ಗಂಟೆಗೆ ದೇವಸ್ಥಾನದಲ್ಲಿ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ, ಮಧ್ಯಾಹ್ನ 11.30ಕ್ಕೆ ದಾರ್ಮಿಕ ಸಭೆಯಲ್ಲಿ ಕಜಂಪಾಡಿ ಸುಬ್ರಹ್ಮಣ್ಯ ಭಟ್ ಪ್ರವಚನ ನೀಡಲಿದ್ದಾರೆ. ಮಧ್ಯಾಹ್ನ 3 ಗಂಟೆಗೆ ಗಂಗೊಳ್ಳಿಯಿಂದ ಹಡಗಿನಲ್ಲಿ ಹೊರಟು, ಬಸ್ರೂರು ಹೊಳೆಬಾಗಿಲಿಗೆ ಬಂದು, ಅಲ್ಲಿಂದ ದೇವಸ್ಥಾನದವರೆಗೆ ಭವ್ಯ ಶೋಭಾಯಾತ್ರೆ ನಡೆಯಲಿದೆ. ನಂತರ 5.30ರಿಂದ ಸಭಾ ಕಾರ್ಯಕ್ರಮ ನಡೆಯಲಿದೆ ಎಂದು ಹೇಳಿದರು.
................ಶಿವಾಜಿ 88 ಯುದ್ಧ ನೌಕೆಗಳೊಂದಿಗೆ ವಸುಪುರಕ್ಕೆ ಬಂದಿದ್ದ! 1525ರಲ್ಲಿ ವ್ಯಾಪಾರಕ್ಕಾಗಿ ಆಗಮಿಸಿದ ಡಚ್ಚರು ಮತ್ತು ಪೋರ್ಚುಗೀಸರು ವಸುಪುರ (ಈಗಿನ ಕುಂದಾಪುರ ತಾಲೂಕಿನ ಬಸ್ರೂರು) ಮತ್ತು ಸುತ್ತಲಿನ ಪ್ರದೇಶ ಅತಿಕ್ರಮಿಸಿಕೊಂಡರು. ಅವರನ್ನು ಎದರಿಸಲು ಸಾಧ್ಯವಾಗದ ಇಲ್ಲಿನ ಕೆಳದಿಯ ಸಾವಂತರು ಛತ್ರಪತಿ ಶಿವಾಜಿಯ ಸಹಾಯ ಯಾಚಿಸಿದರು.
500 ವರ್ಷಗಳಷ್ಟು ಹಿಂದೆಯೇ ಶಿವಾಜಿಯು ನೌಕ ಶಾಸ್ತ್ರ ಮತ್ತು ಸಮುದ್ರ ಯುದ್ಧದಲ್ಲಿ ತಜ್ಞನಾಗಿದ್ದು, ಆತನ ಈ ಸಾಹಸದ ಬಗ್ಗೆ ಡಾ.ಸಂದೀಪ್ರಾಜ್ ಮಹಾದೇವರಾವ್ ಮಹಿಂದ್ ಅವರು ಅಧ್ಯಯನ ಮಾಡಿದ್ದು, ದಾಖಲೆಗಳನ್ನು ಸಂಗ್ರಹಿಸಿದ್ದಾರೆ.